ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಬಾಗಲಕೋಟೆ: ಬಸವಕಲ್ಯಾಣ ನಗರದ ಬಿಜೆಪಿ ಶಾಸಕ ಶರಣ್ ಸಲಗಾರ್ ಅವರ ಮೇಲೆ ವಂಚನೆ ಆರೋಪ ಕೇಳಿ ಬಂದಿದೆ. ಎಫ್ಐಆರ್ ಕೂಡ ದಾಖಲಾಗಿದ್ದು, 99 ಲಕ್ಷ ಪಡೆದಿದ್ದಾರೆಂದು ದೂರಲಾಗಿದೆ. ಲೆಟರ್ ಹೆಡ್, ಖಾಲಿ ಚೆಕ್ ಕೂಡ ನೀಡಿದ್ದರು. ಈ ಬಗ್ಗೆ ಶಾಸಕ ಶರಣ್ ಸಲಗಾರ್ ಪ್ರತಿಕ್ರಿಯೆ ನೀಡಿದ್ದು, ದೂರು ಕೊಟ್ಟವರಿಗೆ, ಸಾಲ ಕೊಟ್ಟಿದ್ದೀನಿ ಎಂಬುವವರಿಗೆ ಎಲ್ಲಿಂದ ಬಂತು 99 ಲಕ್ಷ ಎಂದೇ ಕೇಳಿದ್ದಾರೆ.
ಸಂಜು ಸುಗುರೆ ಅವರು ಈ ರೀತಿ ಆರೋಪ ಮಾಡಿದ್ದಾರೆ. ಸಂಜು ಸುಗುರೆ ಅವರ ಮನೆಯಲ್ಲಿಯೇ ನನ್ನ ಲೆಟರ್ ಹೆಡ್, ಖಾಲಿ ಚೆಕ್, ಸೈನ್ ಮಾಡಿಕೊಟ್ಟಿದ್ದ ಲೆಟರ್ ಹೆಡ್ ಎಲ್ಲವೂ ಇತ್ತು. ಅವ ಬಾರಿ ವಿಶ್ವಾಸಾರ್ಹ ವ್ಯಕ್ತಿ ಎಂದು ನಂಬಿದ್ದೆ ನನ್ನ ದೊಡ್ಡ ತಪ್ಪಿದೆ. ಅವ ಬಡ್ಡಿ ವ್ಯವಹಾರ ನಡೆಸ್ತಾನೆ. ಹತ್ ಸಾವಿರ, ಇಪ್ಪತ್ ಸಾವಿರ ಹಣವನ್ನ ವಾಹನಗಳು ಇರುವವರಿಗೆ ಕೊಡ್ತಾನೆ. ಅವರು ಹಣ ವಾಪಾಸ್ ಕೊಟ್ಟಿಲ್ಲ ಅಂದ್ರೆ ಗಾಡಿಗಳನ್ನ ತಂದು ನಿಲ್ಲಿಸಿಕೊಳ್ತಾನೆ.
ಈಗ ನನಗೆ 99 ಲಕ್ಷ ಹಣವನ್ನ ಎಲ್ಲಿಂದ ಕೊಟ್ಟ ಅಂತ ಪ್ರೂವ್ ಮಾಡಬೇಕು ಸರ್. ಇಡೀ ಬಸವ ಕಲ್ಯಾಣ ಮಂದಿ ಹೇಳ್ತಾರೆ ಅವ ಎಷ್ಟು ನೀಚ ಅನ್ನೋದನ್ನ. ದುಡ್ಡಿನ ವಿಚಾರ ಬಂದಾಗ ಅವ್ನ ತಂದೆಗೆ ಹೊಡೆದವ್ನೆ. ಇಡೀ ಬಸವ ಕಲ್ಯಾಣ, ಬಾಗಲಕೋಟೆ ಮಾಧ್ಯಮದ ಎದುರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದೀನಿ. ಒಂದೂವರೆ ವರ್ಷದ ಹಿಂದೆ ನಾನು ಅವ್ನಿಗೆ ಒಂದು ಪೈಸೆ ಕೊಡುವುದಿಲ್ಲ, ಆ ರೀತಿಯ ವ್ಯವಹಾರ ಇಲ್ಲ ಅಂತಾನೇ ಹೇಳಿದ್ದೀನಿ ಎಂದು ಸ್ಪಷ್ಟನೆ ನೀಡಿದ್ದಾರೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್