ಅಮಿತ್ ಶಾ ಭೇಟಿ ; ಜನಾರ್ದನ ರೆಡ್ಡಿಗೆ ಅವಕಾಶ.. ಶ್ರೀರಾಮುಲುಗೆ ಮಿಸ್ ; ಬಳ್ಳಾರಿಯಲ್ಲಿ ಬಾರೀ ಚರ್ಚೆ

ಬೆಂಗಳೂರು; ಬಳ್ಳಾರಿ ರಾಜಕಾರಣದಲ್ಲಿ ಆಗಾಗ ಶ್ರೀರಾಮುಲು ವರ್ಸಸ್ ಜನಾರ್ದನ ರೆಡ್ಡಿ ಎಂಬುದು ಚರ್ಚೆಯಾಗುತ್ತಲೇ ಇರುತ್ತದೆ. ಇದೀಗ ಅಮಿತ್ ವಿಚಾರಕ್ಕೆ ಬಳ್ಳಾರಿ ರಾಜಕಾರಣದಲ್ಲಿ ಚರ್ಚೆ ಜೋರಾಗಿದೆ. ಯಾಕಂದ್ರೆ ಕೇಂದ್ರ ಸಚಿವ ಅಮಿತ್ ಶಾ, ಜನಾರ್ದನ ರೆಡ್ಡಿಗೆ ಭೇಟಿಗೆ ಅವಕಾಶ ನೀಡಿದ್ದು, ಶ್ರೀರಾಮುಲುಗೆ ನೀಡಿಲ್ಲದೆ ಇರುವುದು ಶಾಕಿಂಗ್ ವಿಚಾರವಾಗಿದೆ.

ಸಹೋದರರಂತೆ ಇದ್ದ ರಾಮುಲು ಹಾಗೂ ರೆಡ್ಡಿ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಆದ್ರೆ ರಾಜ್ಯ ನಾಯಕರ ಮುನಿಸಿನ ಬಗ್ಗೆ ಮಾತನಾಡುವುದಕ್ಕೇನೆ ಶ್ರೀರಾಮುಲು ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಲು ಹೋಗಿದ್ದರು. ಆದರೆ ಅವರ ಭೇಟಿ ಸಾಧ್ಯವಾಗಿಲ್ಲ. ರಾಮುಲು ಹಾಗೂ ರೆಡ್ಡಿ ಸಾರ್ವಜನಿಕವಾಗಿ ಕಿತ್ತಾಡಿದ್ದನ್ನು ಕಂಡು ಹೈಕಮಾಂಡ್ ನಾಯಕರೇ ಶ್ರೀರಾಮುಲು ಅವರಿಗೆ ದೆಹಲಿಗೆ ಬರುವಂತೆ ಅವಕಾಶ ನೀಡಿದ್ದರು. ಆದರೆ ಸದ್ಯಕ್ಕೆ ಬರುವುದು ಬೇಡ ಅಂತಾನೂ ಹೇಳಿದ್ದರು. ಸರಿ ಅಂತ ಸುಮ್ಮನಾಗಿದ್ದ ರಾಮುಲು, ಅಮಿತ್ ಶಾ ಬೆಂಗಳೂರಿಗೆ ಬಂದ ಮೇಲೆ ಇಲ್ಲಿಯೇ ಭೇಟಿ ಮಾಡೋಣಾ‌ ಅಂತ ಸುಮ್ಮನಾಗಿದ್ದರು.

ಆದರೆ ರೆಡ್ಡಿಗಿಂತ ಮೊದಲೇ ಅಮಿತ್ ಶಾ ಅವರನ್ನ ಭೇಟಿ ಮಾಡುವ ಅವಕಾಶ ಜನಾರ್ದನ ರೆಡ್ಡಿ ಅವರಿಗೆ ಸಿಕ್ಕಿದೆ. ಗಂಗಾವತಿ ಶಾಸಕರಾಗಿರುವ ಜನಾರ್ದನ ರೆಡ್ಡಿ, ಕರ್ನಾಟಕ ಬಿಜೆಪಿ ಸಹ ಉಸ್ತುವಾಗಿಯಾಗಿರುವ ಸುಧಾಕರ್ ರೆಡ್ಡಿ ಜೊತೆಗೆ ಹೋಗಿ ಅಮಿತ್ ಶಾ ಅವರನ್ನ ಭೇಟಿಯಾಗಿದ್ದಾರೆ. ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ, ಮಾರತ್ತ​​ಹಳ್ಳಿಯಲ್ಲಿ ನಡೆಯಲಿರುವ ‘‘ವಿಶ್ವೇಶತೀರ್ಥ ಸ್ಮಾರಕ ಆಸ್ಪತ್ರೆ’’ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ‌, ಮಾಜಿ ಸಚಿವ ಅರವಿಂದ ಲಿಂಬಾವಳಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದರು. ಅಮಿತ್ ಶಾ ಭೇಟಿ ವೇಳೆ ರಾಜ್ಯ ರಾಜಕೀಯ ನಾಯಕರ ಭೇಟಿ, ಚರ್ಚೆ ನಿಗದಿಯಾಗಿರಲಿಲ್ಲ. ಆದಾಗ್ಯೂ ರಾಮುಲು ಭೇಟಿಗೆ ಅವಕಾಶ ದೊರೆಯದೆ, ರೆಡ್ಡಿ ಜತೆ ಶಾ ಮಾತುಕತೆ ನಡೆಸಿದ್ದು ಕುತೂಹಲ ಹೆಚ್ಚಿಸಿದೆ.

Share This Article
Leave a Comment

Leave a Reply

Your email address will not be published. Required fields are marked *