Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಲೋಕ ಚುನಾವಣೆ ನಂತರ ಕಾಂಗ್ರೆಸ್ ನವರು ಅಯೋಧ್ಯೆಗೆ ಬರ್ತಾರೆ : ಶೋಭಾ ಕರಂದ್ಲಾಜೆ

---Advertisement---

 

 

ಉಡುಪಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಸಿದ್ಧತೆ ನಡೆದ ಬೆನ್ನಲ್ಲೇ ರಾಜ್ಯದ ಉಡುಪಿ ಶ್ರೀಕೃಷ್ಣ ಮಠದಲ್ಲೂ ಸಿದ್ಧತೆಗಳು ನಡೆಯುತ್ತಿವೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೃಷ್ಣಮಠದಲ್ಲಿ ಸ್ವಚ್ಛತೆ ಮಾಡಿ, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.

ರಾಮ ಎಲ್ಲರ ದೇವರು. ರಾಮನಿಗೆ ಜಾತಿ ಇಲ್ಲ. ರಾಮನಿಗೆ ಧರ್ಮ ಇಲ್ಲ. ಧರ್ಮ ಜಾತಿಯನ್ನು ಹೊರತುಪಡಿಸಿ ಈ ದೇಶದಲ್ಲಿ ರಾಮನನ್ನು ಆರಾಧನೆ ಮಾಡಬಹುದು. ಇಂಡೋನೇಷ್ಯಾ ಒಂದು ಮುಸಲ್ಮಾನರ ದೇಶ. ಆದರೆ ಅಲ್ಲಿ ರಾಮನ ಹೆಸರನ್ನು ಮಹಾಭಾರತದಲ್ಲಿರುವ ಮಹಾಪುರುಷರ ಹೆಸರುಗಳನ್ನು ಅಲ್ಲಿರುವ ಮಕ್ಕಳಿಗೆ ಇಡುತ್ತಾರೆ. ರಾಮನ ಕಥನ ನಡೆಯುತ್ತೆ. ಮುಸಲ್ಮಾನರ ದೇಶದಲ್ಲೂ ರಾಮಯಣ ನಡೆಯುತ್ತೆ, ಅದನ್ನ ಅಧ್ಯಯನ ಮಾಡುತ್ತಾರೆ. ಆದರೆ ನಮ್ಮ ದೇಶದಲ್ಲಿ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ, ಒಂದು ವರ್ಗದ ಮತೀಯ ಜನರನ್ನು ಒಲೈಕೆ ಮಾಡುವ ಕಾರಣಕ್ಕಾಗಿ ರಾಮನನ್ನು ತಿರಸ್ಕಾರ ಮಾಡುವಂತ, ಅಯೋಧ್ಯೆಯ ವಿರುದ್ಧ ಮಾತನಾಡುವಂತ ಒಂದು ಮಾನಸಿಕತೆ ನಿರ್ಮಾಣವಾಗಿದೆ.

 

ಇದು ಕೇವಲ ವೋಟ್ ಬ್ಯಾಂಕ್ ಗಾಗಿ ಎಂಬುದು ತಿಳಿಯುತ್ತೆ. ಯಾಕಂದ್ರೆ ಅವರ ಮನೆಗೆ ಹೋದರೆ ರಾಮನನ್ನು, ಕೃಷ್ಣನನ್ನು, ಶಿವನನ್ನು ಪೂಜೆ ಮಾಡುತ್ತಾರೆ. ಮನೆಯಿಂದ ಹೊರಗೆ ಹೋದರೆ ವೋಟ್ ಬೇಕು. ವೋಟ್ ಎಲ್ಲಿ ನಷ್ಟವಾಗುತ್ತೆ ಅಂತ ಬೇರೆ ಬೇರೆ ರಾಜಕೀಯ ಪಾರ್ಟಿಗಳು ಮಾಡುತ್ತಿದ್ದಾರೆ.

ಕಾಂಗ್ರೆಸ್ ನಾಯಕರು, ರಾಹುಲ್ ಗಾಂಧಿ ಸೇರಿ ಚುನಾವಣೆ ಬಂದಾಗ ಮಂದಿರ ಸುತ್ತುತ್ತಾರೆ. ಇಂಥ ಸಂದರ್ಭದಲ್ಲಿ, ಭವ್ಯವಾದ ದೇವಸ್ಥಾನ ಉದ್ಘಾಟನೆಯ ಸಂದರ್ಭದಲ್ಲಿ ಅದನ್ನು ತಿರಸ್ಕಾರ ಮಾಡುವುದನ್ನು ಮಾಡುತ್ತಾರೆ. ಇದನ್ನು ದೇಶದ ಜನ ಅರ್ಥ ಮಾಡಿಕೊಳ್ಳುತ್ತಾ ಇದ್ದಾರೆ. ಕಾಂಗ್ರೆಸ್ ಪಕ್ಷದ ಹಲವರಿಗೆ ರಾಮ ಮಂದಿರ ಉದ್ಘಾಟನೆಗೆ ಬರಬೇಕೆಂಬ ಆಸೆಯಿದ್ದರು ಕೂಡ ರಾಜಕೀಯದ ಕಾರಣದಿಂದಾಗಿ ದೂರ ಸರಿಯುತ್ತಾ ಇದ್ದಾರೆ. ಲೋಕಸಭಾ ಚುನಾವಣೆ ಬಳಿಕ ಎಲ್ಲರು ರಾಮಮಂದಿರಕ್ಕೆ ಭೇಟಿ ಕೊಟ್ಟೆ ಕೊಡುತ್ತಾರೆ, ದರ್ಶನ ಮಾಡಿಯೇ ಮಾಡುತ್ತಾರೆಂಬ ವಿಶ್ವಾಸ ಇದೆ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment