Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಸಾಮಾನ್ಯರಿಗೂ ತಿಂದ ತಕ್ಷಣ ವಾಂತಿಯಾಗುತ್ತಾ..? : ಹಾಗಾದ್ರೆ ಕಾಮಾಲೆ ಇರಬಹುದು ಎಚ್ಚರ..!

---Advertisement---

ಮನುಷ್ಯನ ದೇಹಕ್ಕೆ ಆಹಾರ ಬಹಳ ಮುಖ್ಯ. ತಿಂದರೆ ಮಾತ್ರ ದೇಹ ವರ್ಕ್ ಆಗುವುದು, ಶಕ್ತಿದಾಯಕವಾಗಿ ಇರಲು ಸಾಧ್ಯ. ಅನಾರೋಗ್ಯದ ಸಮಯದಲ್ಲಿ ಊಟ ಮಾಡದೆ ಇದ್ದಾಗ ಅದೆಷ್ಟು ಸುಸ್ತಾಗಿ ಬಿಡುತ್ತೆ ಅಲ್ವಾ. ಹೀಗಾಗಿಯೇ ಆಹಾರ ಬಹಳ ಮುಖ್ಯವಾಗುತ್ತೆ. ಆದರೆ ತಿಂದ ಆಹಾರ ತಕ್ಷಣವೇ ವಾಂತಿಯಾಗಿ ಬಿಟ್ಟರೆ.

ಸಾಮಾನ್ಯವಾಗಿ ಗರ್ಭಿಣಿಯರಿಗೆ ಆರಂಭದಲ್ಲಿ ವಾಂತಿಯಾಗುತ್ತದೆ. ತಿಂದ ಕೂಡಲೇ ವಾಂತಿಯಾಗುತ್ತದೆ. ಅದು ಸಾಮಾನ್ಯವಾದದ್ದು. ಆದರೆ ಸಾಮಾನ್ಯರಿಗೆ ತಿಂದ ಕೂಡಲೇ ವಾಂತಿಯಾದರೆ ಅದು ಅನಾರೋಗ್ಯದ ಮುನ್ಸೂಚನೆ, ಇನ್ಯಾವುದೋ ಕಾಯಿಲೆಗೆ ತುತ್ತಾಗುವ ಸಾಧ್ಯತೆ ಇದೆ.

ಅದರಲ್ಲೂ ತಿಂದ ಕೂಡಲೆ ವಾಂತಿಯಾದರೆ ಅದರ ಸಂಕಟವನ್ನು ಅನುಭವಿಸುವವರಿಗೆ ಗೊತ್ತು. ಹೊಟ್ಟೆಯಲ್ಲೆಲ್ಲಾ ತೊಳಸಿ ಬರುತ್ತೆ. ಇನ್ನು ಊಟವೇ ಬೇಡಪ್ಪ ಎನಿಸುವಷ್ಟು. ಈ ರೀತಿ ವಾಂತಿಯಾದರೆ ಅದು ಕಾಮಾಲೆ ರೋಗದ ಲಕ್ಷಣವೂ ಆಗಿರುತ್ತೆ. ಕೆಲವೊಮ್ಮೆ ಅಸಿಡಿಟಿ ಜಾಸ್ತಿಯಾಗಿ, ಹೊಟ್ಟೆಯಲ್ಲೆಲ್ಲಾ ಆಮ್ಲವಿದ್ದಂತೆ ಫೀಲ್ ಆಗುತ್ತದೆ.

ಕಾಮಾಲೆ ಕಾಯಿಲೆ ಇದ್ದಾಗಲೂ ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಉಂಟಾಗುತ್ತದೆ. ಕಾಮಾಲೆ ಕಾಯಿಲೆಯಿದ್ದವರಿಗೂ ಊಟ ಮಾಡಿದ ಕೂಡಲೇ ವಾಂತಿಯಾಗುತ್ತದೆ.

ಅಷ್ಟೇ ಅಲ್ಲ ಮೂತ್ರಪಿಂಡದಲ್ಲಿ ಕಲ್ಲುಗಳಿದ್ದರು ಊಟ ಮಾಡಿದ ಕೂಡಲೇ ವಾಂತಿಯಾಗುವಂತೆ ಮಾಡುತ್ತದೆ. ಇದನ್ನೆಲ್ಲಾ ತಪ್ಪಿಸಬೇಕೆಂದರೆ ಆಹಾರ ಪದ್ಧತಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಳ್ಳಿ.

ಮಸಾಲೆಯುಕ್ತ ಆಹಾರದಿಂದ ದೂರ ಇರಿ. ಹಾಗೇ ಒಂದೇ ಸಲ ಹೆಚ್ಚಹ ಆಹಾರ ಸೇವಿಸಬೇಡಿ. ಊಟವಾದ ಕೂಡಲೇ ಚಹಾ / ಕಾಫಿ ಕುಡೊಯಬೇಡಿ. ತುಂಬಾ ಸಮಯ ಹೊಟ್ಟೆಯನ್ನು ಖಾಲಿ ಬಿಡಬೇಡಿ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...