ಮೊಹರಂ ದಿನ ಕೆಂಡಕ್ಕೆ ಬಿದ್ದ ಮಗು : ಚಿಕಿತ್ಸೆ ನೀಡಲು ಹಿಂದೇಟು ಹಾಕಿದ ವೈದ್ಯರಿಗೆ ಶಾಸಕ ಪಪ್ಪಿ ಕ್ಲಾಸ್

1 Min Read

ಚಿತ್ರದುರ್ಗ: ಜಿಲ್ಲೆಯ ಬೊಮ್ಮೆನಹಳ್ಳಿಯಲ್ಲಿ ಮೋಹರಂ ಸಂಭ್ರಮಚಾರಣೆಯಲ್ಲಿದ್ದರು. ಇದೇ ವೇಳೆ ಕೆಂಡ ಹಾಯುವಾಗ ಮಗುವೊಂದು ಕೆಂಡಕ್ಕೆ ಬಿದ್ದು, ದೇಹವೆಲ್ಲಾ ಸುಟ್ಟು ಹೋಗಿದೆ. ರಮೇಶ್ ಎಂಬುವವರ 2 ವರ್ಷದ ಕಂದಮ್ಮ ಕೆಂಡಕ್ಕೆ ಬಿದ್ದಿದೆ. ತಂದೆ ಮಗು ಇಬ್ಬರು ಕೆಂಡದಲ್ಲಿ ಬಿದ್ದ ಕೂಡಲೇ ಸ್ಥಳೀಯರು ಇಬ್ಬರನ್ನು ರಕ್ಷಿಸಿದ್ದಾರೆ.

ತಕ್ಷಣ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅಲ್ಲಿ ವೈದ್ಯರು ಗಾಯದಿಂದ ನರಳುತ್ತಿದ್ದ ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ ಎಂಬ ಆರೋಪ ಮಾಡಿದ್ದಾರೆ. ಕುಟುಂಬಸ್ಥರಿಂದಾನೇ ಪ್ರಾಥಮಿಕ ಚಿಕಿತ್ಸೆ ನೀಡಿಸಿದ್ದಾರೆ ಎನ್ನಲಾಗಿದೆ.

ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ, ವಿಡಿಯೋ ನೋಡಿ…

 

https://fb.watch/m62kED248x/?mibextid=Nif5oz

ಘಟನೆ ಬಗ್ಗೆ ತಿಳಿದ ಕೂಡಲೇ ಶಾಸಕ ವೀರೇಂದ್ರ ಪಪ್ಪಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ವೈದ್ಯರಿಗೆ ಎಚ್ಚರಿಕೆ ನೀಡಿದ್ದು, ತಕ್ಷಣ ಚಿಕಿತ್ಸೆ ನೀಡುವಂತೆ ಸೂಚಿಸಿದ್ದಾರೆ. ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಡಿಸ್ಟಿಕ್ ಸರ್ಜನ್, ಡ್ಯೂಟಿ ಡಾಕ್ಟರ್ ಅನೂಪ ವಿಎಂ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಚಿವ ಡಿ ಸುಧಾಕರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *