ಸುದ್ದಿಒನ್, ಬೆಂಗಳೂರು, ಜುಲೈ. 23 : ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬಸವ ಸಂಸ್ಕೃತಿ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಆಹ್ವಾನಿಸಿದರು.
ಬೆಳಗಾವಿ ನಾಗನೂರು ಮಠದ ಪರಮಪೂಜ್ಯ ಅಲ್ಲಮಪ್ರಭು ಮಹಾಸ್ವಾಮೀಜಿ, ಅಥಣಿ ಮೊಟಗಿ ಮಠದ ಚೆನ್ನಬಸವ ಮಹಾಸ್ವಾಮೀಜಿ, ಶೇಗುಣಶಿಯ ಮಹಾಂತ ಮಹಾಸ್ವಾಮೀಜಿ, ನೆಲಮಂಗಲ ಬಸವಣ್ಣ ದೇವರ ಮಠದ ಸ್ವಾಮೀಜಿ, ಬೆಂಗಳೂರು ನಿಜಗುಣ ಸ್ವಾಮೀಜಿ, ಮಾತೆ ಗಂಗಾಂಬಿಕಾ, ನೆಲಮಂಗಲದ ಪವಾಡ ಮಠ ಸಿದ್ದಲಿಂಗ ಸ್ವಾಮೀಜಿ, ನಂಜುಂಡಿಯ ಗುರುದೇವರ ಮಠ ಸ್ವಾಮೀಜಿ, ಚಕ್ರಭಾವಿಯ ಸಿದ್ದಲಿಂಗ ಸ್ವಾಮೀಜಿ, ಕೆಂಚುಗಲ್ ಬಂಡೆ ಮಠದ ಮಹಾಲಿಂಗ ಸ್ವಾಮೀಜಿ, ಚನ್ನಪಟ್ಟಣದ ಬೇವೂರು ಮಠದ ಮೃತ್ಯಂಜಯ ಸ್ವಾಮೀಜಿ ಉಪಸ್ಥಿತರಿದ್ದರು.















