ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 15 : ನಗರದ ತಾಜ್ ಪೀರ್ ಲೇಔಟ್ ನಿವಾಸಿ ಹಾಗೂ ಶ್ರೀ ಪ್ರಸನ್ನ ಗಣಪತಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ. ಎಲ್. ಶಿವಕುಮಾರ್ (54 ವರ್ಷ) ಅವರು ಇಂದು (ಡಿಸೆಂಬರ್. 15 ರ) ಬೆಳಗ್ಗೆ ನಿಧನರಾದರು.
ಮ್ರತರು ತಾಯಿ, ಪತ್ನಿ, ಇಬ್ಬರು ಪುತ್ರಿಯರು ಸೇರಿದಂತೆ ಅಪಾರವಾದ ಬಂಧು ಬಳಗವನ್ನು ಆಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಗರದ ಜೋಗಿಮಟ್ಟಿ ರಸ್ತೆಯ ಮುಕ್ತಿಧಾಮದಲ್ಲಿ ಇಂದು(ಡಿಸೆಂಬರ್. 15) ಸಂಜೆ ನಡೆಯಿತೆಂದು ಕುಟುಂಬದ ಮೂಲಗಳು ತಿಳಿಸಿವೆ.





