Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆಯಲ್ಲಿ ಯಡವಟ್ಟು : ಡಾ.ಹರ್ಷ ಆಧಾರ್ ನಂಬರ್ ನಲ್ಲಿ ಮುಸ್ಲಿಮರ ಹೆಸರು..!

---Advertisement---

ದಾವಣಗೆರೆ: ರಾಜ್ಯದಲ್ಲಿ ಸದ್ಯ ಜಾತಿ ಗಣತಿ ಬರದಿಂದ ಸಾಗ್ತಾ ಇದೆ. ಶಿಕ್ಷಕರ ಗೋಳಾಟದ ನಡುವೆಯೂ ಗಣತಿ ಸಮೀಕ್ಷೆ ಮಾತ್ರ ನಡೆಯುತ್ತಲೆ ಇದೆ. ಆದರೆ ಇದರ ನಡುವೆ ದಾವಣಗೆರೆಯಲ್ಲಿ ಶಾಕಿಂಗ್ ಘಟನೆಯೊಂದು ