Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ವಿಪರೀತ ಕೆಮ್ಮು ಕಾಡುತ್ತಿದೆಯಾ..? ಈ ಮನೆಮದ್ದು ಟ್ರೈ ಮಾಡಿ

---Advertisement---

ಕೆಲವೊಬ್ಬರಿಗೆ ಕೆಮ್ಮು ಸಿಕ್ಕಾಪಟ್ಟೆ ಹಿಂಸೆ ಕೊಡುತ್ತದೆ. ಎಷ್ಟೆ ಔಷಧ ತೆಗೆದುಕೊಂಡರೂ ಅದಕ್ಕೆ ಪರಿಹಾರ ಸಿಗುವುದಿಲ್ಲ. ಕೆಮ್ಮು ಹೆಚ್ಚಾದರೆ ಈ ಮನೆಮದ್ದುಗಳನ್ನು ಬಳಸಿ ನೋಡಿ.

* ಕೆಮ್ಮು ಮತ್ತು ನೆಗಡಿ ಇದ್ದಾಗ ಒಂದು ಬಟ್ಟಲು ಹಾಲಿಗೆ ಒಂದು ಟೀ ಸ್ಪೂನಿನಷ್ಟು ಅರಿಶಿನ ಪುಡಿ ಹಾಗೂ ಕರಿಮೆಣಸಿನ ಪುಡಿ ಸೇರಿಸಿ, ಕುದಿಸಿ ದಿನವೂ ಒಂದೆರಡು ಬಾರಿ ಕುಡಿಯುತ್ತಿದ್ದರೆ ಕೆಲವೇ ದಿನದಲ್ಲಿ ಕೆಮ್ಮು ನಿಂತುಹೋಗುವುದು.

* ಜೇನುತುಪ್ಪಕ್ಕೆ ಮೂಲಂಗಿ ರಸವನ್ನು ಸಮತೂಕದಲ್ಲಿ ಸೇರಿಸಿ, ಒಂದು ಟೀ ಸ್ಪೂನಿನಷ್ಟು ದಿನವೂ ಮೂರು ಬಾರಿ ಸೇವಿಸುತ್ತಿದ್ದರೆ ಕೆಮ್ಮು ಕಡಿಮೆ ಆಗುವುದು.

* ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಶೀತದ ಕೆಮ್ಮು ನಿವಾರಣೆ ಆಗುವುದು.

*ದಿನಕ್ಕೊಂದು ಸೇಬನ್ನು ವಾರದವರೆಗೆ ತಿನ್ನುತ್ತಿದ್ದರೆ ಒಣ ನಿಂತು ಹೋಗುವುದು.

* ಮಜ್ಜಿಗೆ ಅನ್ನಕ್ಕೆ ಹಸಿ ಈರುಳ್ಳಿ ನೆಂಜಿಕೊಂಡು ತಿನ್ನುತ್ತಿದ್ದರೆ ಉಷ್ಣದ ಕೆಮ ನಿಲ್ಲುವುದು.

* ಶ್ರೀಗಂಧದ ಚೂರ್ಣವನ್ನು ಜೇನುತುಪ್ಪದೊಂದಿಗೆ ಬೆರೆಸಿ ದಿನವೂ ನಾಲೈದು ಬಾರಿ ಮಗುವಿನ ನಾಲಿಗೆಯ ಮೇಲೆ ಲೇಪಿಸುತ್ತಿದ್ದರೆ ನಾಯಿ ಕೆಮ್ಮು ನಿಂತು ಹೋಗುವುದು.

* ಲವಂಗವನ್ನು ಉಪ್ಪಿನ ಹರಳಿನೊಂದಿಗೆ ಚಪ್ಪರಿಸುತ್ತಿದ್ದರೆ ದೀರ್ಘ ಕಾಲದ ಕೆಮ್ಮು ಕಡಿಮೆ ಆಗುತ್ತಾ ಹೋಗುವುದು.

* ಮಕ್ಕಳಿಗೆ ಕೆಮ್ಮು ಬಂದಾಗ ಒಂದು ಟೀ ಸ್ಪೂನಿನಷ್ಟು ಕತ್ತೆಯ ಹಾಲಿಗೆ ಸಕ್ಕರೆ ಬೆರೆಸದೇ ಕುಡಿಸಿದರೆ ಕೆಮ್ಮು ನಿಲ್ಲುವುದು.

* ಬಿಸಿ ಮಾಡಿದ ಹುರಿಗಡಲೆಯನ್ನು ಆಗಾಗ ಮೂಸಿ ನೋಡುವುದರಿಂದಲೂ ಕೆಮ್ಮು ನಿಲ್ಲುವುದು ಈ ರೀತಿ ಮನೆ ಮದ್ದುಗಳನ್ನು ಮಾಡುವುದರಿಂದ ಕೆಮ್ಮು ಬೇಗನೆ ವಾಸಿಯಾಗುತ್ತದೆ. ಮಾತ್ರೆ, ಟಾನಿಕ್ ತೆಗೆದುಕೊಳ್ಳುವುದಕ್ಕಿಂತ ಈ ರೀತಿಯ ಮನೆ ಮದ್ದುಗಳು ತುಂಬಾ ಉತ್ತಮ. ಮತ್ತೆ ಬೇಗನೇ ಅನಾರೋಗ್ಯ ಕಾಡುವುದಿಲ್ಲ. ಈ ಮನೆ ಮದ್ದುಗಳು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...