Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಹಣ ದೋಚಲು ಬಂದವರು.. ಎಣ್ಣೆ ಕಣ್ಮುಂದೆ ಇದ್ರೆ ಖಾಲಿ ಕೈನಲ್ಲಿ ಹೋದ ಕಳ್ಳರು..!

Facebook
Twitter
Telegram
WhatsApp

ಚಿಕ್ಕಮಗಳೂರು: ಕಳ್ಳರು ಏನಾದರೂ ಕದಿಯಲು ಹೋದಾಗ ಅದು ಸಿಗದೇ ಹೋದರೇ ಸಿಕ್ಕಿದ್ದೇನನ್ನೋ ಬಾಚಿಕೊಂಡು ಹೋಗ್ತಾರೆ. ಆದ್ರೆ ಜಿಲ್ಲೆಯಲ್ಲಿ ನಡೆದಿರುವ ಘಟನೆ ಅದಕ್ಕೆ ತದ್ವಿರುದ್ಧವಾಗಿದೆ. ಹಣ ದೋಚಲು ಬಂದವರು, ಎಣ್ಣೆ ಕಣ್ಮುಂದೆ ಇದ್ದರು ಒಂದೇ ಒಂದು ಬಾಟೆಲ್ ಮುಟ್ಟದೆ ಹಾಗೇ ತೆರಳಿದ್ದಾರೆ.

ಜಿಲ್ಲೆಯೆ ಮೂಡಿಗೆರೆ ತಾಲೂಕಿನಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿದ್ದಾರೆ. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಪಟ್ಟಣದಲ್ಲಿರುವ ನಾಲ್ಕು ಬಾರುಗಳಿಗೆ ನುಗ್ಗಿದ್ದಾರೆ. ಆದ್ರೆ ಆ ಬಾರುಗಳನ್ನ ಹೊಡೆದು, ಹಣ ಒಡುವ ಜಾಗದಲ್ಲೆಲ್ಲಾ ಸರ್ಚ್ ಮಾಡಿದ್ರು ನಯಾ ಪೈಸೆ ಸಿಕ್ಕಿಲ್ಲ. ಇಷ್ಟೆಲ್ಲಾ ಆದ್ರೂ ಕೂಡ ಕಳ್ಳರು ಒಂದೇ ಒಂದು ಎಣ್ಣೆಯ ಬಾಟೆಲ್ ನ್ನು ಮುಟ್ಟಿಲ್ಲದೆ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಮೂಡಿಗೆರೆಯಲ್ಲಿರುವ ಚಂದನ ಬಾರ್, ಬಣಕಲ್ ಗ್ರಾಮದ ಸಂಭ್ರಮ್ ಬಾರ್, ಗೋಣಿಬೀಡು ಮತ್ತು ಚೀಕನಹಳ್ಳಿಯಲ್ಲಿರುವ ಬಾರ್ ಗಳ ಬೀಗ ಹೊಡೆದು ಕನ್ನ ಹಾಕೋ ಯತ್ನ ನಡೆಸಿದ್ದಾರೆ. ಈ ದೃಶ್ಯ ಪಕ್ಕದ ಅಂಗಡಿಗಳ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದ್ರೆ ಕಳ್ಳರು ನಾಲ್ಕು ಬಾರ್ ಗಳಲ್ಲೂ ಹಣ ಸಿಗದೆ, ಎಣ್ಣೆಯನ್ನು ಮುಟ್ಟದೆ ವಾಪಾಸ್ ಆಗಿದ್ದಾರೆ. ಇದು ಸ್ಥಳೀಯರಿಗೆ ಶಾಕಿಂಗ್ ಆದಂತಾಗಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ ಜಿಲ್ಲಾ ವಕೀಲರಿಂದ ರಾಜವೀರ ಮದಕರಿ ನಾಯಕ ನಾಟಕಕ್ಕೆ ಚಾಲನೆ

  ಚಿತ್ರದುರ್ಗ, ಮಾರ್ಚ್. 29 : ಚಿತ್ರದುರ್ಗ ಜಿಲ್ಲಾ ವಕೀಲರ ಕಲಾ ಬಳಗದಿಂದ ರಾಜವೀರ ಮದಕರಿ ನಾಯಕ ನಾಟಕಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಅಕ್ಟೋಬರ್ 13, 2024 ರಂದು ಮದಕರಿ ನಾಯಕ ಜಯಂತಿ ಅಂಗವಾಗಿ

ನನ್ನ ರಾಜಕೀಯ ಶಕ್ತಿ ಸಾಮರ್ಥ್ಯವನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇನೆ : ಶಾಸಕ ಎಂ.ಚಂದ್ರಪ್ಪ ಸವಾಲು

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.29  : ನನ್ನ ಮಗ ಏನು ತಪ್ಪು ಮಾಡಿದ್ದಾ ಅಂತ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಟಿಕೇಟ್

BMTCಯಲ್ಲಿ 2,500 ಹುದ್ದೆಗಳು ಖಾಲಿ : ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಬಿಎಂಟಿಸಿಯಲ್ಲಿ ಖಾಲಿ ಇರುವ ಹುದ್ದಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 2,500 ಹುದ್ದೆಗಳನ್ನು ಭರ್ತಿ ಮಾಡಲು ಹೊರಟಿದೆ. ಅರ್ಜಿ ಆಹ್ವಾನ ಮಾಡಿ, ನೋಟಿಫೀಕೇಷನ್ ಹೊರಡಿಸಿದೆ. ಹೆಚ್ಚಿನ ಮಾಹಿತಿಗಾಗಿ cetonline.karnataka.gov.inಗೆ ಭೇಟಿ ನೀಡಬಹುದಾಗಿದೆ. ಅರ್ಜಿ ಹಾಕುವವರು ದ್ವಿತೀಯ

error: Content is protected !!