ಬೆಂಗಳೂರು; ತಮಿಳು ನಟ ಕಮಲ್ ಹಾಸನ್ ಸುಳ್ಳೊಂದನ್ನ ಹೇಳಿ ಇಕ್ಕಟ್ಟಿಗೆ ಸಿಲುಕಿದ್ದಾರೆ. ಇದು ಅವರ ಸಿನಿಮಾ ಮಕಾಡೆ ಮಲಗೋದಕ್ಕೆ ಆ ಹೇಳಿಕೆ ಕೂಡ ಕಾರಣವಾಗಿದೆ. ತಮಿಳು ಕನ್ನಡದ ತಾಯಿ ಎಂದು ಹೇಳಿಕೆ ನೀಡಿ ವಿವಾದವನ್ನ ಹುಟ್ಟು ಹಾಕಿದ್ದರು. ಆದರೆ ಕನ್ನಡಿಗರು ಇತಿಹಾಸವನ್ನೇ ಕೆದಕಿ ತಮಿಳಿಗರಿಗೆ ತಿರುಗೇಟು ನೀಡಿದ್ದರು. ಇದೀಗ ಶಾಕಿಂಗ್ ವಿಚಾರವೊಂದು ಬಯಲಾಗಿದ್ದು, ತಮಿಳುನಾಡಿನ ಪಠ್ಯ ಪುಸ್ತಕದಲ್ಲಿಯೇ ಆ ಸುಳ್ಳು ಮಾಹಿತಿಯನ್ನ ಮುದ್ರಿಸಲಾಗಿದೆ.
ಕನ್ನಡಿಗರಿಗೆ ಹಾಗೂ ದಕ್ಷಿಣ ಭಾರತೀಯರಿಗೆ ಹಲವು ದಶಕಗಳಿಂದ ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳಿಕೊಂಡು ಬರಲಾಗಿತ್ತು. ಇದು ಸುಳ್ಳು ಅಂತ ಸಾಬೀತು ಮಾಡುವುದಕ್ಕೆ ದಶಕಗಳೇ ಆಗಿವೆ. ಅಂದಿನಿಂದಲೂ ಭಾರತದಲ್ಲಿ ಹಿಂಡಿ ರಾಷ್ಟ್ರೀಯ ಭಾಷೆ ಎನ್ನುವ ಸುಳ್ಳನ್ನು ಹೇಳಿಕೊಂಡೇ ಬರಲಾಗುತ್ತಿದೆ. ಅಲ್ಲದೆ ಇದೀಗ ತಮಿಳುನಾಡಿನಲ್ಲಿ ಕನ್ನಡ ಹಾಗೂ ದಕ್ಷಿಣ ಭಾರತೀಯ ಭಟಷೆಗಳ ಬಗ್ಗೆ ಸುಳ್ಳು ಹೇಳಿಕೊಂಡು ಬರುತ್ತಿರುವುದು ಬಹಿರಂಗವಾಗಿದೆ. ಉತ್ತರ ಭಾರತೀಯರು ಹೇಳಿಕೊಂಡು ಬಂದಂತ ಸುಳ್ಳು ಬಹಿರಂಗವಾಗಿದೆ.
ತಮಿಳುನಾಡಿನ 7ನೇ ತರಗತಿಯ ಪಠ್ಯದಲ್ಲೇ ತಮಿಳು ಭಾಷೆಯಿಂದಲೇ ದಕ್ಷಿಣ ಭಾರತದ ವಿವಿಧ ಭಾಷೆಗಳ ಉದಯವಾಯಿತು ಎನ್ನುವ ಬಗ್ಗೆ ಉಲ್ಲೇಖವಿದೆ ಎನ್ನುವುದು ವೈರಲ್ ಆಗ್ತಾ ಇದೆ. ಇದು ಕನ್ನಡಿಗೆ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಫೇಸ್ಬುಕ್ ನಲ್ಲಿ ಸಿದ್ದೇಗೌಡ ಶ್ಯಾಮ್ ಪ್ರಸಾದ್ ಎಂಬುವವರು ಪೋಸ್ಟ್ ಒಂದನ್ನ ಹಾಕಿದ್ದು, ತಮಿಳುನಾಡಿನ ಪಠ್ಯದಲ್ಲಿ ಕನ್ನಡ, ತೆಲಗು, ಮಲಯಾಳಂಗಳ ತಾಯಿ ತಮಿಳು ಎಂಬ ಸುಳ್ಳು ದ್ರಾವಿಡ ಪ್ರಪಗಾಂಡ ಇದೆ (ಪಾಕಿಸ್ತಾನದ ಪಠ್ಯದಲ್ಲಿ 5,000 ವರ್ಶಗಳ ಇತಿಹಾಸ ಇದ್ದಂತೆ). ಕರ್ನಾಟಕ ರಾಜ್ಯ ಪಠ್ಯದ ಪ್ರತಿ ತರಗತಿಯಲ್ಲೂ ಶಿವಾಜಿಯ ಕಥೆಗಳಿವೆ (ಶಾಖೆಗಳಲ್ಲಿ ಹೇಳಿಕೊಡುವಂತೆ). ಕನ್ನಡಿಗರು ಕನ್ನಡಿಗರಾಗಿರದೆ “ನಾವು ದ್ರಾವಿಡರು,” “ನಾವು ಹಿಂದಿ ದೇಶದ ರಕ್ಷಕರು,” ಆಗುತಿದ್ದಾರೆ ಎಂದಿದ್ದಾರೆ.


