Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಬ್ಯಾಂಕ್ ಉತ್ತಮ ಸ್ನೇಹಿತ, ಕಷ್ಟಕಾಲದ ಆಪದ್ಬಾಂಧವ :  ಚಂದ್ರಶೇಖರ್

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ. 10 : ಆರ್ಥಿಕ ಅಭಿವೃದ್ಧಿ ವ್ಯಕ್ತಿಯ ಜೀವನದ ಪ್ರಮುಖವಾದ ವಿಚಾರ.  ಆರ್ಥಿಕತೆ ವಿಚಾರದಲ್ಲಿ ಸಾಕಷ್ಟು ಸಂದರ್ಭದಲ್ಲಿ  ವ್ಯಕ್ತಿಗೆ ಸ್ಪಂದನೆ ದೊರಕುವುದು ಕಷ್ಟ.  ಆದರೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವ್ಯಕ್ತಿಯ ಬೆಳವಣಿಗೆಗೆ ಉತ್ತಮ ಅವಕಾಶಗಳಿವೆ.  ಬ್ಯಾಂಕ್‍ನಲ್ಲಿ ಉತ್ತಮ ಸಂಬಂಧ ಹೊಂದಿದ್ದರೇ, ವ್ಯಕ್ತಿ ಬಹುಬೇಗ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ. ಬ್ಯಾಂಕ್ ಉತ್ತಮ ಸ್ನೇಹಿತನಿದ್ದಂತೆ, ಬ್ಯಾಂಕ್ ಕಷ್ಟಕಾಲದ ಆಪದ್ಭಾವನ ಇದ್ದಂತೆ ಎಂದು ಕೆನರಾ ಬ್ಯಾಂಕ್ ಚಿತ್ರದುರ್ಗ ವಲಯದ ಆರ್‍ಎಹೆಚ್ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ನಗರದ ಮೆದೇಹಳ್ಳಿ ಕೆನರಾ ಬ್ಯಾಂಕ್ ಖಾಖೆಯಲ್ಲಿ ಗ್ರಾಹಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಇಂದಿನ ಆಧುನಿಕತೆಯ ಜೀವನ ಶೈಲಿಗೆ ಹೆಚ್ಚು ಹೆಚ್ಚು ದುಡಿಮೆ ಅಗತ್ಯವಿದೆ.  ಇಂತಹ ಸಂದರ್ಭದಲ್ಲಿ ಆರ್ಥಿಕ ನೆರವು ಬಹುಮುಖ್ಯ.  ಬ್ಯಾಂಕ್‍ಗಳು ಈ ರೀತಿ ಆರ್ಥಿಕ ನೆರವು ನೀಡುವುದರ ಜೊತೆಗೆ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತದೆ ಎಂದು ಹೇಳಿದರು.  ಕೆನರಾ ಬ್ಯಾಂಕ್‍ನಿಂದ ನೀಡಲಾಗುವ ಹೌಸಿಂಗ್ ಲೋನ್, ವಾಹನ ಸಾಲ ಹಾಗೂ ಎಜುಕೇಷನ್ ಸಾಲಗಳ ಬಗ್ಗೆ ವಿವರಿಸಿದರು.

ಡಿವಿಜನಲ್ ಪ್ರಬಂಧಕರಾದ ಅನಿತಾ ಅವರು ಮಾತನಾಡಿ, ಬ್ಯಾಂಕ್ ಗ್ರಾಹಕರ ಪರವಾಗಿಯೇ ಕೆಲಸ ಮಾಡುತ್ತದೆ.  ಅದೇ ರೀತಿಯಲ್ಲಿ ಗ್ರಾಹಕರು ಬ್ಯಾಂಕನ್ನೂ ಕಾಪಾಡಬೇಕು.  ಬ್ಯಾಂಕ್‍ನಲ್ಲಿರುವ ಹಣ ಸಾರ್ವಜನಿಕರದ್ದಾಗಿದ್ದು, ಅದರ ರಕ್ಷಣೆಯೂ ಬ್ಯಾಂಕ್ ಮೇಲಿರುತ್ತದೆ.  ಸಾಲ ಪಡೆದವರು ಸಕಾಲದಲ್ಲಿ ಪಾವತಿ ಮಾಡುವುದರಿಂದ ಬ್ಯಾಂಕ್ ಹಾಗೂ ಗ್ರಾಹಕರಿಗೂ ಇಬ್ಬರಿಗೂ ಅನುಕೂಲವಾಗಲಿದೆ.  ಸಾಲ ಪಡೆದಿರುವವರು ಸಕಾಲದಲ್ಲಿ ಮರಪಾವತಿ ಮಾಡಬೇಕೆಂದು ಮನವಿ ಮಾಡಿದರು.

ಸಣ್ಣ ಘಟಕಗಳ ಸಾಲಸೌಲಭ್ಯದ ಬಗ್ಗೆ ವಂಶಿ, ಕೃಷಿ ಸಂಬಂಧಿಸಿದ ಸಾಲಗಳ ಬಗ್ಗೆ ಚಂದ್ರಶೇಖರ್ ಹಾಗೂ ಚಿತ್ರದುರ್ಗ ಮುಖ್ಯ ಶಾಖೆಯ ಪ್ರಬಂಧಕರಾದ ಮಾಲತಿಮತಿ,  ಮೆದೇಹಳ್ಳಿ ಶಾಖೆಯ ಪ್ರಬಂಧಕರಾದ ನಿವೇದಿತಾ ಹಾಗೂ ವಿಜಯ್ ಅವರು ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಸಾಲ ಮಂಜೂರಾತಿ ಪತ್ರಗಳನ್ನು ನೀಡಲಾಯಿತು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment