ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 11 : ತಾಲ್ಲೂಕಿನ ಭೀಮಸಮುದ್ರ ವಾಸಿ ಹಾಗೂ ಪ್ರಗತಿಪರ ಕೃಷಿಕರಾದ ಮಾಳಿಗೆ ಎಂ.ಎಂ. ಶಿವಮೂರ್ತಿ (70 ವರ್ಷ) ಇಂದು ಬೆಳಗ್ಗೆ 11:00 ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯನ್ನು ನಾಳೆ (ಫೆಬ್ರವರಿ. 12, ಗುರುವಾರ) ತೋಟದಲ್ಲಿ 11 ಗಂಟೆಗೆ ನೆರವೇರಿಸಲಾಗುವುದು ಎಂದು ಕುಟುಂಬದವರು ತಿಳಿಸಿದ್ದಾರೆ.










