5 ಕೋಟಿ ವಂಚನೆ ಪ್ರಕರಣ : ತಪ್ಪೊಪ್ಪಿಕೊಂಡ ಚೈತ್ರಾ ಕುಂದಾಪುರ..!

1 Min Read

 

ಉದ್ಯಮಿ ಗೋವಿಂದ ಬಾಬು ಟಿಕೆಟ್ ಕೊಡಿಸುತ್ತೀನಿ ಅಂತ ಐದು ಕೋಟಿ ತೆಗೆದುಕೊಂಡಿದ್ದ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಪೊಲೀಸರ ಬಂಧನದಲ್ಲಿದ್ದಾಳೆ. ಸಿಸಿಬಿ ಪೊಲೀಸರ ತನಿಖೆ ವೇಳೆ ಚೈತ್ರಾ ಕುಂದಾಪುರ ತಪ್ಪೊಪ್ಪಿಕೊಂಡಿದ್ದಾಳೆ. ಐದು ಕೋಟಿ ಪಡೆದಿರುವ ಬಗ್ಗೆ ಒಪ್ಪಿಕೊಂಡಿದ್ದಾಳೆ. ಚೈತ್ರಾ ಕುಂದಾಪುರ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ.

ನಾಟಕವಾಡಿ ಆಸ್ಪತ್ರೆಗೆ ಸೇರಿದ್ದ ಚೈತ್ರಾ ಕುಂದಾಪುರ, ಆಸ್ಪತ್ರೆಯಿಂದ ವಾಪಾಸ್ ಬಂದ ಮೇಲೆ ಮತ್ತೆ ವಿಚಾರಣೆ ನಡೆಸಿದ್ದಾರೆ. ಹಲವು ಸಾಕ್ಷಿಗಳನ್ನು ಮುಂದಿಟ್ಟ ಬಳಿಕ ಚೈತ್ರಾ ಒಪ್ಪಿಕೊಂಡಿದ್ದಾರೆ. ಚೈತ್ರಾ ಕುಂದಾಪುರ ಲೈಫ್ ನಲ್ಲಿ ಸೆಟಲ್ ಆಗುವ ಉದ್ದೇಶದಿಂದ ಈ ರೀತಿ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.

ಟಿಕೆಟ್ ಕೊಡಿಸುವ ವಿಚಾರದಲ್ಲಿ ಸಾಕಷ್ಟು ನಾಟಕದ ಸ್ಕ್ರಿಪ್ಟ್ ರೆಡಿ ಮಾಡಿದ್ದರು. ಗೋವಿಂದ ಬಾಬು ಹೆಂಡತಿಗೆ ಟಿಕೆಟ್ ಸಿಕ್ಕಿದ್ದರು ಕೂಡ ಚೈತ್ರಾ ಅಂಡ್ ಗ್ಯಾಂಗ್ ಸೇಫ್ ಆಗುತ್ತಿತ್ತು. ಆದರೆ ಟಿಕೆಟ್ ಸಿಗದ ಹಿನ್ನೆಲೆ ಲಾಕ್ ಆಗಿದ್ದಾರೆ. ಇನ್ನು ಈ ಐದು ಕೋಟಿ ಹಣದಲ್ಲಿ ಚೈತ್ರಾಗೆ ಸೇರಿದ್ದು ಮೂರು ಕೋಟಿ. 60 ಲಕ್ಷ ಹಾಲಶ್ರೀ ಸ್ವಾಮೀಜಿಗೆ ಹೋಗಿದೆ. ಇನ್ನುಳಿದ ಹಣದಲ್ಲಿ ಗ್ಯಾಂಗ್ ಹಂಚಿಕೊಂಡಿದೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks