ಹಿಂದೂ ಮಹಾ ಗಣಪತಿ ಉತ್ಸವ ಸಮಿತಿಗೆ ಸದಸ್ಯರ ನೇಮಕ : ಅಧ್ಯಕ್ಷರಾಗಿ ನಯನ್ ಆಯ್ಕೆ

1 Min Read

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,  ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್.04  : ವಿಶ್ವಹಿಂದು ಪರಿಷತ್, ಭಜರಂಗದಳದ ನೇತೃತ್ವದಲ್ಲಿ ಪ್ರತಿ ವರ್ಷವೂ ಪ್ರತಿಷ್ಠಾಪಿಸಲಾಗುವ ಹಿಂದೂ ಮಹಾ ಗಣಪತಿ ಉತ್ಸವ ಸಮಿತಿಗೆ ಅಧ್ಯಕ್ಷರಾಗಿ ಸಾಯಿ ಮೊಬೈಲ್‍ನ ನಯನ್ ಬಿ. ಆಯ್ಕೆಯಾಗಿದ್ದಾರೆ.

ಸಮಿತಿಯ ಮಾರ್ಗದರ್ಶಕರಾಗಿ ಟಿ.ಭದ್ರಿನಾಥ್, ಪ್ರಧಾನ ಕಾರ್ಯದರ್ಶಿಯಾಗಿ ಐಶ್ವರ್ಯ ಫೋರ್ಟ್‍ನ ಶರಣ್‍ಕುಮಾರ್, ಖಜಾಂಚಿಯಾಗಿ ಕಾವೇರಿ ವಾಟರ್‍ನ ಅಜಿತ್, ಉಪಾಧ್ಯಕ್ಷರಾಗಿ ಪ್ರಶಾಂತ್ ಅಪ್ಪಾಜಿ ಪರಿಸರ, ಶ್ರೀರಂಗ ಗ್ರಾನೈಟ್‍ನ ಚೇತನ್‍ಬಾಬು, ಕಾರ್ಯದರ್ಶಿಯಾಗಿ ನಗರಸಭೆ ಸದಸ್ಯ ಶಶಿಧರ್, ಬಿ.ವಿ.ಕೆ.ಎಸ್. ಲೇಔಟ್ ಮಾಲೀಕ ಕಾರ್ತಿಕ್, ಸಂಚಾಲಕರಾಗಿ ಬಜರಂಗದಳ ಕರ್ನಾಟಕ ಪ್ರಾಂತ ಸಂಯೋಜಕ ಪ್ರಬಂಜನ್, ಸಹ ಸಂಚಾಲಕರಾಗಿ ಬಜರಂಗದಳ ಜಿಲ್ಲಾ ಸಂಯೋಜಕ ಸಂದೀಪ್, ವಿ.ಹೆಚ್.ಪಿ. ನಗರ ಉಪಾಧ್ಯಕ್ಷ ರಂಗಸ್ವಾಮಿ
ಸೇರಿದಂತೆ ನಲವತ್ತಕ್ಕೂ ಹೆಚ್ಚು ಸಮಿತಿ ಸದಸ್ಯರುಗಳನ್ನು ಒಳಗೊಂಡಂತೆ ನೂತನ ಸಮಿತಿ ರಚಿಸಲಾಗಿದೆ.

ಪೂಜಾ ಸಮಿತಿ, ಪ್ರಸಾದ ಸಮಿತಿ, ಸ್ವಚ್ಚತಾ ಸಮಿತಿ, ಕಾರ್ಯಕ್ರಮ ಸಮಿತಿ, ಪ್ರಚಾರ ಸಮಿತಿ, ಶೋಭಾ ಯಾತ್ರೆ ಸಮಿತಿ ಹಾಗೂ ಇತರೆ ಉಪ ಸಮಿತಿಗಳನ್ನು ರಚಿಸಿ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿಯನ್ನು ವಹಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *