Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತಂದೆಯ ಕಾರಿನಡಿ ಸಿಲುಕಿ ಮಗು ಸಾವು : ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ

---Advertisement---

 

ಬೆಂಗಳೂರು: ತಂದೆಯ ಕಾರಿನಡಿ ಸಿಲುಕಿ ಮಗು ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಈ ವಿದ್ರಾವಕ ಘಟನೆ ನಡೆದಿರುವುದು ಬೆಂಗಳೂರಿನ ಬೆನಕ ಲೇಔಟ್ ನಲ್ಲಿ. ಮೃತ ಮಗುವಿಗೆ‌ ಕೇವಲ ಒಂದು ವರ್ಷ 10 ತಿಂಗಳಾಗಿತ್ತು. ಈ ದುರ್ಘಟನೆಯಿಂದ ಆ ತಂದೆಯ ಮನಸ್ಥಿತಿ ಎಷ್ಟು ನೊಂದಿರಬೇಡ.

ಮೃತ ಮಗು ಮನೆಯ ಮುಂದೆ ಆಟವಾಡುತ್ತಿತ್ತು. ಕಾರು ತೆಗೆಯಲು ಬಂದ ತಂದೆಯೂ ಮಗುವನ್ನು ಗಮನಿಸಿಲ್ಲ. ಕಾರು ಚಲಾಯಿಸುತ್ತಿದ್ದಂತೆ ಮಗು ಕಾರಿನ ಚಕ್ರಕ್ಕೆ ಸಿಲುಕಿದೆ. ಕಾರಿನ ಚಕ್ರಕ್ಕೆ ಸಿಲುಕಿ ತನ್ನ ಪುಟ್ಟ ಜೀವವನ್ನೇ ಕಳೆದುಕೊಂಡಿದೆ. ಈ ಘಟನೆ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಗವನ್ನ ಕಳೆದುಕೊಂಡ ಪೋಷಕರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.

ಅದರಲ್ಲೂ ಅಷ್ಟು ಪುಟ್ಟ ಮಗುವನ್ನು ಪೋಷಕರು ಎಷ್ಟೆಲ್ಲಾ ಕಾಳಜಿಯಿಂದ ಬೆಳೆಸಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಮೃತ ನೂತನ್ ಅಂದ್ರೆ ಮನೆಯವರಿಗೆಲ್ಲಾ ಇನ್ನಿಲ್ಲದ ಪ್ರೀತಿ. ಅಷ್ಟೇ ಮುದ್ದಾಗಿ ಸಾಕಿ ಸಲಹಿದ್ದರು. ಆದರೆ ವಿಧಿ ಬರಹ ಆ ಮಗುವನ್ನು ಈ ರೂಪದಲ್ಲಿ ಕರೆದುಕೊಂಡಿದೆ. ಅದರಲ್ಲೂ ತಂದೆಯಿಂದಾನೇ ಮಗು ಸಾವನ್ನಪ್ಪಿದ್ದು ದುರಾದೃಷ್ಟ. ಗೊತ್ತಿಲ್ಲದೆ ಆದ ತಪ್ಪಿಗೆ ಆ ತಂದೆಯ ಮನಸ್ಸು ಕೂಡ ಕೊರಗುತ್ತಿರುತ್ತದೆ. ಆ ನೋವನ್ನ ಮರೆಯುವುದಕ್ಕೆ ಅಸಾಧ್ಯವೇ ಸರಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now