Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೆರೆ, ನದಿ, ಕೊಳಗಳಲ್ಲಿ ಮೂಗಿಗೆ ನೀರು ಹೋದರೆ ಹುಷಾರು : ಮೆದುಳು ತಿನ್ನುವಾ ಅಮೀಬಾ ಹುಟ್ಟುವುದು ಅಲ್ಲಿಯೆ..!

Facebook
Twitter
Telegram
WhatsApp

ಕೊರೊನಾದಿಂದ ಒಂದು ವರ್ಷದಿಂದ ಚೇತರಿಸಿಕೊಳ್ಳಲಾಗಿತ್ತು. ಕೊರೊನಾ ಹೊರತಾಗಿ ಜೀವನ ಮಾಡುವುದನ್ನು ಎಲ್ಲರು ಕಲಿತಿದ್ದರು. ಆದರೆ ಇದೀಗ ಕೊರೊನಾದ ಭಯದೊಂದಿಗೆ ಮೆದುಳು ತಿನ್ನುವ ಅಮೀಬಾ ಬೇರೆ ಬಂದಿದೆ. ಇದು ಜನರಲ್ಲಿ ಸಹಜವಾಗಿಯೇ ಆತಂಕವನ್ನು ಹುಟ್ಟು ಹಾಕಿದೆ. ಈಗಾಗಲೇ ಈ ರೋಗಕ್ಕೆ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾರೆ.

ಇತ್ತಿಚೆಗಷ್ಟೆ ದಕ್ಷಿಣ ಕೊರಿಯಾದಲ್ಲಿ ಈ ರೋಗಕ್ಕೆ ವ್ಯಕ್ತಿ ಬಲಿಯಾಗಿದ್ದ. ನೆಗ್ಲೆರಿಯಾ ಪೌಲೇರಿ ಎಂಬ ಹೆಸರಿನ ಈ ರೋಗಕ್ಕೆ ಎಲ್ಲರೂ ಆತಂಕಗೊಳ್ಳುತ್ತಿದ್ದಾರೆ. ಕಾಯಿಲೆ ಕಂಡು ಬಂದ ಹತ್ತು ದಿನಕ್ಕೆ ವ್ಯಕ್ತಿ ಸಾವನ್ನಪ್ಪುತ್ತಿದ್ದಾನೆ. ಥಾಯ್ಲೆಂಡ್ ಪ್ರವಾಸ ಮುಗಿಸಿ ಬಂದ ವ್ಯಕ್ತಿಯಲ್ಲಿ ಈ ಸೋಂಕು ಕಂಡು ಬಂದಿತ್ತು. ಅಂದೇ ಅವರಿಗೆ ತೀವ್ರವಾದ ತಲೆನೋವು ಸೇರಿದಂತೆ ಹಲವು ರೋಗ ಲಕ್ಷಣಗಳು ಕಂಡು ಬಂದಿತ್ತು. ಅವರನ್ನು ಆಸ್ಪತ್ರೆಗೆ ದಾಖಲಿಸಿತ್ತಾದರೂ ಗುಣಮುಖರಾಗದೆ ಸಾವನ್ನಪ್ಪಿದರು.

ಈ ನೆಗ್ಲೆರಿಯಾ ಪೌಲೆರಿ ಎಂಬುದು ಒಂದು ಅಮಿಬಾ ರೀತಿಯ ಜೀವಿಯಾಗಿದೆ. ಈ ಜೀವಿಗಳು ಸಾಮಾನ್ಯವಾಗಿ ಕೊಳಗಳು, ನದಿಗಳು ಮತ್ತಿ ಕೆರೆಗಳಂತ ಸ್ಥಳದಲ್ಲಿ ವಾಸವಾಗಿರುತ್ತವೆ. ಈ ಜೀವಿಗಳು ಮನುಷ್ಯನ ಮೂಗಿಗೆ ಸೇರಿಕೊಂಡರೆ, ಅಲ್ಲಿಂದ ನಿಧಾನವಾಗಿ ಮೆದುಳಿನ ಭಾಗಕ್ಕೆ ಹೋಗುತ್ತವೆ. ಮೆದುಳನ್ನು ನಿಧಾನವಾಗಿ ತಿನ್ನುತ್ತಾ ಬರುತ್ತದೆ. ಇದರಿಂದ ಮೆದುಳು ಸಂಪೂರ್ಣವಾಗಿ ಹಾಳಾಗುತ್ತದೆ.

