ಚಿತ್ರದುರ್ಗದ ಯೂನಿಯನ್ ಪಾರ್ಕಿಗೆ ಕಾಂ. ಜಿ.ಚಂದ್ರಣ್ಣನವರ ಹೆಸರಿಡುವಂತೆ ಭಾರತ ಕಮ್ಯುನಿಸ್ಟ್ ಪಕ್ಷ ಒತ್ತಾಯ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್.26 :  ಕಾರ್ಮಿಕ ಮುಖಂಡರೆಂದೆ ಗುರುತಿಸಿಕೊಂಡಿದ್ದ ದಿವಂಗತ ಕಾಂ. ಜಿ.ಚಂದ್ರಣ್ಣನವರ ಹೆಸರನ್ನು ಯೂನಿಯನ್ ಪಾರ್ಕಿಗೆ ನಾಮಕರಣ ಮಾಡುವಂತೆ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ ಜಿಲ್ಲಾ ಮಂಡಳಿಯಿಂದ ನಗರಸಭೆ ಪೌರಾಯುಕ್ತರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ನಗರಸಭೆಗೆ ಆಗಮಿಸಿದ ಕಾರ್ಮಿಕ ಮುಖಂಡರುಗಳು ಹುಟ್ಟು ಹೋರಾಟಗಾರರಾಗಿದ್ದ ಕಾಂ.ಜಿ.ಚಂದ್ರಣ್ಣನವರು ನಗರಸಭೆ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅನೇಕ ಗುರುತರ ಕೆಲಸಗಳನ್ನು ಮಾಡಿದ್ದಾರೆ. ಅವರ ಹೆಸರು ಶಾಶ್ವತವಾಗಿ ಉಳಿಯಬೇಕಾಗಿರುವುದರಿಂದ ಯೂನಿಯನ್ ಪಾರ್ಕಿಗೆ ಜಿ.ಚಂದ್ರಣ್ಣನವರ ಹೆಸರಿಡಬೇಕು. ನಗರದ ಯಾವ ರಸ್ತೆಗೂ ಕಾರ್ಮಿಕ ನಾಯಕರ ಹೆಸರಿಟ್ಟಿಲ್ಲ ಎಂದು ನಗರಸಭೆ ಪೌರಾಯುಕ್ತರ ಗಮನಕ್ಕೆ ತಂದರು.

1985 ರಿಂದ 87 ರವರೆಗೆ ಎರಡು ವರ್ಷಗಳ ಕಾಲ ಚಿತ್ರದುರ್ಗ ನಗರಸಭೆ ಅಧ್ಯಕ್ಷರಾಗಿದ್ದ ಜಿ.ಚಂದ್ರಣ್ಣನವರು ತಮ್ಮ ಅಧಿಕಾರವಧಿಯಲ್ಲಿ ಐದು ಸಾವಿರ ಗಿಡಗಳನ್ನು ನಗರದಲ್ಲಿ ನೆಡೆಸಿ ಹಸಿರು ಪರಿಸರಕ್ಕೆ ಒತ್ತು ಕೊಟ್ಟು ಎರಡನೆ ಭೀಮಪ್ಪನಾಯಕ ಎಂದೆ ಹೆಸರು ಪಡೆದಿದ್ದರು. ಆದ್ದರಿಂದ ಯೂನಿಯನ್ ಪಾರ್ಕಿಗೆ ದಿವಂಗತ ಕಾಂ.ಜಿ.ಚಂದ್ರಣ್ಣವರ ಹೆಸರಿಡುವುದು ಸೂಕ್ತ ಎಂದು ಪೌರಾಯುಕ್ತರಲ್ಲಿ ಸಿ.ಪಿ.ಐ. ಜಿಲ್ಲಾ ಕಾರ್ಯದರ್ಶಿ ಕಾಂ.ಜಿ.ಸಿ.ಸುರೇಶ್‍ಬಾಬು ವಿನಂತಿಸಿದರು.

ಕಾಂ.ಸಿ.ವೈ.ಶಿವರುದ್ರಪ್ಪ, ಕಾಂ. ಬಿ.ಬಸವರಾಜಪ್ಪ, ಕಾಂ.ಟಿ.ಆರ್.ಉಮಾಪತಿ, ಕಾಂ.ದೊಡ್ಡುಳ್ಳಾರ್ತಿ ಕರಿಯಣ್ಣ, ಕಾಂ.ಸತ್ಯಕೀರ್ತಿ, ಕಾಂ.ಹನುಮಂತಪ್ಪ, ಕಾಂ.ಚಂದ್ರಪ್ಪ, ಕಾಂ.ಎಂ.ಬಿ.ಜಯದೇವಮೂರ್ತಿ, ಕಾಂ.ತಿಪ್ಪೇಸ್ವಾಮಿ, ಕಾಂ.ರವಿಕುಮಾರ್ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *