Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗ | ವಿಜೃಂಭಣೆಯಿಂದ ನೆರವೇರಿದ ರಾಜಯೋಗಿಸ್ವಾಮಿ ರಾಮತೀರ್ಥರ ಹಾಗೂ ಜಗನ್ಮಾತಾ ಚೂಡಾಮಣಿ ಮಾತಾಜಿರವರ ಪುಣ್ಯಾರಾಧನೆ ಹಾಗೂ ರಥೋತ್ಸವ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜೂನ್. 21  : ಮೆದೆಹಳ್ಳಿ ರಸ್ತೆಯಲ್ಲಿರುವ ಶಾಂತಾರಾಮ ತೀರ್ಥಾಶ್ರಮದಲ್ಲಿ ರಾಜಯೋಗಿಸ್ವಾಮಿ ರಾಮತೀರ್ಥರ ಹಾಗೂ ಜಗನ್ಮಾತಾ ಚೂಡಾಮಣಿ ಮಾತಾಜಿರವರ ಪುಣ್ಯಾರಾಧನೆ ಹಾಗೂ ರಥೋತ್ಸವ ಪ್ರತಿ ವರ್ಷದಂತೆ ಈ ಬಾರಿಯೂ ಸಾವಿರಾರು ಭಕ್ತರು ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಬೃಹಧಾಕಾರದ ಹೂವಿನ ಹಾರ, ಬಾಳೆಕಂಬ, ಬಣ್ಣ ಬಣ್ಣದ ಭಾವುಟ, ಹೊಂಬಾಳೆಯಿಂದ ರಥವನ್ನು ಅಲಂಕರಿಸಲಾಗಿತ್ತು. ಆಶ್ರಮದ ಆವರಣದಲ್ಲಿ ನೆರದಿದ್ದ ಅಪಾರ ಭಕ್ತರ ಸಮ್ಮುಖದಲ್ಲಿ ಮೂರು ಸುತ್ತು ರಥೋತ್ಸವ ಸಾಗಿತು. ಡೊಳ್ಳು, ತಮಟೆ, ನಂದಿಕೋಲು, ಛತ್ರಿ ಚಾಮರಗಳು ರಥೋತ್ಸವದಲ್ಲಿ ವಿಜೃಂಭಿಸುತ್ತಿತ್ತು. ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು ಕೂಡ ರಥೋತ್ಸವದಲ್ಲಿ ಪಾಲ್ಗೊಂಡು ಕೀರ್ತನೆಗಳನ್ನು ಹಾಡುತ್ತಿದ್ದರು.

ರಥೋತ್ಸವದಲ್ಲಿ ಭಕ್ತರು ಕುಣಿದು ಕುಪ್ಪಳಿಸುತ್ತ ಭಕ್ತಿ ಸಮರ್ಪಿಸಿದರೆ ಕೆಲವರು ಚಿಕ್ಕ ಚಿಕ್ಕ ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ರಥೋತ್ಸವದಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು. ಕಳಸ ಸ್ಥಾಪನೆ, ಗಣಪತಿ ಪೂಜೆ, ನವಗ್ರಹ ಪೂಜೆ, ಹೋಮ, ಗುರುಪೂಜೆ, ಪಂಚಾಮೃತಾಭಿಷೇಕ, ಮಹಾ ಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಿತು.

ಆಶ್ರಮದ ಗುರುಗಳಾದ ಪ್ರಹ್ಲಾದ್‍ಸ್ವಾಮಿ, ರಾಮತೀರ್ಥಾಶ್ರಮದ ಟ್ರಸ್ಟ್ ನ ಸದಸ್ಯರುಗಳಾದ ಗಿರೀಶ್, ಎನ್.ಜೆ.ದೇವರಾಜರೆಡ್ಡಿ ಇವರುಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಕರ್ನಾಟಕ ಸೇರಿದಂತೆ ನೆರೆಯ ಆಂಧ್ರ, ತಮಿಳುನಾಡು ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು.‌ಪ್ರಧಾನ ಅರ್ಚಕ ಸತೀಶ್‍ಸ್ವಾಮಿ ಹೋಮ ಹವನಾಧಿಗಳನ್ನು ನೆರವೇರಿಸಿದರು.

ರಥೋತ್ಸವದ ಮುಕ್ತಿ ಭಾವುಟವನ್ನು ಚಿತ್ರದುರ್ಗದ ಹೂವಿನ ಅಂಗಡಿ ಕಾಂತಣ್ಣ ಮೂರು ಲಕ್ಷದ ಹತ್ತು ಸಾವಿರ ರೂ.ಗಳಿಗೆ ಪಡೆದುಕೊಂಡರು. ರಥೋತ್ಸವದ ಮೊದಲನೆ ಹಾರವನ್ನು ಬೊಮ್ಮೇನಹಳ್ಳಿಯ ವಕೀಲ ಶ್ರೀನಿವಾಸ್ ಎಂಬತ್ತು ಸಾವಿರ ರೂ.ಗಳಿಗೆ ಪಡೆದರು.

ಮಾತಾಜಿ ಅಮ್ಮನವರ ಹಾರವನ್ನು ಬಸವರಾಜಪ್ಪ ಕಡ್ಲೆಗುದ್ದು ಇವರು ಇಪ್ಪತ್ತೈದು ಸಾವಿರ ರೂ.ಗಳಿಗೆ ಪಡೆದುಕೊಂಡರು. ಮಹಾರಥೋತ್ಸವದ ದೊಡ್ಡ ಹಾರವನ್ನು ಅಲುಮೇಲು ಶ್ರೀನಿವಾಸ್‍ರವರು ಒಂದು ಲಕ್ಷ ರೂ.ಗಳಿಗೆ ಪಡೆದುಕೊಂಡರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರಿಗೆ ಮಧ್ಯಸ್ಥಿಕೆ ಜನರಿಂದ ದಂಪತಿಗಳಿಗೆ ದಾರಿ ತಪ್ಪಿಸಲಿದ್ದಾರೆ, ಈ ರಾಶಿಯವರಿಗೆ ಶತ್ರುಪೀಡೆ ಅಧಿಕ

ಈ ರಾಶಿಯವರಿಗೆ ಮಧ್ಯಸ್ಥಿಕೆ ಜನರಿಂದ ದಂಪತಿಗಳಿಗೆ ದಾರಿ ತಪ್ಪಿಸಲಿದ್ದಾರೆ, ಈ ರಾಶಿಯವರಿಗೆ ಶತ್ರುಪೀಡೆ ಅಧಿಕ, ಶುಕ್ರವಾರ ರಾಶಿ ಭವಿಷ್ಯ -ಜೂನ್-28,2024 ಸೂರ್ಯೋದಯ: 05:48, ಸೂರ್ಯಾಸ್ತ : 06:50 ಶಾಲಿವಾಹನ ಶಕೆ1946, ಶ್ರೀ ಕ್ರೋಧಿ ನಾಮ

ಬಹುನಿರೀಕ್ಷಿತ ಪ್ರಭಾಸ್ ನಟನೆಯ ‘ಕಲ್ಕಿ 2898AD’ ಸಿನಿಮಾ ಫುಲ್ ಮಾರ್ಕ್ಸ್ ಕೊಟ್ಟ ಪ್ರೇಕ್ಷಕ : ಹೇಗಿದೆ ಸಿನಿಮಾ..?

ನಾಗ್ ಅಶ್ವಿನ್ ನಿರ್ದೇಶನದ ಕಲ್ಕಿ 2898AD ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆಯನ್ನು ಹುಟ್ಟು ಹಾಕಿತ್ತು. ಪ್ರಭಾಸ್ ನಟನೆಯ ಈ ಸಿನಿಮಾ ಬಗ್ಗೆ ಕುತೂಹಲವೂ ಹೆಚ್ಚಿತ್ತು. ಇಂದು ದೇಶದಾದ್ಯಂತ ಸಿನಿಮಾ ರಿಲೀಸ್ ಆಗಿದೆ‌. ಅಭಿಮಾನಿಗಳು ಕೂಡ ಅದ್ದೂರಿಯಾಗಿ

ಕಳೆದ ವರ್ಷವೇ ಪ್ರಾಯೋಗಿಕ ಸಂಚಾರವಾಗಿದ್ದರು ಬೆಳಗಾವಿಗ್ಯಾಕೆ ವಂದೇ ಭಾರತ್ ಬಿಟ್ಟಿಲ್ಲ..?

ಬೆಳಗಾವಿ: ಕಳೆದ ವರ್ಷ ಅಂದ್ರೆ 2023ರಲ್ಲಿಯೇ ಬೆಳಗಾವಿಯಲ್ಲಿ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿತ್ತು. ಆದರೆ ಆಮೇಲೆ ಅದರ ಸುಳಿವು ಇಲ್ಲ. ಇಲ್ಲಿವರೆಗೂ ಬೆಂಗಳೂರು-ಧಾರವಾಡ-ಹುಬ್ಬಳ್ಳಿ ಮಾರ್ಗದ ವಂದೇಭಾರತ್ ರೈಲು ಸಂಚಾರ ಆರಂಭವಾಗಿಲ್ಲ. ಬೆಳಗಾವಿಗೆ ವಂದೇ ಭಾರತ್ ರೈಲು

error: Content is protected !!