ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಯಾದಗಿರಿ: ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಖುರ್ಚಿ ಕದನ ತಣ್ಣಗಾಗುವಂತೆ ಕಾಣಿಸುತ್ತಿಲ್ಲ. ನಿನ್ನೆ ಇದ್ದಕ್ಕಿದ್ದ ಹಾಗೇ ಬೆಳಗ್ಗೆಯೇ ಅಪ್ಡೇಟ್ ಒಂದು ಆಗಿತ್ತು. ಡಿಸಿಎಂ ಡಿಕೆ ಶಿವಕುಮಾರ್, ಹೈಕಮಾಂಡ್ ಗೆ ಆಪ್ತರಾಗಿರುವ ಕೆಜೆ ಜಾರ್ಜ್ ಅವರನ್ನ ಭೇಟಿಯಾಗಿದ್ದರು. ಈ ನಡೆ ಬಹಳಷ್ಟು ಕುತೂಹಲ ಮೂಡಿಸಿತ್ತು. ಇದೀಗ ಕೆಜೆ ಜಾರ್ಜ್ ಅವರು ನಾನು ಸಂಧಾನಕಾರ ಅಲ್ಲ ಎಂಬ ಉತ್ತರವನ್ನ ನೀಡಿದ್ದಾರೆ.
ಡಿಕೆ ಶಿವಕುಮಾರ್ ಅವರನ್ನ ಮನವೊಲಿಸುವುದಕ್ಕೆ ಹೋಗಿದ್ದೆ ಎಂಬುದು ಸುಳ್ಳು ಸುದ್ದಿ. ಹೈಕಮಾಂಡ್ ನನಗೆ ಯಾವುದೇ ಜವಾಬ್ದಾರಿಯನ್ನು ಕೊಟ್ಟಿಲ್ಲ. ಜಿಬಿಎ ಚುನಾವಣೆಯ ಸಂಬಂಧ ಅಷ್ಟೇ ನಾನು ಮಾತನಾಡಿದ್ದೇನೆ. ಯಾವುದೇ ರಾಜಕೀಯ ವಿಚಾರವನ್ನು ನಾನು ಮಾತನಾಡಿಲ್ಲ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಸ್ಪಷ್ಟನೆಯನ್ನ ನೀಡಿದ್ದಾರೆ.
ಅವರು ನಮ್ಮ ಡೆಪ್ಯೂಟಿ ಚೀಫ್ ಮಿನಿಸ್ಟರ್. ಅವರು ನಾವೂ ಕೊಲಿಗ್. ಭೇಟಿ ಮಾಡ್ತಾ ಇರ್ತೀವಿ, ಮಾತಾಡ್ತಾ ಇರ್ತೀವಿ. ಎಐಸಿಸಿ ಅವರು ನಮಗೆ ಯಾವುದೇ ಜವಬ್ದಾರಿಯನ್ನು ಕೊಟ್ಟು ಕಳುಹಿಸಿಲ್ಲ. ಇದೆಲ್ಲವೂ ಸುಳ್ಳು. ಡಿಕೆ ಶಿವಕುಮಾರ್ ಅವರ ಬಳಿ ನಮ್ಮ ಸರ್ಕಾರದ ಬಗ್ಗೆ ಅಷ್ಟೇ ಮಾತನಾಡಿದ್ದೀವಿ. ಹೌದು ರೀ ನಮಗೂ ಅವರಿಗೂ 40 ವರ್ಷದ ಪರಿಚಯವಿದೆ. ಅವರು ನಮ್ಮ ಮನೆಗೂ ಬರ್ತಾರೆ, ನಾವೂ ಅವರ ಮನೆಗೂ ಹೋಗ್ತೀವಿ. ಸಿಎಂ ಪ್ರತಿನಿಧಿಯು ಇಲ್ಲ ಎಐಸಿಸಿ ಪ್ರತಿನಿಧಿಯೂ ಇಲ್ಲ. ನಾವೂ ವೈಯಕ್ತಿಕವಾಗಿ ಭೇಟಿ ಮಾಡಿರೋದು. ಸಿಎಂ, ಡಿಸಿಎಂ ಎಲ್ಲರೂ ಆಗಾಗ ವೈಯಕ್ತಿಕ ಭೇಟಿ ಮಾಡ್ತೀವಿ. ಅದನ್ನೆಲ್ಲಾ ನಾನ್ಯಾರು ಹೇಳುವುದಕ್ಕೆ. ಇಲ್ಲಿ ಬಂಡಾಯವೇ ಇಲ್ಲ, ಶಮನ ಮಾಡೋದು ಎಲ್ಲಿ. ನೀವೆಲ್ಲಾ ಬಿಜೆಪಿ ಮಾತು ಕೇಳಿಕೊಂಡು ನೀವೂ ಬಂಡಾಯ ಮಾಡ್ತಾ ಇದ್ದೀರಾ ಅಷ್ಟೇ ಎಂಬ ಮಾತನ್ನ ಹೇಳಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್