ಬೆಂಗಳೂರು: ಇಷ್ಟು ಸೀಸನ್ ಗಳು ಬೇರೆ ನನ್ಮಗಂದ್ ಈ ಸೀಸನ್ ಬೇರೆನೆ ಅಂತ ಕಿಚ್ಚ ಸುದೀಪ್ ಅವರು ಆರಂಭದ ಮೊದಲೇ ಹೇಳಿದ್ದರು. ನಿರೀಕ್ಷೆ ಮಾಡದ ವಿಚಾರಗಳೇ ನಡೆಯುತ್ತವೆ ಅಂತಾನೂ ಹೇಳಿದ್ರು. ಮೊದಲ ಬಾರಿಗೆ ಮಧ್ಯದಲ್ಲಿಯೇ ಫಿನಾಲೆಯೂ ನಡೆಯುತ್ತಿದೆ. ಫಿನಾಲೆಗಿಂತ ವೀಕ್ಷಕರು ಕಾಯ್ತಾ ಇದ್ದದ್ದು, ಕಿಚ್ಚ ಸುದೀಪ್ ಅವರ ಇವತ್ತಿನ ಪಂಚಾಯ್ತಿಗೆ. ಯಾಕಂದ್ರೆ ಕಳೆದ ವಾರ ಅಶ್ವಿನಿ ಹಾಗೂ ಜಾನ್ವಿ ನಡೆಗೆ ಎಲ್ಲರೂ ಕೋಪಗೊಂಡಿದ್ದರು.
ರಕ್ಷಿತಾ ಮೇಲೆ ಇಬ್ಬರು ಪರ್ಸನಲ್ ಟಾರ್ಗೆಟ್ ಮಾಡಿದ್ದಾರೆ ಎಂಬುದು ನೋಡುಗರಿಗೆ ಚೆನ್ನಾಗಿಯೇ ಅರ್ಥವಾಗಿತ್ತು. ಮಾತಿಗೆ ಮುಂಚೆ ರಕ್ಷಿತಾರನ್ನ ಕೆಣಕುತ್ತಾ ಇದ್ದರು. ದೆವ್ವ ಬರುತ್ತೆ, ಡ್ಯಾನ್ಸ್ ಮಾಡ್ತಾರೆ ಅಂತ ಆರೋಪ ಮಾಡಿದ್ದಲ್ಲದೆ, ನಿನ್ನೆಯ ಎಪಿಸೋಡ್ ನಲ್ಲಿ ಅಶ್ವಿನಿ ಸ್ವಲ್ಪ ಜೋರಾಗಿಯೇ ಮಾತನಾಡಿದ್ದರು. ನೀನು ಎಲ್ಲಿಂದ ಬಂದೇ ಅನ್ನೋದು ಗೊತ್ತು, ಈಡಿಯಟ್ ಅಂತೆಲ್ಲಾ ಮಾತನಾಡಿದ್ದು, ವೀಕ್ಷಕರ ಬೇಸರಕ್ಕೆ ಕಾರಣವಾಗಿತ್ತು. ಈ ಬಗ್ಗೆ ಕಿಚ್ಚ ಸುದೀಪ್ ಮಾತಾನಾಡುವ ನಿರೀಕ್ಷೆ ಇತ್ತು. ಈಗಿನ ಪ್ರೋಮೋದಲ್ಲಿ ಅದೇ ಕಾಣಿಸಿದೆ.
ವೇದಿಕೆ ಮೇಲೆ ಬಂದ ಕಿಚ್ಚ ಸುದೀಪ್, ಜಾನ್ವಿ ಹಾಗೂ ಅಶ್ವಿನಿ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಯಮ್ಮ ಅಂದ್ರೆ ನಿಮ್ಗೆ ಆಗಲ್ಲ ಸರಿ ಹಾಗಂತ ನೀವೂ ಈಡಿಯಟ್ ಅನ್ನಬಹುದಾ ಎಂದು ಪ್ರಶ್ನೆ ಮಾಡಿದ್ದಾರೆ. ಜಾನ್ವಿ ಹಾಗೂ ಅಶ್ವಿನಿ ಅವರಿಗೆ ಕಿಚ್ಚ ದೆವ್ವ ಬಿಡಿಸೋದನ್ನ ನೋಡುವುದಕ್ಕೇನೆ ಎಲ್ಲರೂ ಕಾಯ್ತಾ ಇದ್ದಾರೆ. ಬಿಗ್ ಬಾಸ್ ವೀಕ್ ಡೇಸ್ ಎಪಿಸೋಡ್ ಗಿಂತ ವೀಕೆಂಡ್ ಎಪಿಸೋಡ್ ಗೇನೆ ಜನ ಹೆಚ್ಚಾಗಿ ಕಾಯುವುದು.

