Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬ್ಯಾಂಕ್ ಉತ್ತಮ ಸ್ನೇಹಿತ, ಕಷ್ಟಕಾಲದ ಆಪದ್ಬಾಂಧವ :  ಚಂದ್ರಶೇಖರ್

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ, ಜುಲೈ. 10 : ಆರ್ಥಿಕ ಅಭಿವೃದ್ಧಿ ವ್ಯಕ್ತಿಯ ಜೀವನದ ಪ್ರಮುಖವಾದ ವಿಚಾರ.  ಆರ್ಥಿಕತೆ ವಿಚಾರದಲ್ಲಿ ಸಾಕಷ್ಟು ಸಂದರ್ಭದಲ್ಲಿ  ವ್ಯಕ್ತಿಗೆ ಸ್ಪಂದನೆ ದೊರಕುವುದು ಕಷ್ಟ.  ಆದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವ್ಯಕ್ತಿಯ ಬೆಳವಣಿಗೆಗೆ ಉತ್ತಮ ಅವಕಾಶಗಳಿವೆ.  ಬ್ಯಾಂಕ್‍ನಲ್ಲಿ ಉತ್ತಮ ಸಂಬಂಧ ಹೊಂದಿದ್ದರೇ, ವ್ಯಕ್ತಿ ಬಹುಬೇಗ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ. ಬ್ಯಾಂಕ್ ಉತ್ತಮ ಸ್ನೇಹಿತನಿದ್ದಂತೆ, ಬ್ಯಾಂಕ್ ಕಷ್ಟಕಾಲದ ಆಪದ್ಭಾವನ ಇದ್ದಂತೆ ಎಂದು ಕೆನರಾ ಬ್ಯಾಂಕ್ ಚಿತ್ರದುರ್ಗ ವಲಯದ ಆರ್‍ಎಹೆಚ್ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ನಗರದ ಮೆದೇಹಳ್ಳಿ ಕೆನರಾ ಬ್ಯಾಂಕ್ ಖಾಖೆಯಲ್ಲಿ ಗ್ರಾಹಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ಆಧುನಿಕತೆಯ ಜೀವನ ಶೈಲಿಗೆ ಹೆಚ್ಚು ಹೆಚ್ಚು ದುಡಿಮೆ ಅಗತ್ಯವಿದೆ.  ಇಂತಹ ಸಂದರ್ಭದಲ್ಲಿ ಆರ್ಥಿಕ ನೆರವು ಬಹುಮುಖ್ಯ.  ಬ್ಯಾಂಕ್‍ಗಳು ಈ ರೀತಿ ಆರ್ಥಿಕ ನೆರವು ನೀಡುವುದರ ಜೊತೆಗೆ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ಹೇಳಿದರು.  ಕೆನರಾ ಬ್ಯಾಂಕ್‍ನಿಂದ ನೀಡಲಾಗುವ ಹೌಸಿಂಗ್ ಲೋನ್, ವಾಹನ ಸಾಲ ಹಾಗೂ ಎಜುಕೇಷನ್ ಸಾಲಗಳ ಬಗ್ಗೆ ವಿವರಿಸಿದರು.

ಡಿವಿಜನಲ್ ಪ್ರಬಂಧಕರಾದ ಅನಿತಾ ಅವರು ಮಾತನಾಡಿ, ಬ್ಯಾಂಕ್ ಗ್ರಾಹಕರ ಪರವಾಗಿಯೇ ಕೆಲಸ ಮಾಡುತ್ತದೆ.  ಅದೇ ರೀತಿಯಲ್ಲಿ ಗ್ರಾಹಕರು ಬ್ಯಾಂಕನ್ನೂ ಕಾಪಾಡಬೇಕು.  ಬ್ಯಾಂಕ್‍ನಲ್ಲಿರುವ ಹಣ ಸಾರ್ವಜನಿಕರದ್ದಾಗಿದ್ದು, ಅದರ ರಕ್ಷಣೆಯೂ ಬ್ಯಾಂಕ್ ಮೇಲಿರುತ್ತದೆ.  ಸಾಲ ಪಡೆದವರು ಸಕಾಲದಲ್ಲಿ ಪಾವತಿ ಮಾಡುವುದರಿಂದ ಬ್ಯಾಂಕ್ ಹಾಗೂ ಗ್ರಾಹಕರಿಗೂ ಇಬ್ಬರಿಗೂ ಅನುಕೂಲವಾಗಲಿದೆ.  ಸಾಲ ಪಡೆದಿರುವವರು ಸಕಾಲದಲ್ಲಿ ಮರಪಾವತಿ ಮಾಡಬೇಕೆಂದು ಮನವಿ ಮಾಡಿದರು.

