ತಾಲೂಕು ಮಟ್ಟ, ಬೂತು ಮಟ್ಟದಲ್ಲೂ ಪೇ ಸಿಎಂ ಅಭಿಯಾನಕ್ಕೆ ಕಾಂಗ್ರೆಸ್ ಚಿಂತನೆ..!

1 Min Read

ಬೆಂಗಳೂರು: ಕಾಂಗ್ರೆಸ್ ಪಕ್ಷ ಪೇ ಸಿಎಂ ಅಭಿಯಾನವನ್ನು ಇದೀಗ ದೊಡ್ಡಮಟ್ಟದಲ್ಲಿ ಮಾಡುವ ಫ್ಲ್ಯಾನ್. ನಗರದಲ್ಲಷ್ಟೇ ಆರಂಭವಾಗಿದ್ದ ಪೇ ಸಿಎಂ ಅಭಿಯಾನವನ್ನು ಜಿಲ್ಲಾ ಮಟ್ಟ, ತಾಲೂಕು ಮಟ್ಟ, ಬೂತ್ ಮಟ್ಟಕ್ಕೂ ಕೊಂಡೊಯ್ಯುವ ಯೋಜನೆ ನಡೆದಿದೆಯಂತೆ.

ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಸೂಚನೆ ನೀಡಿದ್ದಾರಂತೆ. ಗ್ರಾಮ ಪಂಚಾಯತಿ ಹಾಗೂ ಬೂತ್ ಮಟ್ಟದಲ್ಲಿ ಪೇ ಸಿಎಂ ಅಭಿಯಾನ ನಡೆಯಬೇಕು ಎಂದು ಗ್ರಾಮ ಪಂಚಾಯತಿ ಹಾಗೂ ಬೂತ್ ಮಟ್ಟದ ಕಾರ್ಯಕರ್ತರಿಗೆ ಡಿಕೆಶಿ ಸೂಚನೆ ನೀಡಿದ್ದಾರಂತೆ.

ಸದ್ಯ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಅಭಿಯಾನ ನಡೆಯುತ್ತಿದೆ. ಇದರ ಜೊತೆ ಜೊತೆಗೆ ಪೇ ಸಿಎಂ ಅಭಿಯಾನವನ್ನು ನಡೆಸಬೇಕು ಎಂದು ಸೂಚನೆ ನೀಡಿದ್ದಾರಂತೆ. ಈ ಸಂಬಂಧ ಲಿಖಿತ ರೂಪದಲ್ಲಿ ಆದೇಶ ಹೊರಡಿಸಿದ್ದಾರೆ ಎನ್ನಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *