ಬೆಂಗಳೂರು: ರಾಜ್ಯ ಸರ್ಕಾರದಿಂದ ವರ್ಗಾವಣೆ ಆದೇಶ ಹೊರಡಿಸಿದ್ದು, ಬರೋಬ್ಬರಿ 23 ಡಿವೈಎಸ್ಪಿ ಹಾಗೂ 129 ಪೊಲೀಸ್ ಇನ್ಸ್ಪೆಕ್ಟರ್ ಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಚಿತ್ರದುರ್ಗದ
ಉಪ ವಿಭಾಗದ ಡಿವೈಎಸ್ಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದಿನಕರ್ ಪಿಕೆ ಅವರನ್ನು ಇದೀಗ ರಾಜ್ಯ ಗುಪ್ತ ಇಲಾಖೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಉಳಿದಂತೆ ಕಲಬುರ್ಗಿಯ ಪಿಟಿಸಿ ನಾಗೇನಹಳ್ಳಿ ಡಿವೈಎಸ್ಪಿಯಾಗಿದ್ದಂತ ರಾಜಣ್ಣ ಡಿ.ಜಿ ಅವರನ್ನು ಬೀದರ್ ಉಪ ವಿಭಾಗದ ವರ್ಗಾವಣೆ ಆದೇಶ ರದ್ದುಪಡಿಸಿ, ಅಲ್ಲಿಯೇ ಮುಂದುವರೆಸಲಾಗಿದೆ. ದೂದ್ ಪೀರ್ ಹುಸೇನ್ ಸಾಬ್ ಮುಲ್ಲಾ ಅವರನ್ನು ಗೋಕಾಕ್ ಉಪ ವಿಭಾಗದಿಂದ ಬೀದರ್ ಉಪ ವಿಭಾಗದ ಡಿವೈಎಸ್ಪಿಯಾಗಿ, ಗಿರೀಶ್ ಬಿ ಅವರನ್ನು ಕರ್ನಾಟಕ ಲೋಕಾಯುಕ್ತದಿಂದ ಉತ್ತರ ಕನ್ನಡದ ಭಟ್ಕಳ ಉಪ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ. ಮಹೇಶ್.ಎಂ.ಕೆ ಅವರನ್ನು ಭಟ್ಕಳ ಉಪ ವಿಭಾಗದಿಂದ ಸಿಐಡಿಗೆ, ಯು.ಡಿ ಕೃಷ್ಣಕುಮಾರ್ ಎಂಬುವರನ್ನು ರಾಜ್ಯ ಗುಪ್ತವಾರ್ತೆಯಿಂದ ಶ್ರೀರಂಗಪಟ್ಟಣ ಉಪ ವಿಭಾಗದ ಡಿವೈಎಸ್ಪಿಯಾಗಿ, ಪ್ರಭು ಡಿ.ಟಿ ಅವರನ್ನು ಉಡುಪಿ ಉಪ ವಿಭಾಗದಿಂದ, ಕಲಬುರ್ಗಿ ನಗರ ಸಂಚಾರ ಉಪ ವಿಭಾಗದ ಡಿವೈಎಸ್ಪಿಯಾಗಿ ವರ್ಗಾವಣೆ ಮಾಡಲಾಗಿದೆ.
ಇನ್ನೂ ರಾಜ್ಯ ಸರ್ಕಾರದಿಂದ 129 ಪೊಲೀಸ್ ಇನ್ಸ್ ಪೆಕ್ಟರ್ ಅವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಆದೇಶಿಸಿದೆ. ಸಿಸಿಬಿಯಲ್ಲಿದ್ದಂತ ಶ್ರೀನಿವಾಸ ಜಿ.ಟಿ ಅವರನ್ನು ಬೆಂಗಳೂರಿನ ಮಾಗಡಿ ಪೊಲೀಸ್ ಠಾಣೆಯ ಪಿಐ ಆಗಿ ವರ್ಗಾವಣೆ ಮಾಡಲಾಗಿದೆ. ಗಂಗಾಧರ ಟಿ.ಎಂ ಎಂಬುವರನ್ನು ಡಿಸಿಆರ್ ಇಗೆ, ವಿಜಯಕುಮಾರ್.ಆರ್ ಅವರನ್ನು ಬಿಡದಿ ಪೊಲೀಸ್ ಠಾಣೆಗೆ, ಪ್ರಕಾಶ್.ಆರ್ ಅವರನ್ನು ರಾಜ್ಯ ಗುಪ್ತವಾರ್ತೆಯಲ್ಲಿಯೇ ಮುಂದುವರೆಸಲಾಗಿದೆ.


