ಚಿತ್ರದುರ್ಗ. ಅ.16: ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘ (ಟಿಎಪಿಸಿಎಂಎಸ್) ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಲಿ ನಿರ್ದೇಶಕರ ಸ್ಥಾನಗಳಿಗೆ ‘ಬಿ’ ತರಗತಿ ರೈತ ಸದಸ್ಯರಿಂದ 8 ಮಂದಿ ನಿರ್ದೇಶಕರು ಹಾಗೂ ‘ಎ’ ತರಗತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ 5 ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
‘ಬಿ’ ತರಗತಿ ರೈತ ಸದಸ್ಯರಿಂದ ಕೋಗುಂಡೆ ಹೆಚ್.ಎಂ.ಮಂಜುನಾಥಪ್ಪ, ಯಳಗೋಡು ಜಿ.ಆರ್.ಧನಂಜಯ, ಭರಮಸಾಗರ ಎನ್.ಕಲ್ಲೇಶ್, ಅನ್ನೇಹಾಳ್ ಹೆಚ್.ನಿರಂಜನಮೂರ್ತಿ, ಸಿರಿಗೆರೆ ಕೆ.ಜಿ.ಕವಿತ ಬಸವಕುಮಾರ್, ಚಿಕ್ಕಬೆನ್ನೂರು ಬಿ.ಎಸ್.ಶಾಂತಕುಮಾರಿ, ಸಿರಿಗೆರೆ ಎಸ್.ಹೆಚ್.ತಿಪ್ಪೇಸ್ವಾಮಿ, ವಡ್ಡರಸಿದ್ದವ್ವನಹಳ್ಳಿ ಟಿ.ಸಣ್ಣ ತಿಮ್ಮಪ್ಪ ಆಯ್ಕೆಯಾಗಿದ್ದಾರೆ.
‘ಎ’ ತರಗತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ಕೋಡಿರಂಗವ್ವನಹಳ್ಳಿ ಹೆಚ್.ಎನ್.ಹನುಮಂತಪ್ಪ, ಸಿಂಗಾಪುರ ಕೆ.ಆರ್.ರವಿ, ಸಿರಿಗೆರೆ ಎಂ.ಎಸ್.ಪ್ರಸನ್ನ, ಕೊಡಗವಳ್ಳಿಯ ಬಿ.ಎನ್.ದೇವರಾಜ್, ಹಿರೇಕಬ್ಬಿಗೆರೆ ಜಿ.ಎಸ್.ನಾಗರಾಜ್ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಮಹಮ್ಮದ್ ಯೂನಸ್ ಫರ್ವಿಜ್ ಘೋಷಿಸಿದ್ದಾರೆ ಎಂದು ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘದ ಕಾರ್ಯದರ್ಶಿ ಜಿ.ಎನ್.ಉಮಾಶಂಕರ್ ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















