Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸಂವಿಧಾನ ದೇಶದ ಪರಿಶುದ್ಧ ಆತ್ಮ; ಹಿರಿಯ ಪತ್ರಕರ್ತ ಕೆ.ಪಿ.ನಾಗರಾಜ್

---Advertisement---

 

ಸುದ್ದಿಒನ್, ಮೈಸೂರು, ಜನವರಿ. 26 : ಸಂವಿಧಾನ ಕಾನೂನು ಕಟ್ಟಳೆಯ ಪುಸ್ತಕವಲ್ಲ. ಅದು ಈ ದೇಶದ ಪರಿಶುದ್ಧವಾದ ಆತ್ಮ ಎಂದು ಪಬ್ಲಿಕ್ ಟಿವಿ ಮೈಸೂರು ವಿಭಾಗದ ಬ್ಯೂರೋ ಮುಖ್ಯಸ್ಥ ಕೆ.ಪಿ.ನಾಗರಾಜ್ ತಿಳಿಸಿದರು.

ನಗರದ ಡಿಎವಿ ಶಾಲೆಯ ಆವರಣದಲ್ಲಿ ಭಾನುವಾರ 76ನೇ ಗಣರಾಜ್ಯ ದಿನಾಚರಣೆಯಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಸಂವಿಧಾನದಂತಹ ಪರಿಶುದ್ಧ ಆತ್ಮವನ್ನು ನಮಗೆ ಕೊಟ್ಟ ಡಾ.ಬಿ.ಆರ್.ಅಂಬೇಡ್ಕರ್ ಸದಾ ಸ್ಮರಣೀಯರು. ಈ ದೇಶದ ಅಭಿವೃದ್ಧಿಗೆ ಸಂವಿಧಾನದ ಮುಖ್ಯ ಕಾರಣವಾಗಿದೆ. ಇದನ್ನು ಸದಾ ನೆನಪಿನಲ್ಲಿಟ್ಟು ಕೊಳ್ಳಬೇಕು ಎಂದರು.

ಒಂದು ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಆತ್ಮದ ರೂಪದ ಸಂವಿಧಾನವನ್ನು ದೇಶಕ್ಕೆ ಕೊಡದೇ ಇದ್ದಿದ್ದರೆ ಇಂದು ನಾವುಗಳು ಇಂತಹದೊಂದು ಉತ್ತಮವಾದ ಸಮಾಜದಲ್ಲಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಜತೆ ಇದ್ದು ಪ್ರತ್ಯೇಕವಾಗಿ ಸ್ವಾತಂತ್ರ್ಯವಾದ ಪಾಕಿಸ್ತಾನವನ್ನು ನಾವು ನೋಡಬಹುದು. ಆ ದೇಶದಲ್ಲಿ ಒಬ್ಬ ಅಂಬೇಡ್ಕರ್ ಹುಟ್ಟಲಿಲ್ಲ. ಆ ಕಾರಣಕ್ಕೆ ಅಲ್ಲಿ ಅರಾಜಕತೆ ಸೃಷ್ಟಿಯಾಗಿದೆ ಎಂದು ಹೇಳಿದರು.

ನಾವು, ನೀವುಗಳು ಗಮನಿಸಿದಂತೆ ಆ ದೇಶದಲ್ಲಿ ಒಂದು ಶಿಸ್ತಿಲ್ಲ. ಸರ್ವಾಧಿಕಾರವಿದೆ. ಆದರೆ ನಮ್ಮ ದೇಶದಲ್ಲಿ ಶಿಸ್ತು, ಪ್ರಜಾಪ್ರಭುತ್ವ, ಶಾಂತಿಯಿದೆ. ಅದಕ್ಕೆ ಕಾರಣ ಅಂಬೇಡ್ಕರ್. ಒಂದು ವೇಳೆ ಸ್ವಾತಂತ್ರ್ಯ ನಂತರ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡದೇ ಇದ್ದಿದ್ದರೆ ನಾವು ಇನ್ನೊಂದು ಸುತ್ತಿನ ಪರಕೀರ ಆಡಳಿತಕ್ಕೆ ಒಳಗಾಗಿದ್ದರು ಅಚ್ಚರಿ ಪಡುವಂತಿರಲಿಲ್ಲ ಎಂದರು.

ಈ ದೇಶದಲ್ಲಿ ಪ್ರತಿಯೊಬ್ಬ ಪ್ರಜೆಯೂ ಒಂದೇ. ಇದನ್ನು ಸಾಧ್ಯವಾಗಿಸಿರುವುದು ನಮ್ಮ ನಿಮ್ಮೇಲ್ಲರ ಹೆಮ್ಮೆ ಡಾ.ಬಿ.ಆರ್.ಅಂಬೇಡ್ಕರ್ ನೀಡಿದ ಸಂವಿಧಾನ. ಈ ಎಲ್ಲ ಕಾರಣಕ್ಕೆ ಅಂಬೇಡ್ಕರ್ ಹಾಗೂ ಸಂವಿಧಾನವನ್ನು ಸದಾ ಗೌರವಿಸಬೇಕು. ಇದು ನಮ್ಮ ಆತ್ಮವಾಗಬೇಕು ಎಂದು ತಿಳಿಸಿದರು.
ದೇಶಭಕ್ತಿಗೀತೆಯನ್ನು ಪ್ರತಿಬಿಂಬಿಸುವ ನೃತ್ಯ, ಗೀತೆ, ಭಾಷಣಗಳನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಶಾಲೆಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಸಿಇಒ ಜಯಶ್ರೀ ಎಸ್.ಮೂರ್ತಿ, ಪ್ರಾಂಶುಪಾಲರಾದ ಶೋಭ, ಉಪಪ್ರಾಂಶುಪಾಲರಾದ ಕಾವ್ಯ ಬಸಪ್ಪ, ಮುಖ್ಯೋಪಾಧ್ಯಾಯಿನಿ ಬಿಂದುಶ್ರೀ ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...