ಈ ಕಾಯಿಲೆ ಬಂದವರಿಗೆ ಗಂಟಲು ನೋವು, ವಾಂತಿ, ತಲೆನೋವು, ಮಂದಗೊಂಡ ಮಾತು ಹೀಗೆ ಅನೇಕ ಲಕ್ಷಣಗಳು ಕಾಣಿಸುತ್ತವೆ. ಇದು ದಿನದಿಂದ ದಿನಕ್ಕೆ ಹೆಚ್ಚಾಗಿ ಐದು ದಿನದಲ್ಲಿ ವ್ಯಕ್ತಿ ಸಾವನ್ನಪ್ಪುತ್ತಾನೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹಣ್ಣುಗಳ ರಾಜ ಮಾವಿನಹಣ್ಣನ್ನು ಹೀಗೆ ತಿನ್ನಿ….!

ಸುದ್ದಿಒನ್ : ಬೇಸಿಗೆಯಲ್ಲಿ ದೊರೆಯುವ ಮಾವಿನ ಹಣ್ಣುಗಳನ್ನು ಹಣ್ಣುಗಳ ರಾಜ ಎಂದು ಕರೆಯುತ್ತಾರೆ. ಇವುಗಳ ರುಚಿ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೇ ಅವು ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಹೊಂದಿರುತ್ತವೆ. ಆಯುರ್ವೇದದ ಪ್ರಕಾರ ಮಾವಿನ ಹಣ್ಣಿನಲ್ಲಿ

ಈ ರಾಶಿಯವರಿಗೆ ವಯಸ್ಸು ಮೀರುತ್ತಿದೆ ಮದುವೆ ಬಗ್ಗೆ ಯೋಚನೆ ಮಾಡುವುದು ಉತ್ತಮ

ಈ ರಾಶಿಯವರಿಗೆ ವಯಸ್ಸು ಮೀರುತ್ತಿದೆ ಮದುವೆ ಬಗ್ಗೆ ಯೋಚನೆ ಮಾಡುವುದು ಉತ್ತಮ, ಈ ರಾಶಿಯವರಿಗೆ ವಂಶೋದ್ಧಾರ ಗಂಡು ಸಂತಾನದ ಚಿಂತೆ ಭಾನುವಾರ-ರಾಶಿ ಭವಿಷ್ಯ ಮೇ-12,2024 ಶಂಕರಾಚಾರ್ಯ ಜಯಂತಿ, ತಾಯಿ ದಿನ ಸೂರ್ಯೋದಯ: 05:49, ಸೂರ್ಯಾಸ್ತ

ಖಾಸಗಿ ಶಾಲೆಗಳಿಗೆ ಫೀಸ್ ವಿಚಾರದಲ್ಲಿ ಮಧು ಬಂಗಾರಪ್ಪ ಎಚ್ವರಿಕೆಯ ಸಂದೇಶ..!

ಶಿವಮೊಗ್ಗ: ಬೇಸಿಗೆ ರಜೆ ಮುಗಿಯುವ ಸಮಯ ಬಂದಿದೆ. ಮತ್ತೆ ಮಕ್ಕಳು ಶಾಲೆಗೆ ಹೊರಡುವ ಸಮಯ. ಹೊಸ ಶೈಕ್ಷಣಿಕ ವರ್ಷ ಶುರುವಾಯ್ತಲ್ಲ ಎಂಬ ಖುಷಿಗಿಂತ ಅದೆಷ್ಟೋ ಪೋಷಕರಿಗೆ ಶಾಲಾ ಶುಲ್ಕದ್ದೇ ದೊಡ್ಡ ಚಿಂತೆಯಾಗುತ್ತದೆ. ಯಾಕಂದ್ರೆ ಖಾಸಗಿ

error: Content is protected !!