Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಂದ್ರಯಾನ 3 : ಚಂದ್ರನ ಮೇಲೂ ಭಾರತ – ಚೀನಾ ಮುಖಾಮುಖಿಯಾಗಲಿದೆಯಾ..? ಇಲ್ಲಿದೆ ಆಸಕ್ತಿಕರ ಮಾಹಿತಿ…!

Facebook
Twitter
Telegram
WhatsApp

 

ಚಂದ್ರಯಾನ 3 ಸಕ್ಸಸ್ ಖುಷಿಯಲ್ಲಿ ಭಾರತ ತೇಲುತ್ತಿದೆ. ಇದರ ನಡುವೆ ಚಂದ್ರನ ಮೇಲೂ ಚೀನಾ ಭಾರತದ ಮೇಲೆ ಕಣ್ಣಿಟ್ಟಿದೆ ಎನ್ನಲಾಗಿದೆ. ಯಾಕಂದ್ರೆ ಚಂದ್ರನ ಅಂಗಳದಲ್ಲಿ ಚೀನಾ ಕಳುಹಿಸಿರುವ ರೋವರ್ ಭಾರತಕ್ಕೆ ಮುಖಾಮುಖಿಯಾಗಲಿದೆಯಾ ಎಂಬ ಪ್ರಶ್ನೆ ಎದುರಾಗಿದೆ.

ಇಸ್ರೋ ಸದ್ಯ ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಹಾಗೂ ಪ್ರಗ್ಯಾನ್ ರೋವರ್ ಚಲನೆಯತ್ತ ಗಮನ ನೀಡಿದೆ. ಇನ್ನು ಹತ್ತು ದಿನಗಳ ಕಾಲ ಮಾತ್ರ ಸಂಶೋಧನೆಗೆ ಅವಕಾಶವಿದೆ. ಯಾಕಂದ್ರೆ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ಕಾರ್ಯನಿರ್ವಹಿಸೋದು ಸೂರ್ಯನ ಬೆಳಕಿನಿಂದ . ಇನ್ನು ಹತ್ತು ದಿನಗಳ ಬಳಿಕ ಚಂದ್ರನಲ್ಲಿ ಕತ್ತಲು ಆವರಿಸುತ್ತದೆ. -200 ಸೆಲ್ಸಿಯಸ್ ಗಿಂತ ಕಡಿಮೆ ತಾಪಮಾನ ಉಂಟಾಗುವ ಕಾರಣದಿಂದ ವಿಕ್ರಂ ಹಾಗೂ ಪ್ರಗ್ಯಾನ್ ನಿಷ್ಕ್ರೀಯಗೊಳ್ಳಲಿವೆ. ಹೀಗಾಗಿ ಅಷ್ಟರೊಳಗೆ ತನ್ನ ಸಂಶೋಧನೆಯನ್ನು ನಡೆಸಬೇಕಾಗಿದೆ.

ಇನ್ನು ಚಂದ್ರನ ಮೇಲೆ ಚೀನಾ 2019ರಲ್ಲಿಯೇ ತನ್ನ U2 2 ರೋವರ್ ಅನ್ನು ಲ್ಯಾಂಡ್ ಮಾಡಿತ್ತು. ಆದರೆ ಚಂದ್ರನ ಮೇಲೆ ಕತ್ತಲು ಆವರಿಸಿದಾಗ ಚೀನಾದ ರೋವರ್ ನಿಷ್ಕ್ರೀಯಗೊಂಡಿದೆ. ಆದ್ರೆ ಈಗ ಚಂದ್ರನ ಮೇಲೆ ಸೂರ್ಯನ ಕಿರಣಗಳು ಬೀಳುತ್ತಿರುವ ಕಾರಣ ಮತ್ತೆ ಸಕ್ರೀಯಗೊಳ್ಳಲಿದೆ. ಹೀಗಾಗಿ ಚಂದ್ರನ ಮೇಲೂ ಮುಖಾ ಮುಖಿಯಾಗಲಿದೆಯಾ ಎನ್ನಲಾಗುತ್ತಿದೆ. ಆದ್ರೆ ಇಸ್ರೋ ವಿಜ್ಞಾನಿಗಳ ಪ್ರಕಾರ ಭಾರತದ ಪ್ರಗ್ಯಾನ್​ ರೋವರ್ ಹಾಗೂ ಚೀನಾದ U2 2 ರೋವರ್ ನಡುವೆ 1948 ಕಿಲೋಮೀಟರ್​ ಅಂತರವಿದೆ ಎನ್ನಲಾಗಿದೆ. ಹೀಗಾಗಿ ಚೀನಾ ಮತ್ತು ಭಾರತದ ರೋವರ್ ಪರಸ್ಪರ ಭೇಟಿಯಾಗುವ ‌ಸಾಧ್ಯತೆ ಇಲ್ಲ ಎನ್ನಲಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ರೇವಣ್ಣ ಜೊತೆ ವಿಡಿಯೋದಲ್ಲಿದ್ದ ಮಹಿಳಾ ಅಧಿಕಾರಿಗಳಿಗೂ ಸಂಕಷ್ಟ : ಎಸ್ಐಟಿಯಿಂದ ನೋಟೀಸ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋದಲ್ಲಿ ಸರ್ಕಾರಿ ಅಧಿಕಾರಿಗಳು ಕೂಡ ಇರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿ, ಅರಣ್ಯಾಧಿಕಾರಿ, ಬೆಂಗಳೂರಿನ ಎಇಇ ಫೋಟೋ, ವಿಡಿಯೋಗಳು ವೈರಲ್ ಆಗಿದ್ದವು. ಇದೀಗ ಅವರಿಗೆಲ್ಲಾ ಟೆನ್ಶನ್ ಶುರುವಾಗಿದೆ. ಎಸ್ಐಟಿ

ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟ : ಮುಖ್ಯಮಂತ್ರಿ ಸಿದ್ದರಾಮಯ್ಯ

  ಬೆಳಗಾವಿ , ಮೇ 05 : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಈ ಚುನಾವಣೆ ಎರಡನೇ ಸ್ವಾತಂತ್ರ್ಯ

ರೇವಣ್ಣ ಬಂಧನದ ಬೆನ್ನಲ್ಲೇ ದೂರು ನೀಡಲು ಬಂದ ಮೂವರು ಸಂತ್ರಸ್ತೆಯರು : ಮತ್ತಷ್ಟು ಸಂಕಷ್ಟ..!

ಬೆಂಗಳೂರು: ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ ಆರೋಪದ ಹಿನ್ನೆಲೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರನ್ನು ಎಸ್ಐಟಿ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯೊಬ್ಬರು ದೂರು ನೀಡಿರುವುದು ಹಾಗೂ ಇನ್ನೊಬ್ಬ ಸಂತ್ರಸ್ತೆಯ ಮಗ ಕಿಡ್ನ್ಯಾಪ್ ಪ್ರಕರಣದಲ್ಲಿ ದೂರು

error: Content is protected !!