ಸುದ್ದಿಒನ್, ಚಿತ್ರದುರ್ಗ, ಮೇ. 17 : ನಗರದ ಐಯುಡಿಪಿ ಬಡಾವಣೆ ನಿವಾಸಿ ಹಾಗೂ ಡಯಟ್ ಉಪನ್ಯಾಸಕ ರಾಮಚಂದ್ರಪ್ಪ (51 ವರ್ಷ) ಸಂಜೆ ನಿಧನರಾದರು.
ಹಿರಿಯೂರು ತಾಲ್ಲೂಕಿನ ಬೀರೆನಹಳ್ಳಿ ಗ್ರಾಮದವರಾದ ರಾಮಚಂದ್ರಪ್ಪನವರು ಇಂದು ಸಂಜೆ ಸಾವನ್ನಪ್ಪಿರುತ್ತಾರೆ. ಪ್ರಸ್ತುತ ಚಿತ್ರದುರ್ಗ ಡಯೆಟ್ ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ನಾಳೆ (ಸೋಮವಾರ, ಮೇ. 18) ಬೀರೆನಹಳ್ಳಿ ಗ್ರಾಮದಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.














