Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಒಂದು ಮೆಸೇಜ್ ಡ್ರೈವರ್ ಜೀವ ಉಳಿಸಿತು.. ಹಸು ಮಾಲೀಕರ ಪ್ರಾಣ ಕಾಪಾಡಿತು : ಕೇರಳದಲ್ಲಿ ಕರ್ನಾಟಕದವರು ಬಚಾವ್ ಆಗಿದ್ದೆ ಹೆಚ್ಚು..!

Facebook
Twitter
Telegram
WhatsApp

 

ಬೆಂಗಳೂರು : ದೇವರನಾಡಲ್ಲಿ ಭೂಕುಸಿತ ಸಂಭವಿಸಿ ನೂರಾರು ಸಾವುಗಳು ಸಂಭವಿಸಿವೆ. ಕಾರ್ಯಾಚರಣೆ ಇನ್ನೂ ನಡೆಯುತ್ತಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಭೂಕಂಪ ತೀವ್ರತೆಗೆ ಸಿಲುಕಿ, ಬದುಕಿ ಬಂದವರದ್ದೇ ಅದೃಷ್ಟ. ನಮ್ಮ ಕರ್ನಾಟಕ ಮೂಲದವರು ಸಾಕಷ್ಟು ಜನ ಸಿಲುಕಿದ್ದಾರೆ. ಅದರಲ್ಲಿ ಬೆಂಗಳೂರಿನ ಕಾರು ಚಾಲಕನನ್ನು ಒಂದೇ ಒಂದು ಮೆಸೇಜ್ ಕಾಪಾಡಿದೆ.

ಮಂಜುನಾಥ್ ಎಂಬಾತ ಬೆಂಗಳೂರಿನಲ್ಲಿ ಕಾರು ಚಾಲಕನಾಗಿದ್ದಾರೆ. ನಾಲ್ವರನ್ನು ಕೇರಳದ ವಯನಾಡ್ ರೆಸಾರ್ಟ್ ಗೆ ಕರೆದುಕೊಂಡು ಹೋಗಿದ್ದರು. ಟ್ರಿಪ್ ಬಂದಿದ್ದ ದಂಪತಿಗಳು ರೆಸಾರ್ಟ್ ನಲ್ಲಿ ಸ್ಟೇ ಆಗಿದ್ದರು. ಮಂಜುನಾಥ್ ರೆಸಾರ್ಟ್ ಹೊರಗೆ ಕಾರು ನಿಲ್ಲಿಸಿಕೊಂಡು ಮಲಗಿದ್ದರು. ರಾತ್ರಿ 1.15ರ ಸಮಯಕ್ಕೆ ಭೂಕಂಪವಾಗಿದೆ. ರೆಸಾರ್ಟ್ ನಲ್ಲಿದ್ದವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿನ ರಭಸ ಮಂಜುನಾಥ್ ಕಾರಿನ ಬಳಿಯೂ ಬಂದಿತ್ತು. ತಕ್ಷಣ ಎಚ್ಚರವಾದ ಮಂಜುನಾಥ್ ಕಾರು ಸ್ಟಾರ್ಟ್ ಮಾಡಿದರು. ಆದರೆ ಮುಂದಕ್ಕೆ ಹೋಗಲಿಲ್ಲ.

ಕಾರಿನಲ್ಲಿ ಜಿಪಿಎಸ್ ಅಳವಡಿಸಿದ್ದರಿಂದ ಕಾರು ಆನ್ ಆಗುತ್ತಿದ್ದಂತೆ ಮಾಲೀಕ ಸಚಿನ್ ಗೆ ಮೆಸೇಜ್ ಹೋಗಿದೆ. ಈ ಸಮಯದಲ್ಲಿ ಕಾರು ಯಾಕೆ ಆನ್ ಆಯ್ತು ಅಂತ ಮಂಜುನಾಥ್ ಗೆ ಕಾಲ್ ಮಾಡಿದಾಗ, ಪ್ರವಾಹದ ಪರಿಸ್ಥಿತಿ ವಿವರಿಸಿದ್ದಾರೆ. ತಕ್ಷಣ ಅಲ್ಲಿಯೇ ಪರಿಚಯದವರಿಗೆ ವಿಷಯ ಮುಟ್ಟಿಸಿ, ಮಾಲೀಕ ಸಚಿನ್, ಮಂಜುನಾಥ್ ಅವರನ್ನು ಕಾಪಾಡಿದ್ದಾರೆ.

ಇನ್ನು ವೈನಾಡಿನ ಚೂರಲ್ ಮಲೆಯಲ್ಲಿ ಚಾಮರಾಜನಗರದ ಕುಟುಂಬವೊಂದು ವಾಸವಿದೆ. ವಿನೋದ್, ಜಯಶ್ರೀ, ಸಿದ್ದರಾಜು ಮತ್ತು ಗೌರಮ್ಮ ವಾಸವಿದ್ದರು. ಹಸು ಕೂಡ ಸಾಕಿದ್ದರು. ರಾತ್ರಿ ಮಲಗಿ ನಿದ್ರಿಸುತ್ತಿದ್ದಾಗ ಹಸು ಚೀರಾಡಿದೆ. ಎದ್ದು ಬಂದು ನೋಡಿದರೆ ಅದಾಗಲೇ ಕೊಟ್ಟಿಗೆಯಲ್ಲಿ ನೀರು ತುಂಬಿತ್ತು. ತಕ್ಷಣ ಮನೆಯಲ್ಲಿದ್ದವರೆಲ್ಲಾ ಗುಡ್ಡದ ಮೇಲಕ್ಕೆ ತೆರಳಿದ್ದಾರೆ. ನೋಡ ನೋಡುತ್ತಿದ್ದಂತೆ ಮನೆಯೆಲ್ಲಾ ನೀರು ತುಂಬಿ, ಮಾಯವಾಗಿತ್ತು. ಈಗ ಎಲ್ಲರೂ ಸುರಕ್ಷಿತವಾಗಿ ಚಾಮರಾಜನಗರಕ್ಕೆ ಬಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಬುಕ್ ಮೈ ಶೋ ನಲ್ಲಿ 24ಘಂಟೆಗಳಲ್ಲಿ ಅತಿ ಹೆಚ್ಚು ಟಿಕೇಟ್ ಬುಕ್ ಆದ ಮೊದಲ ಸಿನಿಮಾ ARM’

  ಬೆಂಗಳೂರು: ಮ್ಯಾಜಿಕ್ ಫ್ರೇಮ್ಸ್, ಲಿಸ್ಟಿನ್ ಸ್ಟೀಫನ್ ಮತ್ತು ಯುಜಿಎಮ್‌ ಮೂವೀಸ್ ಬ್ಯಾನರ್‌ನಲ್ಲಿ ಡಾ. ಜಕರಿಯಾ ಥಾಮಸ್ ಎಆರ್‌ಎಂ ಸಿನಿಮಾವನ್ನು ನಿರ್ಮಿಸಿದ ARM ಸಿನಿಮಾ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತಪಡಿದೆ. ಬಿಡುಗಡೆಯಾದ 4

ಕರ್ನಾಟಕ ಪಂಚಾಯತ್ ರಾಜ್ ಇಲಾಖೆಯಲ್ಲಿ ನೇರ ನೇಮಕಾತಿ ಆರಂಭ..!

  ಕರ್ನಾಟಕ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಖಾಲಿ ಇರುವ 47 ಹುದ್ದೆಗಳ ಭರ್ತಿಗೆ ನೇರ ನೇಮಕಾತಿ ಮಾಡಿಕೊಳ್ಳಲು ನಿರ್ಧರಿಸಿದೆ. ಸಂಗ್ರಹಣೆ ಸಲಹೆಗಾರ, ಪರಿಸರ ಸಲಹೆಗಾರ, ಸಾಮಾಜಿಕ ಅಭಿವೃದ್ಧಿ ಸಲಹೆಗಾರ, ಕಾನೂನು

ಬಿಜೆಪಿಯ ಭ್ರಷ್ಟ ಎಂಬ ಲೇಬಲ್ ವಿಜಯೇಂದ್ರ ಮೇಲಿದೆ : ರಾಜ್ಯಾಧ್ಯಕ್ಷರ ಮೇಲೆ ಕಿಡಿಕಾರಿದ ರಮೇಶ್ ಜಾರಕಿಹೊಳಿ

  ಬೆಳಗಾವಿ: ಯಡಿಯೂರಪ್ಪ ಅವರಿಗೆ ನಾನು ವಿರೋಧಿಯಲ್ಲ. ಯಡಿಯೂರಪ್ಪ ಅವರು ನಮ್ಮ ಪಕ್ಷಕ್ಕೆ ಪ್ರಶ್ನಾತೀತ ನಾಯಕ. ಯಡಿಯೂರಪ್ಪ ಅವರ ಬಗ್ಗೆ ನಮಗೆ ತುಂಬಾ ಗೌರವವಿದೆ. ಆದರೆ ವಿಜಯೇಂದ್ರ ನಮ್ಮ‌ ಪಕ್ಷದ ನಾಯಕನಲ್ಲ. ಬಿಜೆಪಿಯಲ್ಲಿಯೇ ಭ್ರಷ್ಟ

error: Content is protected !!