Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಿಎಂ ಪತ್ನಿ ಪಾರ್ವತಿ ಅವರ ಕೊರಳಿಗೆ ಸುತ್ತಿಕೊಳ್ತು ಇನ್ನೊಂದು ಹಗರಣ..!

Facebook
Twitter
Telegram
WhatsApp

 

ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೂ ಮೂಡಾ ಹಗರಣಕ್ಕೂ ಅದ್ಯಾಕೋ ಸಂಬಂಧವೇ ಕಳೆದುಹೋಗುತ್ತಿಲ್ಲ. ಈಗಾಗಲೇ ಮೂಡಾದಿಂದ ಪಡೆದ ನಿವೇಶನಗಳನ್ನು ವಾಪಾಸ್ ಪಡೆದಿದ್ದಾರೆ. ಆದರೂ ಈಗ ಸಾಮಾಜಿಕ ಕಾರ್ಯಕರ್ತ ಗಂಗರಾಜು ಎಂಬಾತ ಮತ್ತೊಂದು ಹಗರಣದ ಬಗ್ಗೆ ಮಾತನಾಡಿದ್ದಾರೆ. ಆದರೆ ಆ ಜಮೀನನ್ನು ಈಗಾಗಲೇ ಹಿಂತಿರುಗಿಸಿದ್ದಾರೆ.

 

ಮಾಹಿತಿ ನೀಡಿರುವ ಗಂಗರಾಜು, 20-9-2023ರಲ್ಲಿ ಪಾರ್ವತಿ ಅವರು ಎಸ್ ಎಸ್ ಪಿ ಎಂಟರ್ಪ್ರೈಸ್ ಮಾಲೀಕರಾದ ಗಣೇಶ ಅವರಿಂದ 20 ಗುಂಟೆ ಜಮೀನು ಖರೀದಿ ಮಾಡ್ತಾರೆ. ಈ 20 ಗುಂಟೆ ಜಮೀನು ಇದಕ್ಕೂ ಮುಂಚೆ ಮೂಡಾ ಜಾಗವಾಗಿತ್ತು. ರಸ್ತೆಗಾಗಿಯಿದ್ದಂತ ಜಾಗ. ಪೈಪ್ ಲೈನ್ ಹೋಗಿದೆ ಇಲ್ಲಿಂದ. ಪ್ರಾಧಿಕಾರದಿಂದ ಏಕನಿವೇಶನ ಮಾಡಿರುತ್ತಾರೆ. ಆದರೆ ಅದೇ ಜಾಗವನ್ನು, ಪ್ರಾಧಿಕಾರದ ಆಸ್ತಿಯನ್ನ ಪಾರ್ವತಿ ಅವರ ಹೆಸರಿಗೆ ಬರೆದು ಕೊಡುತ್ತಾರೆ‌.

 

ಆ ಜಾಗವನ್ನು ಬಿಟ್ಟುಕೊಟ್ಟ ಮೇಲೆ 1 ಕೋಟಿ 85 ಲಕ್ಷಕ್ಕೆ ಪಾರ್ವತಿಯವರು ರಿಜಿಸ್ಟರ್ ಮಾಡಿಕೊಳ್ಳುತ್ತಾರೆ. ಚೆಕ್ ಮುಖಾಂತರ ಹಣ ಹೋಗಿದೆ. ಈ ಮಾಹಿತಿ ನನಗೆ ಗೊತ್ತಾದ ಮೇಲೆ ದಾಖಲೆಗಳನ್ನು ಕ್ರೂಡೀಕರಿಸಲು ಶುರು ಮಾಡಿದೆ. ಅದಾದ ಮೇಲೆ ಇಲ್ಲಿರುವ ಅವರ ಕಡೆಯವರು, ಇಂಥವರು ನಿಮ್ಮ ಮಾಹಿತಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಲೀಕ್ ಮಾಡುತ್ತಾರೆ. 3-8-2024ರಲ್ಲಿ ಪಾರ್ವತಿ ಅವರು, ಆ ಭೂ ಮಾಲೀಕನನ್ನು ಕರೆದುಕೊಂಡು ಬಂದು ತಿದ್ದುಪಡಿ ಮಾಡಿಕೊಳ್ಳುತ್ತಾರೆ. 21 ಸಾವಿರ ಚದುರಡಿಗೆ ಇದ್ದ ಭೂಮಿಯನ್ನು 13 ಸಾವಿರಕ್ಕೆ ತಿದ್ದುಪಡಿ ಮಾಡಿಕೊಂಡಿದ್ದಾರೆ. ಅದಾದ ಮೇಲೂ ಮತ್ತೆ ವ್ಯತ್ಯಾಸ ಆಗಿದೆ ಎಂಬುದು ಗಮನಕ್ಕೆ ಬರುತ್ತದೆ. ಅದಾದ ಮೇಲೆ ಮತ್ತೊಮ್ಮೆ ತಿದ್ದುಪಡಿ ಮಾಡಿಕೊಳ್ಳುತ್ತಾರೆ. ಈಗ ಆ ಆಸ್ತಿಯನ್ನು ಪ್ರಾಧಿಕಾರಕ್ಕೆ ನೀಡಿದ್ದಾರೆ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ 1.30 ಕೋಟಿ ಲಂಚ ಪಡೆದ ಆರೋಪ ಮಾಡಿದ ಶೋಭಾ ಕರಂದ್ಲಾಜೆ..!

  ಬೆಂಗಳೂರು: ಅದ್ಯಾಕೋ ಏನೋ ಕ್ಲೀನ್ ಹ್ಯಾಂಡ್ ಆಗಿದ್ದುಕೊಂಡು ಇಷ್ಟು ವರ್ಷ ರಾಜಕೀಯ ಪಯಣ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಒಂದರ ಮೇಲೊಂದು ಆರೋಪಗಳು ಕೇಳಿ ಬರುತ್ತಿವೆ. ಇದೀಗ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಸಿಎಂ ಪತ್ನಿ ಪಾರ್ವತಿ ಅವರ ಕೊರಳಿಗೆ ಸುತ್ತಿಕೊಳ್ತು ಇನ್ನೊಂದು ಹಗರಣ..!

  ಮೈಸೂರು: ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೂ ಮೂಡಾ ಹಗರಣಕ್ಕೂ ಅದ್ಯಾಕೋ ಸಂಬಂಧವೇ ಕಳೆದುಹೋಗುತ್ತಿಲ್ಲ. ಈಗಾಗಲೇ ಮೂಡಾದಿಂದ ಪಡೆದ ನಿವೇಶನಗಳನ್ನು ವಾಪಾಸ್ ಪಡೆದಿದ್ದಾರೆ. ಆದರೂ ಈಗ ಸಾಮಾಜಿಕ ಕಾರ್ಯಕರ್ತ ಗಂಗರಾಜು ಎಂಬಾತ

ಚಿತ್ರದುರ್ಗ APMC : ಶನಿವಾರ ಹತ್ತಿ ಮಾರುಕಟ್ಟೆ ಧಾರಣೆ…!

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 19)  ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಇಂದು (ಶನಿವಾರ, ಅಕ್ಟೋಬರ್. 19) ಹತ್ತಿ ಮಾರುಕಟ್ಟೆ ಇದ್ದು, ಧಾರಣೆಯಾದ ಕನಿಷ್ಠ ಮತ್ತು ಗರಿಷ್ಠ ದರ ಈ ಕೆಳಕಂಡಂತೆ ಇದೆ. ಹತ್ತಿ ಕನಿಷ್ಟ – 

error: Content is protected !!