Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ತಲೆನೋವು ಸದಾ ಕಾಡುತ್ತಾ..? ಈ ಮನೆ ಮದ್ದನ್ನ ಟ್ರೈ ಮಾಡಿ ಸಾಕು

---Advertisement---

ಹಲವರಿಗೆ ಇದ್ದಕ್ಕಿದ್ದ ಹಾಗೇ ತಲೆ ನೋವು ಬರುತ್ತೆ. ಮಾತ್ರೆಗಳಿಗೆ ಅಂತವರು ಅಡಿಕ್ಟ್ ಆಗಿರುತ್ತಾರೆ. ಆದರೆ ಮಾತ್ರೆ ತೆಗೆದುಕೊಳ್ಳುವುದು ಸದಾ ಕಾಲ ಒಳ್ಳೆಯದಲ್ಲ. ತೀರಾ ಆಗ್ತಾನೇ ಇಲ್ಲ ಎಂದಾಗ ಮಾತ್ರೆಗಳ ಮೊರೆ ಹೋಗಬಹುದು. ಹಾಗಾದ್ರೆ ಮಾತ್ರೆಗಳಿಲ್ಲದೆ ತಲೆ ನೋವನ್ನ ಕಡಿಮೆ ಮಾಡಿಕೊಳ್ಳುವುದೇಗೆ ಗೊತ್ತಾ..? ಇಲ್ಲಿದೆ ನೋಡಿ ಒಂದಷ್ಟು ಸಿಂಪಲ್ ಟ್ರಿಕ್ಸ್.

* ಸ್ವಲ್ಪೇ ಸ್ವಲ್ಪ ತುಪ್ಪವನ್ನ ತೆಗೆದುಕೊಳ್ಳಿ. ಒಂದು ಕರ್ಪೂರವನ್ನ ತೆಗೆದುಕೊಂಡು, ತುಪ್ಪದಲ್ಲಿ ತೇಯಬೇಕು. ಎರಡು ಚೆನ್ನಾಗಿ ಮಿಕ್ಸ್ ಆದ ಬಳಿಕ, ಅದನ್ನ ಹಣೆಗೆ ಹಚ್ಚಬೇಕು. ಹೀಗೆ ಮಾಡುವುದರಿಂದ ಆ ಕರ್ಪೂರದ ವಾಸನೆ ಹಾಗೂ ತುಪ್ಪದ ವಾಸನೆಯಿಂದಾಗಿ ತಲೆ ನೋವು ಕಡಿಮೆಯಾಗುತ್ತದೆ.

* ಈ ತಲೆನೋವು ಕೆಲವೊಂದು ಸಲ ಹಲವು ಕಾರಣಗಳಿಗೆ ಬರುತ್ತದೆ. ಶೀತಕ್ಕೆ ಬರುತ್ತೆ, ಯೋಚನೆ ಮಾಡಿದರೆ ಮೈಗ್ರೇನ್ ಇದ್ದವರಿಗೆ ಮಾಡುತ್ತದೆ. ಹೀಗಾಗಿ ಈ ತುಪ್ಪದ ಬಳಕೆ ಆ ಎಲ್ಲಾ ಸಮಸ್ಯೆಗೆ ಪರಿಹಾರ ನೀಡುತ್ತದೆ. ತುಪ್ಪದ ವಾಸನೆಯಿಂದ ತಲೆನೋವು ಬಿಟ್ಟು ಹೋಗುತ್ತದೆ.

* ಬಜೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಲ್ವಾ. ಆ ಬಜೆಯನ್ನ ಪೌಡರ್ ಮಾಡಿಕೊಂಡು ವಾಸನೆ ನೋಡುವುದರಿಂದಾನೂ ತಲೆ ನೋವು ಮಾಯವಾಗುತ್ತದೆ. ಅಥವ ಬಜೆಯನ್ನು ನಡುವೆ ಕಟ್ ಮಾಡಿದರೂ ಅದರಿಂದಾನೂ ವಾಸನೆ ನೋಡಬಹುದು.

* ತಲೆ‌ನೋವು ಕಡಿಮೆನೇ ಆಗ್ತಾ ಇಲ್ಲ ಎಂಬ ಚಿಂತೆ ಇರುವವರು ಇನ್ನೊಂದು ಮನೆ ಮದ್ದನ್ನು ಟ್ರೈ ಮಾಡಬಹುದು. ಹೇಗಪ್ಪ ಅಂದ್ರೆ ಒಂದು ಟೇಬಲ್ ಸ್ಪೂನ್ ತುಪ್ಪಕ್ಕೆ ಒಂದು ಟೇಬಲ್ ಸ್ಪೂನ್ ಬೆಲ್ಲವನ್ನು ಬೆರೆಸಿ, ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಅದನ್ನ ಖಾಲಿ ಹೊಟ್ಟೆಗೆ ಸೇವಿಸುತ್ತಾ ಬಂದರು, ಹಲವು ದಿನಗಳಿಂದ ಇರುವ ತಲೆ ನೋವು ಕಡಿಮೆಯಾಗುತ್ತದೆ.

(ಈ ಎಲ್ಲಾ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಿರುವ ಮಾಹಿತಿಯಾಗಿದೆ. ಒಮ್ಮೆ ವೈದ್ಯರನ್ನು ಸಂಪರ್ಕಿಸಿ, ಸಲಹೆ ಪಡೆದು ಬಳಸಿ)

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment