Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಶಾಸ್ತ್ರವೆಲ್ಲಾ ಮುಗಿಸಿ, ತಾಳಿ ಕಟ್ಟುವಾಗ ಬೇಡವೆಂದ ವಧು : ಹೊಸದುರ್ಗದಲ್ಲಿ ಇದೆಂಥಾ ಕೇಸ್..?

---Advertisement---

ಹೊಸದುರ್ಗ: ಎಲ್ಲಾ ಶಾಸ್ತ್ರಗಳು ಮುಗಿದು, ಮದುವೆಯ ದಿನ ವಧು ಅಥವಾ ವರ ಎಸ್ಕೇಪ್ ಆಗಿರುವಂತ ಅದೆಷ್ಟೋ ಪ್ರಕರಣಗಳನ್ನು ನೋಡಿದ್ದೇವೆ. ಇದೀಗ ಅಂಥದ್ದೇ ಪ್ರಕರಣವೊಂದು ಹೊಸದುರ್ಗದಲ್ಲಿ ನಡೆದಿದೆ. ಹೊಸದುರ್ಗ ತಾಲೂಕಿನ ಚಿಕ್ಕ ಬ್ಯಾಲದಿ ಕೆರೆಯ ಭೈರವೇಶ್ವರ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದ್ದು, ವಧು ಯಮುನಾ ಎಂಬಾಕೆ ನನಗೆ ಮದುವೆ ಬೇಡ ಎಂದು ಹಠ ಹಿಡಿದಿದ್ದಾರೆ.

ಚಿಕ್ಕಬ್ಯಾಲದಕೆರೆ ಗ್ರಾಮದ ಸಂತೋಷ್ ಹಾಗೂ ತಿಪರಡ್ಡಿಹಳ್ಳಿಯ ಯಮುನಾ ಎಂಬುವವರಿಗೆ ಮದುವೆ ನಿಶ್ಚಯವಾಗಿತ್ತು. ಹಿರಿಯರು ಒಪ್ಪಿ, ಎಲ್ಲಾ ಶಾಸ್ತ್ರಗಳು ನಡೆದಿದ್ದವು. ಗುರುವಾರಕ್ಕೆ ಮುಹೂರ್ತ ನಿಗಧಿಯಾಗಿತ್ತು. ಹಿಂದಿನ ದಿನವೂ ವಧು – ವರರಿಬ್ಬರು ಶಾಸ್ತ್ರದಲ್ಲಿ ಭಾಗಿಯಾಗಿದ್ದರು. ಆದರೆ ಬೆಳಗ್ಗೆ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ವಧು, ಸಿನಿಮಾ ಸ್ಟೈಲ್ ನಲ್ಲಿ, ನನಗೆ ಮದುವೆ ಬೇಡ ಎಂದು ರಿಜೆಕ್ಟ್ ಮಾಡಿದ್ದಾರೆ.

ಈ ಘಟ‌ನೆಯ ಬಳಿಕ ಮದುವೆಯ ಮನೆಯಲ್ಲೇ ಇದ್ದ ಸಂಬಂಧಿಕರೆಲ್ಲ ವಧುವಿನ ಮನಸ್ಸು ತಿಳಿಗೊಳಿಸುವ ಪ್ರಯತ್ನ ಮಾಡಿದ್ದಾರೆ. ಇಂಥ ನಿರ್ಧಾರಕ್ಕೆ ಕಾರಣ ತಿಳಿಯುವುದಕ್ಕೆ ಯತ್ನಿಸಿದ್ದಾರೆ. ಯಾರ ಮಾತಿಗೂ ಕಿವಿಗೊಡದೆ, ಯಾರ ಮನವಿಗೂ ಸ್ಪಂದಿಸದೆ ಮದುವೆ ನನಗೆ ಇಷ್ಟವಿಲ್ಲ. ನಾನು ಮದುವೆ ಆಗಲ್ಲ ಎಂದೇ ವಧು ಹಠ‌ಮಾಡಿದ್ದಾರೆ. ಕೊನೆಗೂ ಮದುವೆ ರದ್ದಾಗಿದ್ದು, ಸಂಬಂಧಿಕರೆಲ್ಲಾ ವಾಪಾಸ್ ಹೋಗಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...