ಬಿಎಸ್ವೈ ಮೊಮ್ಮಗಳ ಆತ್ಮಹತ್ಯೆ : ಪೊಲೀಸರ ಕೈ ಸೇರಲಿರುವ ಪೋಸ್ಟ್ ಮಾರ್ಟಂ ರಿಪೋರ್ಟ್..!

1 Min Read

ಬೆಂಗಳೂರು: ನಿನ್ನೆ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ಮಗಳು ಪದ್ಮಾವತಿ ಅವರ ಮಗಳು ಸೌಂದರ್ಯ ಆತ್ಮಹತ್ತೆ ಮಾಡಿಕೊಂಡಿದ್ದಾರೆ. ಅಪಾರ್ಟ್ಮೆಂಟ್ ನಲ್ಲಿ ತಮ್ಮ ಕೋಣೆಯಲ್ಲಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಸಂಜೆಯೇ ಅವರ ಅಂತ್ಯಕ್ರಿಯೆ ಮುಗಿದಿದೆ. ಕುಟುಂಬಸ್ಥರು ನೋವು ಮುಗಿಲುಮುಟ್ಟಿದೆ.

ಒಂಭತ್ತು ತಿಂಗಳು ಮಗುವನ್ನೇ ಬಿಟ್ಟು ಬಾರದೂರಿಗೆ ಸೌಂದರ್ಯ ಹೊರಟು ಹೋಗಿದ್ದಾರೆ. ಮಗುವಾದ ಮೇಲೆ ಸೌಂದರ್ಯ್ ಖಿನ್ನತೆಗೆ ಒಳಗಾಗಿದ್ರು, ಅದೇ ಆತ್ಮಹತ್ಯೆಗೂ ಕಾರಣ ಎಂಬ ಮಾತು ಕೂಡ ಕೇಳಿ ಬರುತ್ತಿದೆ. ನಿನ್ನೆ ಅವರ ಮೃತದೇಹವನ್ನ ಪೋಸ್ಟ್ ಮಾರ್ಟಂ ಮಾಡಿ ದೇಹ ಹಸ್ತಾಂತರ ಮಾಡಿದ್ದರು.

ಇಂದು ಆ ಪೋಸ್ಟ್ ಮಾರ್ಟಂ ವರದಿ ಪೊಲೀಸರ ಕೈಸೇರಲಿದೆ. ತಹಶೀಲ್ದಾರ್ ಮೂಲಕ ಈ ವರದಿ ಪೊಲೀಸರ ಕೈ ಸೇರಲಿದೆ. ಯಾಕಂದ್ರೆ ನಿನ್ನೆ ಪೋಸ್ಟ್ ಮಾರ್ಟಂ ವೇಳೆ ಆ ಜಾಗದಲ್ಲಿ ತಹಶೀಲ್ದಾರ್ ಕೂಡ ಇದ್ದರು. ಹೀಗಾಗಿ ಆಸ್ಪತ್ರೆಯಿಂದ ತಹಶೀಲ್ದಾರ್ ಅವರು ರಿಪೋರ್ಟ್ ಪಡೆದು, ಪೊಲೀಸರ ಕೈಗೆ ನೀಡಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *