Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ತುಂಗಾಭದ್ರಾ ಡ್ಯಾಂ ಬಳಿ ವಿಧಿಸಿದ್ದ 144 ಸೆಕ್ಷನ್ ತೆರವು : ಕನ್ನಯ್ಯ ಅಳವಡಿಸಿದ ಗೇಟನ್ನ ಈಗ ನೀವೂ ನೋಡಬಹುದು..!

Facebook
Twitter
Telegram
WhatsApp

ವಿಜಯಪುರ: ಕಳೆದ ಕೆಲವು ದಿನಗಳಿಂದ ತುಂಗಾಭದ್ರಾ ಡ್ಯಾಂ ಬಳಿ 144 ಸೆಕ್ಷನ್ ಅಳವಡಿಸಲಾಗಿತ್ತು. ಡ್ಯಾಂ ಗೇಟ್ ಕಳಚಿದ್ದ ಕಾರಣ, ನೀರಿನ ಅರಿವು ಹೆಚ್ಚಾಗಿತ್ತು. ಹೀಗಾಗಿ ಜನ ಅದನ್ನು ನೋಡಲು ಬಂದು ಅಪಾಯಕ್ಕೆ ಸಿಲುಕಬಾರದು ಎಂಬ ಉದ್ದೇಶದಿಂದ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಇದೀಗ ನಿಷೇಧಾಜ್ಞೆಯನ್ನು ತೆರವು ಮಾಡಲಾಗಿದೆ.

ಅದರಲ್ಲೂ ಗೇಟ್ ದುರಸ್ಥಿ ಕಾರ್ಯ ಸಾಗಿದ್ದು ಹೇಗೆ..? ಅಳವಡಿಸಿರುವ ಸ್ಟಾಪ್ ಲಾಗ್ ಹೇಗಿದೆ..? ರಭಸವಾಗಿ ಹರಿಯುತ್ತಿದ್ದ ನೀರು ಕಡಿಮೆಯಾಗಿದ್ದೇಗೆ ಎಂಬೆಲ್ಲಾ ಕುತೂಹಲ ಸಹಜವಾಗಿ ಜನಸಾಮಾನ್ಯರಿಗೆ ಇರುತ್ತದೆ. ಹತ್ತಿರದಿಂದ ನೋಡಬೇಕೆಂಬ ಆಸೆಗೆ ಈಗ ಅವಕಾಶ ಸಿಕ್ಕಿದೆ. ತುಂಗಾಭದ್ರಾ ಡ್ಯಾಂ ವೀಕ್ಷಣೆಗೆ ಅವಕಾಶ ಕೊಡಲಾಗಿದೆ. ಜಲಾಶಯ ನೋಡಬೇಕೆನ್ನುವವರು ವಿಸಿಟ್ ಮಾಡಬಹುದು.

ಇನ್ನು ನಿನ್ನೆಯಿಂದ ತುಂಗಾಭದ್ರೆಗೆ ನೀರು ಹೆಚ್ಚಾಗುತ್ತಿದೆ. ನಿನ್ನೆಯಷ್ಟೇ 75 ಟಿಎಂಸಿ ನೀರು ಹೆಚ್ಚಾಗಿತ್ತು. ಇಂದು 76.912 ಟಿಎಂಸಿ ನೀರು ಸಂಗ್ರಹವಾಗಿದೆ. 31,033 ಕ್ಯೂಸೆಕ್ ನೀರು ಒಳಹರಿವು ಸದ್ಯಕ್ಕೆ ಇದೆ. 10,201 ಕ್ಯೂಸೆಕ್ ನೀರು ಹೊರ ಹರಿವು ಇದೆ. ಇನ್ನು ರಾಜ್ಯದಲ್ಲಿ ಬೆಂಬಿಡದೆ ಮಳೆಯಾಗುತ್ತಿದೆ. ಹೀಗಾಗಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

ಸದ್ಯ ತುಂಗಾಭದ್ರಾ ಜಲಾಶಯದ ನೀರನ್ನೇ ನಂಬಿಕೊಂಡಿದ್ದ ರೈತರಿಗೆ ನೆಮ್ಮದಿಯಾಗಿದೆ. ಯಾಕಂದ್ರೆ ಕ್ರಸ್ಟ್ ಗೇಟ್ ಮುರಿದು ನೀರು ಹೊರಗೆ ಹೋಗುತ್ತಿತ್ತು. ಸುಮಾರು 60 ಟಿಎಂಸಿ ನೀರನ್ನು ಖಾಲಿ ಮಾಡಬೇಕಾಗುತ್ತೆ ಎನ್ನಲಾಗಿತ್ತು. ಇದರಿಂದ ರೈತರಿಗೆ ಆಘಾತವಾಗಿತ್ತು. ಅಷ್ಟೊಂದು ನೀರನ್ನು ಹೊರಗೆ ಬಿಟ್ಟರೆ ಮುಂದೇನು ಗತಿ ಎಂದು. ಆದರೆ ಕನ್ನಯ್ಯ ತಂಡ ಕೂಡ ಅರ್ಧ ನೀರನ್ನಷ್ಟೇ ಹೊರಗೆ ಬಿಟ್ಟಿದೆ. ಸದ್ಯ ಎಲ್ಲವೂ ಸರಿಯಾಗಿದ್ದು, ತುಂಗಾ ಭದ್ರಾ ಜಲಾಶಯದ ಸುತ್ತಮುತ್ತ ಸಹಜ ಸ್ಥಿತಿಗೆ ಬಂದಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ

ಈ ರಾಶಿಯವರ ಇನ್ಮುಂದೆ ಆರ್ಥಿಕ ಬಲ ಪವರ್ ಫುಲ್. ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ, ಗುರುವಾರ-ರಾಶಿ ಭವಿಷ್ಯ ಸೆಪ್ಟೆಂಬರ್-19,2024 ಸೂರ್ಯೋದಯ: 06:08, ಸೂರ್ಯಾಸ್ತ : 06:11 ಶಾಲಿವಾಹನ ಶಕೆ :1946,

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆ : 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ

ಚಿತ್ರದುರ್ಗ.ಸೆ.18: ಸೆ.28 ರಂದು ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯನ್ನು ಶಾಂತಿ ಹಾಗೂ ಸೌಹಾರ್ಧತೆಯಿಂದ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿ ಸದಸ್ಯರಗೆ ಸೂಚನೆ

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ : ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನೇಮಕ : ರಂಜಿತ್ ಕುಮಾರ ಬಂಡಾರು

ಸೆಪ್ಟೆಂಬರ್‌ 28 ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯ ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ತಿಳಿಸಿದರು.

error: Content is protected !!