ಚಿತ್ರದುರ್ಗದಲ್ಲಿ ಕಲಾ ಗ್ಯಾಲರಿ ನಿರ್ಮಿಸಿ : ಕಲಾವಿದರು ಮತ್ತು ಕಲಾಭಿಮಾನಿಗಳಿಂದ ಜಿಲ್ಲಾಧಿಕಾರಿಗೆ ಮನವಿ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, (ಜು.28) : ಕಲೆ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ ಕಲಾ ವೈಭವಗಳ ತವರೂರು ಚಿತ್ರದುರ್ಗದಲ್ಲಿ ಕಲಾ ಗ್ಯಾಲರಿಯನ್ನು ನಿರ್ಮಿಸುವಂತೆ ಜಿಲ್ಲೆಯ ಚಿತ್ರ ಕಲಾವಿದರು ಮತ್ತು ನಗರದ ಕಲಾಭಿಮಾನಿಗಳು ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

ಪುಷ್ಕರಣಿಗಳು, ನೀರಿನ ಹೊಂಡಗಳು, ಗಿರಿಧಾಮ, ಕೋಟೆ ಕೊತ್ತಲಗಳಿಂದ ಕಂಗೊಳಿಸುವ ಚಿತ್ರ ಚಿತ್ತಾರಗಳು ಕಲಾ ರಸಿಕರನ್ನು ಮೊದಲಿನಿಂದಲೂ ಸೆಳೆದಿರುವ ಐತಿಹಾಸಿಕ ಚಿತ್ರದುರ್ಗದಲ್ಲಿ ಕಲೆಯನ್ನು ಜೀವಂತವಾಗಿರಿಸಬೇಕಾಗಿರುವುದರಿಂದ ಕಲಾ ಗ್ಯಾಲರಿಯನ್ನು ನಿರ್ಮಿಸಬೇಕಾಗಿದೆ. ಇಲ್ಲದಿದ್ದರೆ ನಗರ ಹಾಗೂ ಜಿಲ್ಲೆಯ ಕಲಾವಿದರಿಂದ ರೂಪುಗೊಂಡ ಕಲೆ ಮತ್ತು ಚಿತ್ರಗಳು ಕಾಲಗರ್ಭದಲ್ಲಿ ಗೆದ್ದಲು ಹಿಡಿದು ನಾಮಾವಶೇಷವಾಗಿ ಉಳಿಯಲಿರುವ ಅಪೂರ್ವ ಹಾಗೂ ಅಮೂಲ್ಯ ಚಿತ್ರಗಳನ್ನು ಸಂರಕ್ಷಿಸಿದಂತಾಗುತ್ತದೆಂದು ಜಿಲ್ಲಾಧಿಕಾರಿಯವರಲ್ಲಿ ವಿನಂತಿಸಿದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಿಲ್ಲಾಧಿಕಾರಿಗಳು ನಗರದಲ್ಲಿ ಎಲ್ಲಯಾದರೂ ಸ್ಥಳದ ಅವಕಾಶವಿದ್ದರೆ ಖಂಡಿತವಾಗಿ ಕಲಾ ಗ್ಯಾಲರಿಯನ್ನು ನಿರ್ಮಿಸುವುದಾಗಿ ಭರವಸೆ ನೀಡಿದರು.

ಕ್ರಿಯೇಟಿವ್ ವೀರೇಶ್, ನಾಗು ಆರ್ಟ್ಸ್ ನಾಗರಾಜ್, ಡಾ.ಲೋಕೇಶ್ ಅಗಸನಕಟ್ಟೆ, ಡಾ.ಸಂಗೇನಹಳ್ಳಿ ಅಶೋಕ್‍ಕುಮಾರ್, ಮೃತ್ಯುಂಜಯಪ್ಪ, ಆರ್.ವೆಂಕಟೇಶರೆಡ್ಡಿ, ಸಿದ್ದಾಪುರ ಶಿವಕುಮಾರ್, ಟಿ.ತಿಮ್ಮಾರೆಡ್ಡಿ, ಡಿ.ಟಿ.ರಮೇಶ್ ಕಲಾಲೋಕ, ಓ.ಅಂಜಿನಪ್ಪ ಹೊಸರಂಗಾಪುರ, ಜಿ.ಆರ್.ಪಾಪಯ್ಯ, ಕೆ.ಪಿ.ಎಂ.ಗಣೇಶಯ್ಯ, ದಾದು, ಕೆ.ಜಿ.ಮಲ್ಲಿಕಾರ್ಜುನ್, ಬಿ.ಮಾರುತಿ, ಕಿರಣ್, ಕೆ.ರಾಘವೇಂದ್ರ ಕಲಾಲೋಕ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks