ಬೆಂಗಳೂರು: ಕಾಂಗ್ರೆಸ್ ನವರ ಮತದಾರರ ದತ್ತಾಂಶ ಕದಿಯುತ್ತಿದ್ದಾರೆ ಎಂಬ ಆರೋಪಕ್ಕೆ ಸಚಿವ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯೆ ನೀಡಿದ್ದು, ಇಂತಹ ನಿರಾಧಾರ ಆಪಾದನೆಯನ್ನು ಖಂಡಿಸುತ್ತೇನೆ. ಚುನಾವಣಾ ಆಯೋಗದ ಹಿನ್ನೆಲೆಯಲ್ಲಿ ಅದು ನಡೆದಿರುತ್ತೆ. ಆಯೋಗದ ಅಡಿಯಲ್ಲಿ ಇದು ನಡೆಯುತ್ತೆ.ಕಾಂಗ್ರೆಸ್ ನವರು ದೂರು ನೀಡಲಿ ಚುನಾವಣಾ ಆಯೋಗ ಅದನ್ನು ನೋಡಿಕೊಳ್ಳುತ್ತೆ. ಪಕ್ಷ ಸರ್ಕಾರದ ಅಡಿ ಆಗಲ್ಲ ಎಂದಿದ್ದಾರೆ.
ಹೊಂಬಾಳೆ ಸಂಸ್ಥೆಗೂ ಚಿಲುಮೆ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಹೊಂಬಾಳೆ ಸಂಸ್ಥೆ ನಮ್ಮ ನಾಡಿಗೆ, ಸಿನಿಮಾಗೆ ಗೌರವ ತಂದಿದೆ. ಇಂತಹ ಕೀಳು ಮಟ್ಟದ ರೇಂಜಿಗೆ ಮಾತನಾಡುವಂತೆ ಹೊಂಬಾಳೆ ಇಲ್ಲ. ಆರೋಪ ಮಾಡುವವರು ನೋಡಿಕೊಂಡು ಮಾತನಾಡಲಿ ಎಂದಿದ್ದಾರೆ.
ಇನ್ನು ಕೃಷ್ಣಪ್ಪ ಎಂಬುವವರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಹೌದು ಕೃಷ್ಣಪ್ಪ ಎಂಬುವವರು ಗೊತ್ತು. ಸಾಮಾಜಿಕ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾಗ ಪರಿಚಯವಾಗಿದ್ದರು. ಯಾಕೆ ಕಾರ್ಯಕ್ರಮಕ್ಕೆ ಹೋಗುವುದನ್ನು ಕಾಂಗ್ರೆಸ್ ನವರಿಗೆ ಕೇಳಿಕೊಂಡು ಹೋಗಬೇಕಾ..? ಕಾರ್ಯಕ್ರಮಕ್ಕೆ ಕರೆದಿದ್ದರು ಹೋಗಿದ್ದೆ, ಅದು ತಪ್ಪಾ..? ಎಂದು ಪ್ರಶ್ನಿಸಿದ್ದಾರೆ.