Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತುಂಗಾಭದ್ರಾ ಡ್ಯಾಂ ಬಳಿ ವಿಧಿಸಿದ್ದ 144 ಸೆಕ್ಷನ್ ತೆರವು : ಕನ್ನಯ್ಯ ಅಳವಡಿಸಿದ ಗೇಟನ್ನ ಈಗ ನೀವೂ ನೋಡಬಹುದು..!

---Advertisement---

ವಿಜಯಪುರ: ಕಳೆದ ಕೆಲವು ದಿನಗಳಿಂದ ತುಂಗಾಭದ್ರಾ ಡ್ಯಾಂ ಬಳಿ 144 ಸೆಕ್ಷನ್ ಅಳವಡಿಸಲಾಗಿತ್ತು. ಡ್ಯಾಂ ಗೇಟ್ ಕಳಚಿದ್ದ ಕಾರಣ, ನೀರಿನ ಅರಿವು ಹೆಚ್ಚಾಗಿತ್ತು. ಹೀಗಾಗಿ ಜನ ಅದನ್ನು ನೋಡಲು ಬಂದು ಅಪಾಯಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಇದೀಗ ನಿಷೇಧಾಜ್ಞೆಯನ್ನು ತೆರವು ಮಾಡಲಾಗಿದೆ.

ಅದರಲ್ಲೂ ಗೇಟ್ ದುರಸ್ಥಿ ಕಾರ್ಯ ಸಾಗಿದ್ದು ಹೇಗೆ..? ಅಳವಡಿಸಿರುವ ಸ್ಟಾಪ್ ಲಾಗ್ ಹೇಗಿದೆ..? ರಭಸವಾಗಿ ಹರಿಯುತ್ತಿದ್ದ ನೀರು ಕಡಿಮೆಯಾಗಿದ್ದೇಗೆ ಎಂಬೆಲ್ಲಾ ಕುತೂಹಲ ಸಹಜವಾಗಿ ಜನಸಾಮಾನ್ಯರಿಗೆ ಇರುತ್ತದೆ. ಹತ್ತಿರದಿಂದ ನೋಡಬೇಕೆಂಬ ಆಸೆಗೆ ಈಗ ಅವಕಾಶ ಸಿಕ್ಕಿದೆ. ತುಂಗಾಭದ್ರಾ ಡ್ಯಾಂ ವೀಕ್ಷಣೆಗೆ ಅವಕಾಶ ಕೊಡಲಾಗಿದೆ. ಜಲಾಶಯ ನೋಡಬೇಕೆನ್ನುವವರು ವಿಸಿಟ್ ಮಾಡಬಹುದು.

ಇನ್ನು ನಿನ್ನೆಯಿಂದ ತುಂಗಾಭದ್ರೆಗೆ ನೀರು ಹೆಚ್ಚಾಗುತ್ತಿದೆ. ನಿನ್ನೆಯಷ್ಟೇ 75 ಟಿಎಂಸಿ ನೀರು ಹೆಚ್ಚಾಗಿತ್ತು. ಇಂದು 76.912 ಟಿಎಂಸಿ ನೀರು ಸಂಗ್ರಹವಾಗಿದೆ. 31,033 ಕ್ಯೂಸೆಕ್ ನೀರು ಒಳಹರಿವು ಸದ್ಯಕ್ಕೆ ಇದೆ. 10,201 ಕ್ಯೂಸೆಕ್ ನೀರು ಹೊರ ಹರಿವು ಇದೆ. ಇನ್ನು ರಾಜ್ಯದಲ್ಲಿ ಬೆಂಬಿಡದೆ ಮಳೆಯಾಗುತ್ತಿದೆ. ಹೀಗಾಗಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಸದ್ಯ ತುಂಗಾಭದ್ರಾ ಜಲಾಶಯದ ನೀರನ್ನೇ ನಂಬಿಕೊಂಡಿದ್ದ ರೈತರಿಗೆ ನೆಮ್ಮದಿಯಾಗಿದೆ. ಯಾಕಂದ್ರೆ ಕ್ರಸ್ಟ್ ಗೇಟ್ ಮುರಿದು ನೀರು ಹೊರಗೆ ಹೋಗುತ್ತಿತ್ತು. ಸುಮಾರು 60 ಟಿಎಂಸಿ ನೀರನ್ನು ಖಾಲಿ ಮಾಡಬೇಕಾಗುತ್ತೆ ಎನ್ನಲಾಗಿತ್ತು. ಇದರಿಂದ ರೈತರಿಗೆ ಆಘಾತವಾಗಿತ್ತು. ಅಷ್ಟೊಂದು ನೀರನ್ನು ಹೊರಗೆ ಬಿಟ್ಟರೆ ಮುಂದೇನು ಗತಿ ಎಂದು. ಆದರೆ ಕನ್ನಯ್ಯ ತಂಡ ಕೂಡ ಅರ್ಧ ನೀರನ್ನಷ್ಟೇ ಹೊರಗೆ ಬಿಟ್ಟಿದೆ. ಸದ್ಯ ಎಲ್ಲವೂ ಸರಿಯಾಗಿದ್ದು, ತುಂಗಾ ಭದ್ರಾ ಜಲಾಶಯದ ಸುತ್ತಮುತ್ತ ಸಹಜ ಸ್ಥಿತಿಗೆ ಬಂದಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಬದಲಾಗುತ್ತಿರುವ ಹವಾಮಾನ: ಶೀತ ಮತ್ತು ಕೆಮ್ಮಿನಿಂದ ದೂರವಿರಲು ಈ ಮುನ್ನೆಚ್ಚರಿಕೆಗಳನ್ನು ವಹಿಸಿ

ವೈದ್ಯರ ದಿನದ ವಿಶೇಷ : ಮಳೆಗಾಲದಲ್ಲಿ ಆರೋಗ್ಯದ ಮೇಲೆ ನಿಗಾ ಇರಲಿ: ಸೋಂಕುಗಳಿಂದ ಬಚಾವಾಗಲು ಈ ಆಹಾರ ಕ್ರಮ ಪಾಲಿಸಿ

ವೈದ್ಯೋ ನಾರಾಯಣ ಹರಿ: ದೇವರ ರೂಪದ ವೈದ್ಯರಿಗೆ ನಮನ; ಜುಲೈ 1 ರಂದು ‘ರಾಷ್ಟ್ರೀಯ ವೈದ್ಯರ ದಿನ’ದ ಹಿನ್ನೆಲೆ ಮತ್ತು ಮಹತ್ವ!

National Doctors’ Day : ಜೀವ ಉಳಿಸುವ ವೈದ್ಯರಿಗೆ ಕೃತಜ್ಞತೆ ಸಲ್ಲಿಸುವ ದಿನ; ಇತಿಹಾಸ, ಮಹತ್ವ ಮತ್ತು ಡಾ. ಬಿ.ಸಿ. ರಾಯ್ ಅವರ ಸಾಧನೆ ಇಲ್ಲಿದೆ

ಭಾರತದಲ್ಲಿ `ರಾಷ್ಟ್ರೀಯ ಚಾರ್ಟರ್ಡ್ ಅಕೌಂಟೆಂಟ್ಸ್ ದಿನ’ : ಜುಲೈ 1 ರಂದೇ ಏಕೆ ಆಚರಿಸಲಾಗುತ್ತದೆ? ಇಲ್ಲಿದೆ ಇದರ ಇತಿಹಾಸ, ಮಹತ್ವ ಮತ್ತು ಥೀಮ್

ದಂತ ವೈದ್ಯನ ‘ಗ್ರಾಮ ದರ್ಶನ’ ಯಾನ: ಹಳ್ಳಿಗಳ ಇತಿಹಾಸ ಅರಸಿ ಹೊರಟ ಅಪರೂಪದ ಸಂಶೋಧಕ!

Leave a Comment