ಬೆಳಗಾವಿ: ಜಿಲ್ಲೆಯಲ್ಲಿ ಕಳೆದ 6 ದಿನಗಳಿಂದ ರೈತರು ಹೋರಾಟ ಮಾಡ್ತಾ ಇದ್ದಾರೆ. ಕಬ್ಬಿಗೆ ಬೆಲೆ ನಿಗದಿ ಮಾಡಬೇಕು ಎಂದು ತೀವ್ರ ಹೋರಾಟ ಮಾಡುತ್ತಿದ್ದಾರೆ. ನಿಗದಿತ ಬೆಲೆಯನ್ನ ಸರ್ಕಾರ ನೀಡುವ ತನಕ ನಾವೂ ಹೋರಾಟವನ್ನು ಕೈಬಿಡಲ್ಲ ಎಂಬ ಮಾತನ್ನು ಹೇಳಿದ್ದಾರೆ. ರೈತರ ಹೋರಾಟಕ್ಕೆ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಕೈ ಜೋಡಿಸಿದ್ದಾರೆ. ಇದೆ ವೇಳೆ ಕಾಂಗ್ರೆಸ್ ನಾಯಕರ ವಿರುದ್ಧ ಗರಂ ಆಗಿದ್ದಾರೆ.
ಭಾರತೀಯ ಜನತಾ ಪಾರ್ಟಿ ಕಬ್ಬು ಬೆಳೆಗಾರರು ಮಾಡುತ್ತಿರುವ ಹೋರಾಟಕ್ಕೆ ಬರೀ ಬೆಂಬಲವನ್ನಷ್ಟೇ ಸೂಚಿಸುವುದಕ್ಕೆ ಬಂದಿರೋದಲ್ಲ. ಕಬ್ಬು ಬೆಳೆಗಾರರ ಬೇಡಿಕೆಗಳು ಏನಿದಾವೆ, ಅದಕ್ಕೆ ರಾಜ್ಯ ಸರ್ಕಾರ ಸಮ್ಮತಿ ನೀಡಬೇಕು. ಅಲ್ಲಿಯವರೆಗೂ ಜೊತೆಗೆ ಇರ್ತೀವಿ. ದುರಂತ ಏನು ಅಂದ್ರೆ ಈ ರಾಜ್ಯದ ಮುಖ್ಯಮಂತ್ರಿಗಳು ಈ ನಾಡಿನ ರೈತರ ಬಗ್ಗೆ ಕಿಂಚಿತ್ತು ಕಾಳಜಿಯನ್ನ ತೋರಿಸುತ್ತಿಲ್ಲ. ಅತಿವೃಷ್ಟಿ ಸಂದರ್ಭದಲ್ಲೂ ರಾಜ್ಯ ಸರ್ಕಾರ ಯಾವ ರೀತಿ ಮೈಮರೆತಿತ್ತು ಎಂಬುದನ್ನ ನೋಡಿದ್ದೇವೆ.
ಈಗ ರೈತ ಬೀದಿಗಿಳಿದು ಹೋರಾಟ ಮಾಡ್ತಾ ಇದ್ದರು, ಇಲ್ಲಿನ ಸಚಿವರು, ಶಾಸಕರು ಯಾರು ಬೆಂಬಲವನ್ನ ನೀಡ್ತಾ ಇಲ್ಲ. ಅವರು ದೇಶಕ್ಕೆ ಅನ್ನ ಕೊಡುವ ರೈತರು. ಹೀಗಾಗಿ ಅವರ ಋಣ ನಮ್ಮ ಮೇಲಿದೆ. ಅವರಿಗೆ ಬೆಂಬಲ ನೀಡಬೇಕು. ಈ ನಾಡುಕಂಡಂತ ಧೀಮಂತ ರೈತ ನಾಯಕ ಬಿಎಸ್ ಯಡಿಯೂರಪ್ಪ ಅವರು. ರೈತರ ಪರವಾದಂತ ಬಜೆಟ್ ಕೊಟ್ರು. ಕೃಷಿ ಬಜೆಟ್ ಕೊಟ್ರು. ರೈತರಿಗೆ ಏನೆಲ್ಲಾ ಸಹಾಯವಾಗಬೇಕು ಆ ರೀತಿ ನಡೆದುಕೊಂಡರು. ಇಂದು ನಾನು ಕೂಡ ರೈತರ ಪರವಾಗಿ, ತಂದೆಯಂತೆಯೇ ನಿಂತಿದ್ದೀನಿ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗಿ ಬಂದಿಲ್ಲ. ಬದಲಿಗೆ ಯಡಿಯೂರಪ್ಪ ಮಗನಾಗಿ ಬಂದಿದ್ದೇನೆ ಎಂದಿದ್ದಾರೆ.






