ಶಾಸಕ ಚಂದ್ರು ಲಮಾಣಿ ಉಚ್ಛಾಟನೆ ಮಾಡಲು ಬಿಜೆಪಿ ಚಿಂತನೆ..!

1 Min Read

 

ಬೆಂಗಳೂರು: ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷಗಳು ಆಗಾಗ ಕೆಲವು ಅಸ್ತ್ರಗಳನ್ನ ಉಪಯೋಗಿಸಿ ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನ ಮಾಡ್ತಾರೆ. ಅದರಲ್ಲಿ ಲಂಚ ಪ್ರಕರಣವೂ ಒಂದಾಗಿರುತ್ತದೆ. ಹೀಗಿರುವಾಗ ವಿರೋಧ ಪಕ್ಷಕದಲ್ಲಿಯೇ ಲಂಚದ ವಿಚಾರದಲ್ಲಿ ಸಿಕ್ಕಿ ಬಿದ್ದರೆ ಹೇಗಿರುತ್ತೆ. ಅಂಥದ್ದೆ ಪರಿಸ್ಥಿತಿ ಈಗ ಇರೋದು ಬಿಜೆಪಿ ನಾಯಕರಲ್ಲಿ. ಲಂಚ ಪ್ರಕರಣದಲ್ಲಿ ಲೋಕಾಯುಕ್ತ ಬಲೆಗೆ ಚಂದ್ರು ಲಮಾಣಿ ಬಿದ್ದಿರೋದು ಬಿಜೆಪಿ ನಾಯಕರಿಗೆ ನುಂಗಲಾರದ ತುತ್ತಾಗಿದೆ.

 

ಆಡಳಿತ ಪಕ್ಷದ ವಿರುದ್ಧ ನಡೆಸಬೇಕಿದ್ದ ಕಮಿಷನ್ ಆರೋಪದ ಹೋರಾಟಕ್ಕೂ ಬಿಜೆಪಿಗೆ ಹಿನ್ನಡೆಯಾದಂತೆ ಆಗಿದೆ. ಹೀಗಾಗಿ ಶಿಸ್ತು ಕ್ರಮ ತೆಗೆದುಕೊಳ್ಳುವ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಒಂದು ವೇಳೆ ಲೋಕಾಯುಕ್ತ ವರದಿಯಲ್ಲಿ ಲಂಚ ಪಡೆದಿರುವುದು ಸಾಬೀತಾದರೆ ಚಂದ್ರು ಲಮಾಣಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದು ಅಥವಾ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದಾನೇ ವಜಾ ಮಾಡುವುದಕ್ಕೂ ಚಿಂತನೆ ನಡೆಸಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಆರ್.ಅಶೋಕಗ ಅವರಿಂದಾನು ಶಾಸಕ ಚಂದ್ರು ಲಮಾಣಿಗೆ ನೋಟೀಸಗ ಕೊಡುವುದಕ್ಕೆ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

ಇದರ ನಡುವೆ ಲಮಾಣಿ ಅವರ ಜಾಮೀನು ಅರ್ಜಿಯೂ ವಜಾಗೊಂಡಿದೆ. ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಜಾಮೀನಿಗರ ಅರ್ಜಿ ಸಲ್ಲಿಸಿರುವ ಲಮಾಣಿ ವಿರುದ್ಧ ನ್ಯಾ.ಸಂತೋಷ್ ಗಜಾನನ ಭಟ್ ಗರಂ ಆಗಿದ್ದಾರೆ. ತುರ್ತಾಗಿ ಜಾಮೀನು ಅರ್ಜಿ ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಕ್ಕೆ, ನಿಮ್ಮನ್ನು ಲೋಕಾಯುಕ್ತ ಟ್ರ್ಯಾಪ್ ಮಾಡಿದೆ. ನಿಮಗೆ ಶಾರ್ಟ್ ಡೇಟ್ ಬೇರೆ ಬೇಕಾ..? ಜಾಮೀನು ಯಾಕೆ ನೀಡಬೇಕು ಎಂದು ಕೋರ್ಟ್ ಪ್ರಶ್ನೆ ಮಾಡಿದೆ. ಇದರಿಂದ ಲಮಾಣಿಗೆ ಮತ್ತಷ್ಟು ಹಿನ್ನಡೆಯಾಗಿದೆ. ಈ ಸಂಬಂಧ ಲೋಕಾಯುಕ್ತ ಪೊಲೀಸರು ವಿಚಾರಣೆಯನ್ನು ಮುಂದುವರೆಸಲಿದ್ದಾರೆ.

Share This Article
Enable Notifications OK No thanks