ನವೆಂಬರ್ ಬಂದೇ ಬಿಡ್ತು : ಸಿಎಂ ಸಿದ್ದರಾಮಯ್ಯ ಬೆನ್ನಿಗೆ ನಿಂತ ಅಹಿಂದ ನಾಯಕರು

1 Min Read

 

 

 

ಬೆಂಗಳೂರು: ಸದ್ಯ ಕಾಂಗ್ರೆಸ್ ರಾಜಕಾರಣದಲ್ಲಿ ನವೆಂಬರ್ ಕ್ರಾಂತಿಯದ್ದೆ ದೊಡ್ಡ ಸದ್ದಾಗುತ್ತಿದೆ. ಸೆಪ್ಟೆಂಬರ್ ಕ್ರಾಂತಿ ಅಂತು ಏನೇನು ಆಗಲಿಲ್ಲ. ಆದರೆ ನವೆಂಬರ್ ಕ್ರಾಂತಿ ಆಗುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ. ಇದರ ನಡುವೆ ಸಚಿವ ಸಂಪುಟ ಪುನರ್ ರಚನೆಯನ್ನು ಮಾಡಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಬೆಳವಣಿಗೆ ನಡೆದಿದ್ದು, ಅಹಿಂದ ನಾಯಕರು ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದಾರೆ.

ನವೆಂಬರ್ ಕ್ರಾಂತಿ ಚರ್ಚೆಯಿಂದ ಹಲವರು ಅಂತರ ಕಾಯ್ದುಕೊಂಡಿದ್ದಾರೆ. ಅಲ್ಪಸಂಖ್ಯಾತ, ಹಿಂದುಳಿದ ದಲಿತ ಸಮುದಾಯಕ್ಕೆ ಸೇರಿದ ನಾಯಕರು ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಿದ್ದರೆ, ಇನ್ನೊಂದಷ್ಟು ಸಚಿವರು ಯಾರ ಸಹವಾಸವೂ ನಮಗೆ ಬೇಡ, ನಾಯಕತ್ವ ಬದಲಾವಣೆ ವಿಚಾರವೂ ನಮಗೆ ಬೇಡ ಎಂಬಂತೆ ದೂರ ನಿಂತಿದ್ದಾರೆ. ನಮಗೆ ನಮ್ಮ ನಮ್ಮ ಸಚಿವ ಸ್ಥಾನ ಉಳಿದರೆ ಸಾಕು ಎಂಬಂತೆ ದೂರ ಸರಿದಿದ್ದಾರೆ. ತಮ್ಮ ತಮ್ಮ ಸಚಿವ ಸ್ಥಾನ ಉಳಿಸಿಕೊಳ್ಳುವ ಹರಸಾಹಸ ಮಾಡಿದ್ದಾರೆ ಎನ್ನಲಾಗಿದೆ.

ಸಿಎಂ ಸಿದ್ದರಾಮಯ್ಯ ಅವರು ಈಗಾಗಲೇ ಹೈಕಮಾಂಡ್ ನಾಯಕರಿಗೆ ಮನವಿ ಮಾಡಿಕೊಂಡಿದ್ದು, ಸಚಿವ ಸಂಪುಟ ಪುನರ್ ರಚನೆಯನ್ನು ಮುಂದೂಡಿವಂತೆ ಮನವಿ ಮಾಡಿಕೊಂಡಿದ್ದರು. ಒಂದು ವೇಳೆ ಸಚಿವ ಸಂಪುಟ ಪುನರ್ ರಚನೆಯಾದರೆ ಒಂದಷ್ಟು ರೀಶಫಲ್ ಆಗಿಯೇ ಆಗುತ್ತೆ. ಹೊಸಬರ ಆಯ್ಕೆಯಾಗುತ್ತೆ. ಈಗಾಗಲೇ ಹಲವರು ಸಚಿವ ಸ್ಥಾನ ತ್ಯಾಗದ ಬಗ್ಗೆ ಮಾತನಾಡಿದ್ದಾರೆ. ಆದರೆ ಉಳಿದವರು ನಮ್ಮ ಸಚಿವ ಸ್ಥಾನ ಉಳಿಸಿಕೊಳ್ಳಬೇಕೆಂಬ ಅಲರ್ಟ್ ಆಗಿದ್ದು, ನಾಯಕತ್ವ ಬದಲಾವಣೆ ಬಗ್ಗೆ ಎಲ್ಲಿಯೂ ಮಾತನಾಡ್ತಿಲ್ಲ. ಹೀಗಾಗಿ ನವೆಂಬರ್ ಕ್ರಾಂತಿ ಏನಾಗಬಹುದು ಎಂಬ ಕುತೂಹಲವಿದೆ.

Share This Article
Enable Notifications OK No thanks