Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರೇಣುಕಾಸ್ವಾಮಿ ಕೊಲೆ ಆರೋಪಿ ಪ್ರದೂಷ್ ಗೆ ಜಾಮೀನು..!

---Advertisement---

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿ ಪ್ರದೂಷ್ ಗೆ ಐದು ದಿನಗಳ ಕಾಲ ಜಾಮೀನು ಸಿಕ್ಕಿದೆ. ಪ್ರದೂಶ್ ಕೊಲೆ ಪ್ರಕರಣದಲ್ಲಿ ಐದನೇ ಆರೋಪಿಯಾಗಿದ್ದಾರೆ. ಇದೀಗ 57ನೇ ಸಿಸಿಹೆಚ್ ಕೋರ್ಟ್ ಪ್ರದೂಶ್ ಗೆ ಜಾಮೀನು ನೀಡಿದೆ. ಪ್ರದೂಶ್ ಅವರ ತಂದೆಯ ಕಾರ್ಯಗಳನ್ನ ಮಾಡುವುದಕ್ಕೆ ಜಾಮೀನು ನೀಡಲಾಗಿದೆ.

ಪ್ರದೂಶ್ ಎರಡನೇ ಬಾರಿಗೆ ಜೈಲು ಸೇರಿದ ಮೇಲೆ ಅವರ ತಂದೆ ನಿಧನರಾಗಿದ್ದರು‌. ಕಳೆದ ಅಕ್ಟೋಬರ್ ನಲ್ಲಿ ಎಲ್ಲರನ್ನು ಬಿಟ್ಟು ಅಗಲಿದ್ದರು. ಹೀಗಾಗಿ ಪ್ರದೂಶ್ ಗೆ ಕೋರ್ಟ್ 20 ದಿನಗಳ ಕಾಲ ಮಧ್ಯಂತರ ಜಾಮೀನು ನೀಡಿತ್ತು. ತಂದೆಯ ನಿಧನದ ಕಾರ್ಯವನ್ನೆಲ್ಲ ಮುಗಿಸಿ, ವಾಪಾಸ್ ಬರುವಮನತೆ ಸೂಚನೆ ನೀಡಿತ್ತು. ಅದರಮನತೆ 20 ದಿನಗಳು ಕಳೆದ ಬಳಿಕ ಪ್ರದೂಶ್ ಜೈಲಿಗೆ ವಾಪಾಸ್ ಆಗಿದ್ದರು. ಆದರೆ ತಂದೆಯ ಪುಣ್ಯ ಸ್ಮರಣೆ ಸೇರಿದಂತೆ ಹಲವು ಕೆಲಸಗಳು ಇರುವ ಕಾರಣ ಮತ್ತೆ ಐದು ದಿನಗಳ ಕಾಲ ಅನುಮತಿ ನೀಡಲಾಗಿದೆ.

ಪ್ರದೂಶ್ ಅವರ ಪರ ವಕೀಲರು ಕೋರ್ಟ್ ಅರ್ಜಿ ಸಲ್ಲಿಕೆ ಮಾಡಿ ಮನವಿ ಮಾಡಿದ್ದರು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಐದು ದಿನಗಳ ಕಾಲ ಮತ್ತೆ ಜಾಮೀನನ್ನು ನೀಡಿದೆ. ನವೆಂಬರ್ 18 ರಿಂದ ನ.22ರ ವರೆಗೆ ಜಾಮೀನು ಮಂಜೂರು ಮಾಡಿದ್ದು, ಅವಧಿ ಮುಗಿದ ಬಳಿಕ ಪರಪ್ಪನ ಅಗ್ರಹಾರಕ್ಕೆ ಮರಳುವಂತೆ ಸೂಚಿಸಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಕೂಡ ಜಾಮೀನಿಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದರು. ಸುಪ್ರೀಂ ಕೋರ್ಟ್ ಅದಕ್ಕೆ ಸೊಪ್ಪು ಹಾಕಿಲ್ಲ. ದರ್ಶನ್ ಹಾಸಿಗೆ, ದಿಂಬಿಗಾಗಿ ಕೋರ್ಟ್ ನಲ್ಲಿ ಹೋರಾಟ ಮಾಡ್ತಾ ಇದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now