ಹಣ ದೋಚಲು ಬಂದವರು.. ಎಣ್ಣೆ ಕಣ್ಮುಂದೆ ಇದ್ರೆ ಖಾಲಿ ಕೈನಲ್ಲಿ ಹೋದ ಕಳ್ಳರು..!

suddionenews
1 Min Read

ಚಿಕ್ಕಮಗಳೂರು: ಕಳ್ಳರು ಏನಾದರೂ ಕದಿಯಲು ಹೋದಾಗ ಅದು ಸಿಗದೇ ಹೋದರೇ ಸಿಕ್ಕಿದ್ದೇನನ್ನೋ ಬಾಚಿಕೊಂಡು ಹೋಗ್ತಾರೆ. ಆದ್ರೆ ಜಿಲ್ಲೆಯಲ್ಲಿ ನಡೆದಿರುವ ಘಟನೆ ಅದಕ್ಕೆ ತದ್ವಿರುದ್ಧವಾಗಿದೆ. ಹಣ ದೋಚಲು ಬಂದವರು, ಎಣ್ಣೆ ಕಣ್ಮುಂದೆ ಇದ್ದರು ಒಂದೇ ಒಂದು ಬಾಟೆಲ್ ಮುಟ್ಟದೆ ಹಾಗೇ ತೆರಳಿದ್ದಾರೆ.

ಜಿಲ್ಲೆಯೆ ಮೂಡಿಗೆರೆ ತಾಲೂಕಿನಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪಟ್ಟಣದಲ್ಲಿರುವ ನಾಲ್ಕು ಬಾರುಗಳಿಗೆ ನುಗ್ಗಿದ್ದಾರೆ. ಆದ್ರೆ ಆ ಬಾರುಗಳನ್ನ ಹೊಡೆದು, ಹಣ ಒಡುವ ಜಾಗದಲ್ಲೆಲ್ಲಾ ಸರ್ಚ್ ಮಾಡಿದ್ರು ನಯಾ ಪೈಸೆ ಸಿಕ್ಕಿಲ್ಲ. ಇಷ್ಟೆಲ್ಲಾ ಆದ್ರೂ ಕೂಡ ಕಳ್ಳರು ಒಂದೇ ಒಂದು ಎಣ್ಣೆಯ ಬಾಟೆಲ್ ನ್ನು ಮುಟ್ಟಿಲ್ಲದೆ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಮೂಡಿಗೆರೆಯಲ್ಲಿರುವ ಚಂದನ ಬಾರ್, ಬಣಕಲ್ ಗ್ರಾಮದ ಸಂಭ್ರಮ್ ಬಾರ್, ಗೋಣಿಬೀಡು ಮತ್ತು ಚೀಕನಹಳ್ಳಿಯಲ್ಲಿರುವ ಬಾರ್ ಗಳ ಬೀಗ ಹೊಡೆದು ಕನ್ನ ಹಾಕೋ ಯತ್ನ ನಡೆಸಿದ್ದಾರೆ. ಈ ದೃಶ್ಯ ಪಕ್ಕದ ಅಂಗಡಿಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದ್ರೆ ಕಳ್ಳರು ನಾಲ್ಕು ಬಾರ್ ಗಳಲ್ಲೂ ಹಣ ಸಿಗದೆ, ಎಣ್ಣೆಯನ್ನು ಮುಟ್ಟದೆ ವಾಪಾಸ್ ಆಗಿದ್ದಾರೆ. ಇದು ಸ್ಥಳೀಯರಿಗೆ ಶಾಕಿಂಗ್ ಆದಂತಾಗಿದೆ.

Share This Article
Leave a Comment

Leave a Reply

Your email address will not be published. Required fields are marked *