ಶಾಸಕ ಬಿ.ಜಿ ಗೋವಿಂದಪ್ಪ ವಿರುದ್ಧ ದೂರು

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಆ. 23 : ವಿ.ವಿ. ಸಾಗರ ಜಲಾಶಯದ ಗೇಟ್‍ನ್ನೂ ತಾವೇ ಮುಂದೆ ನಿಂತು ಓಪನ್ ಮಾಡಿಸಿದ ಹೊಸದುರ್ಗ ಶಾಸಕರು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಹೀಗೆ ಆದರೆ ಕಾನೂನು ಸುವ್ಯವಸ್ಥೆ ಮೇಲೇ ಹೊಡೆತ ಬೀಳಲಿದೆ.ಇದಕ್ಕೆ ಸಂಬಂಧ ಪಟ್ಟಂತೆ ಡಿ.ಸಿ.ಯವರು ಅದಿಕಾರ ಹೊಂದಿದ್ದಾರೆ ಆದ್ರೆ ಶಾಸಕರು ತಾವೇ ಮುಂದೆ ನಿಂತು ಓಪನ್ ಮಾಡಿಸಿದ್ದು ಅತ್ಯಂತ ದುರದೃಷ್ಟಕರ ಎಂದು ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಈ ಸಂದರ್ಭದಲ್ಲಿ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಕಸವನಹಳ್ಳಿ ರಮೇಶ್ ನಿರ್ದೇಶಕರಾದ ಪಿಟ್ಲಲ್ಲಿ ಶ್ರೀನಿವಾಸ್, ಆರ್.ಕೆ ಗೌಡ್ರು, ಕುಂಚಿಟಿಗರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಎ. ವಿ.ಕೊಟ್ಟೆಗೆ ಕೆ.ಜಿ ಗೌಡ್ರು,ಶಶಿಕಲಾ ಗ್ರಾ, ಪ,ಸದಸ್ಯೆ,ರುದ್ರೇಶ್ ಚಲುವಾದಿ,ಸತೀಶ್, ಇದ್ದರು.

Share This Article
Enable Notifications OK No thanks