ಸುದ್ದಿಒನ್, ಚಿತ್ರದುರ್ಗ, ಜನವರಿ. 11 : ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48 ರ ತಮಟಕಲ್ಲು ಬಳಿ ಇಂದು ಬೆಳಿಗ್ಗೆ (ಜನವರಿ. 11) ಸುಮಾರು 04 ಗಂಟೆ ವೇಳೆಗೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಮಹಾರಾಷ್ಟ್ರದಿಂದ ಬೆಂಗಳೂರು ಕಡೆಗೆ ಚಲಿಸುತ್ತಿದ್ದ ಇನ್ನೋವಾ ಕಾರು ತಮಟಕಲ್ಲಿ ಬಳಿ ಅಪರಿಚಿತ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಗಾಯಗೊಂಡವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದರು.
ಮೃತರನ್ನು ಮಹಾರಾಷ್ಟ್ರ ಮೂಲದ ಸಾಂಗ್ಲಿ ಜಿಲ್ಲೆಯ
1. ಕಮಲ್ ಹರಿಬಾಹು ಪಾಟೀಲ್ (69 ವರ್ಷ) ಮತ್ತು ಇನ್ನೋವಾ ಕಾರಿನ ಚಾಲಕ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ
2. ರಾಕೇಶ್ ಅರ್ಜುನ್ ಐವಾಲೆ (39 ವರ್ಷ). ಗಾಯಗೊಂಡವರನ್ನು
1. ವೈಷ್ಣವಿ ಸುರೇಶ್ ಪಾಟೀಲ್, 45 ವರ್ಷ
2. ಕುಸುಮ ಪ್ರಹ್ಲಾದ್ ಪಾಟೀಲ್, 57 ವರ್ಷ,
3. ಉದಯ ದತ್ತಾತ್ರೇಯ ಪಾಟೀಲ್, 38 ವರ್ಷ ಎಂದು ಗುರುತಿಸಲಾಗಿದೆ ಎಂದು ಎಸ್. ಪಿ. ರಂಜಿತ್ ಕುಮಾರ್ ಬಂಡಾರು ಅವರು ತಿಳಿಸಿದ್ದಾರೆ.










