Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೃತ ಸಂಕೇತ್ ಮನೆಗೆ ಬಿವೈ ರಾಘವೇಂದ್ರ ಭೇಟಿ : ದುಡ್ಡು ಬೇಡ ತಮ್ಮ ಬೇಕು ಎಂದ ಕುಟುಂಬಸ್ತರು..!

---Advertisement---

ಶಿವಮೊಗ್ಗ: ಯಾವುದೋ ವಿಚಾರಕ್ಕೆ ಜಗಳ ಆಡಿದ ವಿದ್ಯಾರ್ಥಿಗಳು, ಪಾಪದ ಹುಡುಗ ಸಂಕೇತ್ ನನ್ನು ಕೊಂದೇ ಬಿಟ್ಟರು. ಒಬ್ಬಳೇ ಮಗಳು, ಒಬ್ಬನೇ ಮಗ, ಸಾವಿರಾರು ಕನಸುಗಳನ್ನ ಕಂಡು ಮಕ್ಕಳನ್ನ ಓದಿಸ್ತಾ ಇದ್ರು. ಅಕ್ಕನಿಗೂ ತಮ್ಮನೆಂದರೆ ಪ್ರಾಣ. ಆ ತಾಯಿಗೆ ಮಗನ ಭವಿಷ್ಯದ ಬಗ್ಗೆ ಅಗಾಧವಾದ ಕನಸು. ಆದರೆ ಅದೆಲ್ಲವೂ ನಿನ್ನೆಗೆ ಮಣ್ಣು ಪಾಲು. ಹುಡುಗರು ಎದೆಗೆ ಹೊಡೆದ ಹೊಡೆತಕ್ಕೆ ಪ್ರಾಣ ಬಿಟ್ಟ ಸಂಕೇತ್ ಮನೆಗೆ ಸಂಸದ ಬಿವೈ ರಾಘವೇಂದ್ರ ಇಂದು ಭೇಟಿ ನೀಡಿ, ಸಾಂತ್ವಾನ ಹೇಳಿದ್ದಾರೆ.

ಪೋಷಕರ ಆಕ್ರಂದನ ಕಂಡು ರಾಘವೇಂದ್ರ ಅವರೇ ಮೌನವಾಗಿ ಕುಳಿತು ಬಿಟ್ಟರು. ಬೇರೆಯವರನ್ನು ಕಾಪಾಡಲು ಹೋದ ಹುಡುಗನಿಗೆ ಹಿಂಗಾಗಬಾರದಿತ್ತು. ಮಗಳಲ್ಲೇ ಮಗನನ್ನ ಕಾಣಿ ಎಂದು ಸಾಧ್ಯವಾದಷ್ಟು ಸಮಾಧಾನ ಮಾಡಿದರು. ಮಗಳನ್ನ ಚೆನ್ನಾಗಿ ಓದಿಸಪ್ಪ ಎಂದು ಧೈರ್ಯ ತುಂಬಿದರು. ಆ ಕ್ಷಣದಲ್ಲಿ ಒಂದಷ್ಟು ಹಣವನ್ನ ರಾಘವೇಂದ್ರ ಅವರು ಪರಿಹಾರವಾಗಿ ನೀಡಿದರು. ಆದರೆ ಮೃತ ಸಂಕೇತ್ ಅವರ ಅಕ್ಕ ಈ ಹಣ ಬೇಡ ಸರ್ ನಮ್ಗೆ ತಮ್ಮ ಬೇಕು ಅಂತಾನೇ ಕಣ್ಣೀರು ಹಾಕಿದರು.

ಮನೆ ಮಂದಿಗೆ ಸಾಂತ್ವಾನ ಹೇಳಿ ಬಿವೈ ರಾಘವೇಂದ್ರ ಅವರು ಹೊರಟರು. ಈ ವೇಳೆ ನಮಗೆ ಆದ ಅನ್ಯಾಯ ಇನ್ಯಾರಿಗೂ ಆಗಬಾರದು. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಬೇಕು ಅಂತಾನೇ ಕುಟುಂಬಸ್ಥರು ಮತ್ತೊಮ್ಮೆ ಮನವಿ ಮಾಡಿದರು. ಈ ಕೊಲೆ ಕೇಸ್ ಸಂಬಂಧ ಈಗಾಗಲೇ ಪೊಲೀಸರು ಅಪ್ತಾಪ್ತ ಬಾಲಕರನ್ನ ಅರೆಸ್ಟ್ ಮಾಡಿದ್ದಾರೆ. ವಿಚಾರಣೆಯೂ ನಡೆಯುತ್ತಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...