ಚಿತ್ರದುರ್ಗ | ಬಸವರಾಜಪ್ಪ ನಿಧನ

1 Min Read

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 04 : ತಾಲ್ಲೂಕಿನ ಬೆಟ್ಟದ ನಾಗೇನಹಳ್ಳಿಯ ಕೃಷಿಕ, ವೀರಶೈವ‌-ಲಿಂಗಾಯತ ಸಮಾಜದ ಮುಖಂಡ ಎಸ್‌.ಬಸರಾಜಪ್ಪ ಬುಧವಾರ (ನವೆಂಬರ್ 4) ಬೆಳಿಗ್ಗೆ 9 ಗಂಟೆಗೆ ಚಿತ್ರದುರ್ಗದ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದರು.

ಅವರಿಗೆ 80 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾರಣಗಳಿಂದ ಅವರು ಕೊನೆಯುಸಿರೆಳೆದಿದ್ದಾರೆ.
ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಕಣ್ಣುಗಳನ್ನು ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯ “ಬಸವೇಶ್ವರ ಪುನರ್ಜ್ಯೋತಿ ಐ ಬ್ಯಾಂಕ್”ಗೆ ದಾನ ಮಾಡಲಾಗಿದೆ.
ಪಾರ್ಥಿವ ಶರೀರವನ್ನು ಆನೆಬಾಗಿಲು ಸಮೀಪದ ಬುರುಜನಹಟ್ಟಿ ರಸ್ತೆಯಲ್ಲಿರುವ ಸ್ವಗೃಹದಲ್ಲಿ ಇರಿಸಲಾಗಿದೆ.
ಅಂತ್ಯಕ್ರಿಯೆ ಬೆಟ್ಟದ ನಾಗೇನಹಳ್ಳಿಯಲ್ಲಿರುವ ತೋಟದಲ್ಲಿ ಗುರುವಾರ (ನವೆಂಬರ್ 5) ಬೆಳಿಗ್ಗೆ 10.30ಕ್ಕೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.
ಸಂಪರ್ಕ ಸಂಖ್ಯೆ: 63608-66123
ನಾಗರಾಜ ಬೆಟ್ಟದ ನಾಗೇನ ಹಳ್ಳಿ

Share This Article
Enable Notifications OK No thanks