ಸಣ್ಣ ಘಟಕಗಳ ಸಾಲಸೌಲಭ್ಯದ ಬಗ್ಗೆ ವಂಶಿ, ಕೃಷಿ ಸಂಬಂಧಿಸಿದ ಸಾಲಗಳ ಬಗ್ಗೆ ಚಂದ್ರಶೇಖರ್ ಹಾಗೂ ಚಿತ್ರದುರ್ಗ ಮುಖ್ಯ ಶಾಖೆಯ ಪ್ರಬಂಧಕರಾದ ಮಾಲತಿಮತಿ,  ಮೆದೇಹಳ್ಳಿ ಶಾಖೆಯ ಪ್ರಬಂಧಕರಾದ ನಿವೇದಿತಾ ಹಾಗೂ ವಿಜಯ್ ಅವರು ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಸಾಲ ಮಂಜೂರಾತಿ ಪತ್ರಗಳನ್ನು ನೀಡಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ

ಈ ರಾಶಿಯವರ ಇನ್ಮುಂದೆ ಆರ್ಥಿಕ ಬಲ ಪವರ್ ಫುಲ್. ಈ ರಾಶಿಯ ಪ್ರೇಮಿಗಳಿಗೆ ಯಾರಿಂದಲೂ ಅಗಲಿಕೆ ಮಾಡಲು ಸಾಧ್ಯವಿಲ್ಲ, ಗುರುವಾರ-ರಾಶಿ ಭವಿಷ್ಯ ಸೆಪ್ಟೆಂಬರ್-19,2024 ಸೂರ್ಯೋದಯ: 06:08, ಸೂರ್ಯಾಸ್ತ : 06:11 ಶಾಲಿವಾಹನ ಶಕೆ :1946,

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಹಾಗೂ ಶೋಭಾಯಾತ್ರೆ : 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ : ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ

ಚಿತ್ರದುರ್ಗ.ಸೆ.18: ಸೆ.28 ರಂದು ನಗರದಲ್ಲಿ ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯನ್ನು ಶಾಂತಿ ಹಾಗೂ ಸೌಹಾರ್ಧತೆಯಿಂದ ನಡೆಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹಿಂದೂ ಮಹಾ ಗಣಪತಿ ಪ್ರತಿಷ್ಟಾಪನಾ ಸಮಿತಿ ಸದಸ್ಯರಗೆ ಸೂಚನೆ

ಸೆಪ್ಟೆಂಬರ್ 28 ರಂದು ಹಿಂದೂ ಮಹಾಗಣಪತಿ ವಿಸರ್ಜನೆ : ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನೇಮಕ : ರಂಜಿತ್ ಕುಮಾರ ಬಂಡಾರು

ಸೆಪ್ಟೆಂಬರ್‌ 28 ರಂದು ನಡೆಯಲಿರುವ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣೆಗೆ ಹಾಗೂ ಶೋಭಾ ಯಾತ್ರೆಯ ಬಂದೋಬಸ್ತ್ ಕಾರ್ಯಕ್ಕೆ 3000 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ ಬಂಡಾರು ತಿಳಿಸಿದರು.

error: Content is protected !!