ಕಾಂತಾರ-1 ಸಿನಿಮಾಗೆ ಮತ್ತೊಂದು ಅವಘಡ : ಮಗುಚಿಬಿದ್ದ ರಿಷಬ್ ಶೆಟ್ಟಿ ಇದ್ದ ದೋಣಿ..!

suddionenews
1 Min Read

 

ಶಿವಮೊಗ್ಗ; ಕಾಂತಾರಾ 1 ಸಿನಿಮಾ ಶುರುವಾದಾಗಿನಿಂದ ಸಮಸ್ಯೆಗಳ ಮೇಲೆ ಸಮಸ್ಯೆಗಳು ಬರ್ತಾನೆ ಇದಾವೆ. ಅದರಲ್ಲೂ ಸಾವು ನೋವುಗಳೇ ಹೆಚ್ಚಾಗಿದಾವೆ. ಈಗಾಗಲೇ ಮೂರು ಜನ ಸಹ ಕಲಾವಿದರು ಸಾವನ್ನಪ್ಪಿದ್ದಾರೆ. ಇದನ್ನ ಮರೆಯುವ ಮುನ್ನವೇ ಕಾಂತಾರ ಪಾರ್ಟ್ 1 ಸೆಟ್ ನಲ್ಲಿ ದೊಡ್ಡ ಅವಾಂತರವೇ ನಡೆದಿದೆ. ಅದು ಶೂಟಿಂಗ್ ಮಾಡುವಾಗ, ರಿಷಬ್ ಶೆಟ್ಟಿ ಇದ್ದ ದೋಣಿ ಮಗುಚಿ ಬಿದ್ದಿದೆ.

ಕಾಂತಾರ 1 ಸಿನಿಮಾದ ಶೂಟಿಂಗ್ ಸದ್ಯಕ್ಕೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯುತ್ತಿದೆ. ತೀರ್ಥಹಳ್ಳಿಯಲ್ಲಿರುವ ಮಾಸ್ತಿಕಟ್ಟೆ ಮಾಣಿ ಜಲಾಶಯದಲ್ಲಿ ಸಿನಿಮಾದ ಶೂಟಿಂಗ್ ನಡೀತಾ ಇದೆ. ಈ ಜಲಾಶಯದಲ್ಲಿ ದೋಣಿಯಲ್ಲಿ ಸಾಗುವ ದೃಶ್ಯವನ್ನ ಚಿತ್ರೀಕರಣ ಮಾಡಲಾಗುತ್ತಿತ್ತು. ಆದರೆ ಇದ್ದಕ್ಕಿದ್ದ ಹಾಗೇ ದೋಣಿ ಮಡುಚಿ ಬಿದ್ದಿದೆ. ದೋಣಿ ಬೀಳುತ್ತಿದ್ದಂತೆ ಎಲ್ಲರೂ ಗಾಬರಿಯಾಗಿದ್ದಾರೆ. ಶೂಟಿಂಗ್ ಮಾಡುವ ವೇಳೆಯೇ ಇಂಥ ಅವಗಢ ಸಂಭವಿಸಿದೆ.

ಈ ದೋಣಿಯಲ್ಲಿ ರಿಷಬ್ ಶೆಟ್ಟಿ ಸೇರಿದಂತೆ 30 ಜನ ಇದ್ದರು. ದೋಣಿ ಬೀಳುತ್ತಿದ್ದಂತೆ ಕ್ಯಾಮೆರಾಗಳ ಸಮೇತ ಜಲಾಶಯಕ್ಕೆ ಬಿದ್ದಿದ್ದಾರೆ. ಎಲ್ಲರಿಗೂ ಈಜು ಬರುತ್ತಿದ್ದ ಕಾರಣ ಈಜಿ ದಡ ಸೇರಿದ್ದಾರೆ. ಅದೃಷ್ಟವಶಾತ್ ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಆದರೆ ದುಬಾರಿ ಕ್ಯಾಮೆರಾಗಳು ನೀರು ಪಾಲಾಗಿವೆ. ಅದ್ದೂರಿ ವೆಚ್ಚದಲ್ಲಿ ಸಿನಿಮಾವನ್ನೆರ ನಿರ್ಮಾಣ ಮಾಡುತ್ತಿರುವ ಸಂಸ್ಥೆಗೆ ಕ್ಯಾಮೆರಾಗಳ ಬಗ್ಗೆ ಚಿಂತೆಯಿಲ್ಲ. ಯಾರಿಗೂ ಏನು ಆಗಲಿಲ್ಲವಲ್ಲ ಅದು ನೆಮ್ಮದಿ ಎನಿಸಿದೆ. ಹೀಗೆ ಪದೇ ಪದೇ ಜೀವ ಹಾನಿಯಾಗುವ ಪರಿಸ್ಥಿತಿ ಉದ್ಭವಿಸುತ್ತಿದೆ. ಕಾಂತಾರ1 ಸಿನಿಮಾವನ್ನು ಇದೇ ವರ್ಷ ರಿಲೀಸ್ ಮಾಡುವುದಾಗಿಯೂ ಘೋಷಿಸಿದ್ದಾರೆ. ಆದರೆ ಕಲಾವಿದರ ಸಾವು, ಚಿತ್ರೀಕರಣಕ್ಕೆ ಅಡಚಣೆಗಳು ಬರ್ತಾನೆ ಇದಾವೆ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks