ಡಿಸೆಂಬರ್ 17 ರಂದು ವಿಶ್ವ ವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜು ಬಂದ್ : ಎನ್.ಎಸ್.ಯು.ಐ

suddionenews
1 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ :87220 22817

ಚಿತ್ರದುರ್ಗ,(ಡಿ.11) :  ಕಾಲೇಜುಗಳ ಹಿತಾಸಕ್ತಿಯನ್ನು ಕಡೆಗಣಿಸಿರುವ ಸರ್ಕಾರದ ಕಾರ್ಯವೈಖರಿಯನ್ನು ಖಂಡಿಸಿ ಡಿ.17 ರಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದವತಿಯಿಂದ ವಿಶ್ವ ವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜು ಬಂದ್ ಮಾಡಲಾಗುತ್ತದೆ ಎಂದು ಎನ್.ಎಸ್.ಯು.ಐನ ರಾಜ್ಯಾಧ್ಯಕ್ಷರಾದ ಕೀರ್ತಿ ಗಣೇಶ್ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಅಗತ್ಯವಾದ ವಿವಿಧ ರೀತಿಯ ಸೌಲಭ್ಯವನ್ನು ನೀಡುವಲ್ಲಿ ಹಿಂದೆ ಬಿದ್ದಿದೆ. ಡಿಸೆಂಬರ್ ಆದರೂ ಸಹಾ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ ಸಿಕ್ಕಿಲ್ಲ, ಸ್ಕಾಲರ್‍ಶಿಪ್‍ನ್ನು ನೀಡದೇ ಮಕ್ಕಳಿಗೆ ವಂಚನೆ ಮಾಡಿದೆ.

ಎನ್.ಇ.ಪಿ.ಯನ್ನು ತುರಾತುರಿಯಲ್ಲಿ ಜಾರಿ ಮಾಡಿದೆ ಇದರ ಬಗ್ಗೆ ಯಾರಿಗೂ ಸಹಾ ಸರಿಯಾದ ಮಾಹಿತಿ ಇಲ್ಲ, ವಿದ್ಯಾರ್ಥಿಗಳಿಗೆ ಅಗತ್ಯವಾದ ಸೌಲಭ್ಯಗಳು ಈ ಹಿಂದೆ ಅಗತ್ಯ ಸಮಯಕ್ಕೆ ಸಿಗುತ್ತಿದ್ದವು ಅದರೆ ಈಗಿನ ಸರ್ಕಾರ ಅದಕ್ಕೆ ಕಡಿವಾಣವನ್ನು ಹಾಕಿದೆ. ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಶುಲ್ಕವನ್ನು ಹೆಚ್ಚಳ ಮಾಡಿ ಸರ್ಕಾರಿ ಶಾಲೆಗಳನ್ನು ಖಾಸಗಿಕರಣ ಮಾಡುವ ಹುನ್ನಾರ ಸರ್ಕಾರದ್ದಾಗಿದೆ ಎಂದು ದೂರಿದರು.

ಸ್ಕಾಲರ್ ಶಿಪ್  ಅನ್ನು ಬಳಕೆ ಮಾಡಿಕೊಂಡು ಹಲವಾರು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದರು ಆದರೆ ಈ ಬಾರಿ ಸರ್ಕಾರ ಅದಕ್ಕೂ ಸಹಾ ಕಲ್ಲಾಕಿದೆ ಅದನ್ನು ನೀಡದೆ ವಿದ್ಯಾರ್ಥಿಗಳಿಗೆ ವಂಚನೆ ಮಾಡಿದೆ. ವಿವಿಗಳಲ್ಲಿ ಇದುವರೆವಿಗೂ ಉತೀರ್ಣರಾದ ವಿದ್ಯಾರ್ಥಿಗಳಿಗೆ ಅಂಕ ಪಟ್ಟಿಯನ್ನು ನೀಡಿಲ್ಲ, ಇದರಿಂದ ಸ್ಕಾಲರ್‍ಶಿಪ್ ಬಂದಿಲ್ಲ,ಪಿಯುನಿಂದ ಪಿಜಿಯವರೆಗೂ ಡಿ.17ರಂದು ಬಂದ್ ಮಾಡಲಾಗುವುದು. ಇದರಿಂದ ಸರ್ಕಾರ ಎಚ್ಚತ್ತುಕೊಂಡರೆ ಸರಿ ಇಲ್ಲವಾದರೆ ಮುಂದಿನ ದಿನಮಾನದಲ್ಲಿ ಹೋರಾಟವನ್ನು ರೂಪಿಸಲಾಗುವುದೆಂದು ಕೀರ್ತಿ ಗಣೇಶ್ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.

ಜಿಲ್ಲಾಧ್ಯಕ್ಷ ವಿನಯ್ ಗೋಡೆಮನೆ ಮಾತನಾಡಿ ವಿದ್ಯಾರ್ಥಿಗಳಿಗೆ ಸರ್ಕಾರ ಸೌಲಭ್ಯವನ್ನು ನೀಡುವಲ್ಲಿ ಮೀನಾಮೇಷ ಮಾಡುತ್ತಿದೆ. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತವಾದ ಬಸ್‍ಪಾಸ್ ನೀಡದೇ ಶಿಕ್ಷಣವನ್ನು ಕುಂಠಿತವಾಗುವಂತೆ ಮಾಡಿದೆ. ಸಮಯಕ್ಕೆ ಸರಿಯಾಗಿ ಸ್ಕಾಲರ್‍ಶಿಪ್ ನೀಡದೇ ಸರ್ಕಾರ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುತ್ತಿದೆ ಎಂದು ದೂರಿದರು.

ರಾಜ್ಯ ಕಾರ್ಯದರ್ಶಿ ರತೀಕ್, ಹೂಸದುರ್ಗ ಅಧ್ಯಕ್ಷ ಪವನ್, ಮಮತ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *