ಬೆಂಗಳೂರು; ನಮ್ಮ ಸಿಲಿಕಾನ್ ಸಿಟಿ ಐಟಿ ಬಿಟಿ ಕ್ಯಾಪಿಟಲ್ ಅಂತಾನೇ ಖ್ಯಾತಿ. ಬೆಂಗಳೂರು ಎಂಬ ಮಹಾನಗರದಲ್ಲಿ ಏನಿಲ್ಲ ಹೇಳಿ. ಎಲ್ಲವೂ ಇದೆ. ಯಾವ ರಾಜ್ಯದಿಂದ ಬಂದರೂ ಹೈಫೈ ಜೀವನ ಮಾಡುವಂತ ಅವಕಾಶವೂ ಇದೆ. ದೊಡ್ಡ ದೊಡ್ಡ ಕಂಪನಿಗಳು ತಲೆ ಎತ್ತಿ ನಿಂತಿವೆ. ಇದೀಗ HAL ಮೇಲೆ ಆಂಧ್ರ ಪ್ರದೇಶದ ಸಿಎಂ ಚಂದ್ರ ಬಾಬು ನಾಯ್ಡು ಕಣ್ಣಾಕಿದ್ದು, ತಮ್ಮ ರಾಜ್ಯದತ್ತ ಶಿಫ್ಟ್ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮುಗಿ ಬಿದ್ದಿದ್ದಾರೆ. ಕಂಪನಿ ಜಾಗಕ್ಕೆ ಆಂಧ್ರಪ್ರದೇಶದಲ್ಲಿಯೇ ಜಾಗವನ್ನು ಗುರುತಿಸಿದೆ.
ಬೆಂಗಳೂರಿನಲ್ಲಿರುವ HAL ಉತ್ಪಾದನಾ ಘಟಕ, ಅಡ್ವಾನ್ಸ್ ಮೀಡಿಯಂ ಕಂಬ್ಯಾಟ್ ಏರ್ ಕ್ರಾಫ್ಟ್ ಘಟಕ, ಲೈಟ್ ಕಂಬ್ಯಾಟ್ ಏರ್ ಕ್ರಾಫ್ಟ್ ಘಟಕವನ್ನು ಶಿಫ್ಟ್ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೆಲ್ಲಾ ಆಂಧ್ರಪ್ರದೇಶಕ್ಕೆ ಶಿಫ್ಟ್ ಮಾಡಿದರೆ ಹೆಚ್ಎಎಲ್ ಕಂಪನಿಗೆ 10 ಸಾವಿರ ಎಕರೆ ಭೂಮಿ ಕೊಡುವುದಕ್ಕೆ ಸಿದ್ಧ ಎಂದು ತಿಳಿಸಿದ್ದಾರೆ.
ಮಡಕಶಿರಾ – ಲೇಪಾಕ್ಷಿ ಮಧ್ಯೆ ಸ್ಥಳಗಳಲ್ಲಿ ಜಾಗ ಕೊಡ್ತೇವೆ. ಅಲ್ಲಿ 5ನೇ ಜನರೇಷನ್ ಏರ್ ಕ್ರಾಫ್ಟ್ ಉತ್ಪಾದನೆಗೆ ಆಂಧ್ರಪ್ರದೇಶ ಒಲವು ತೋರಿದೆ. ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್ ಹಬ್ ಗಳ ಸ್ಥಾಪನೆ ಮಾಡುತ್ತೇವೆ. ಬೆಂಗಳೂರಿನಲ್ಲಿ HAL ಬೆಳವಣಿಗೆ ತುತ್ತತುದಿ ತಲುಪಿದೆ. ಈಗ ಹೆಚ್ಎಎಲ್ ಗೆ ಹೆಚ್ಚಿನ ಜಾಗದ ಅಗತ್ಯವಿದೆ. ಹೀಗಾಗಿ ಆಂಧ್ರಪ್ರದೇಶ ಇದಕ್ಕೆ ಹೆಚ್ಚಿನ ಜಾಗ ಕೊಡುವುದಕ್ಕೆ ಸಿದ್ಧ ಎಂದಿದೆ. ಅಷ್ಟೇ ಅಲ್ಲ ದೊನಕೊಂಡದಲ್ಲಿ ವಾಯುಪಡೆ ಸ್ಟೇಷನ್ ಸ್ಥಾಪನೆಗೂ ಸಿಎಂ ಚಂದ್ರಬಾಬು ನಾಯ್ಡು ಮನವಿ ಮಾಡಿದ್ದಾರಂತೆ. ಒಂದು ವೇಳೆ ಚಂದ್ರಬಾಬು ನಾಯ್ಡು ಮನವಿಗೆ ಕೇಂದ್ರ ಒಪ್ಪಿ, ಶಿಫ್ಟ್ ಮಾಡಿದರೆ ಕನ್ನಡಿಗರು ಇದನ್ನ ಹೇಗೆ ಸ್ವೀಕಾರಾ ಮಾಡ್ತಾರೆ ಎಂಬುದೇ ಪ್ರಶ್ನೆ.















