ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 31 : ಚಿತ್ರದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನಗಳ ಮಾರಾಟದ ಸಹಕಾರ ಸಂಘದ ಅಧ್ಯಕ್ಷರಾಗಿ ಹೆಚ್.ಎಂ.ಮಂಜುನಾಥಪ್ಪ ಕೋಗುಂಡೆ, ಉಪಾಧ್ಯಕ್ಷರಾಗಿ ಕೆ.ಆರ್.ರವಿ ಸಿಂಗಾಪುರ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಸಂಘದ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ನಿರ್ದೇಶಕರು ಒಮ್ಮತದಿಂದ ಇವರನ್ನು ಆಯ್ಕೆ ಮಾಡಲಾಯಿತು.
ಅಕ್ಟೋಬರ್ 13 ರಂದು ನಡೆದ ಆಡಳಿತ ಮಂಡಲಿ ನಿರ್ದೇಶಕರ ಚುನಾವಣಾ ಪ್ರಕ್ರಿಯೆಯಲ್ಲಿ
ಹೆಚ್.ಎನ್.ಹನುಮಂತಪ್ಪ ಕೋಡಿರಂಗವ್ವನಹಳ್ಳಿ, ಜಿ.ಆರ್.ಧನಂಜಯ ಯಳಗೋಡು,
ಟಿ.ಸಣ್ಣತಿಮ್ಮಪ್ಪ ವಡ್ಡರಸಿದ್ದವ್ವನಹಳ್ಳಿ,
ಎನ್.ಕಲ್ಲೇಶ್ ಭರಮಸಾಗರ,
ಹೆಚ್.ನಿರಂಜನಮೂರ್ತಿ ಅನ್ನೇಹಾಳ್, ಎಸ್..ಹೆಚ್.ತಿಪ್ಪೇಸ್ವಾಮಿ ಸಿರಿಗೆರೆ,
ಎಂ.ಎಸ್.ಪ್ರಸನ್ನ ಸಿರಿಗೆರೆ,
ದೇವರಾಜ್.ಬಿ.ಎನ್ ಕೊಡಗವಳ್ಳಿ,
ನಾಗರಾಜ್.ಜಿ.ಎಸ್ ಹಿರೇಕಬ್ಬಿಗೆರೆ,
ಶ್ರೀಮತಿ ಕೆ.ಜಿ.ಕವಿತ ಬಸವಕುಮಾರ್ ಸಿರಿಗೆರೆ,
ಶ್ರೀಮತಿ ಶಾಂತಕುಮಾರಿ.ಬಿ.ಎಸ್ ಚಿಕ್ಕಬೆನ್ನೂರು ಇವರುಗಳನ್ನು ನಿರ್ದೇಶಕರುಗಳಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು ಎಂದು ಚುನಾವಣಾಧಿಕಾರಿಗಳಾದ ಎಸ್.ಮಹಮ್ಮದ್ ಯೂನಸ್ ಫರ್ವಿಜ್ ಘೋಷಣೆ ಮಾಡಿದ್ದರು. ಹಾಗೂ ಜಿಲ್ಲಾ ಬ್ಯಾಂಕ್ನ ನಾಮ ನಿರ್ದೇಶಕರಾದ ಎಂ.ನಿಶಾನಿ ಜಯಣ್ಣ ಬುರುಜನಹಟ್ಟಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪದನಿಮಿತ್ತ ನಿರ್ದೇಶಕರಾಗಿರುತ್ತಾರೆ.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿಯವರಾದ ಜಿ.ಎನ್.ಉಮಾಶಂಕರ್ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
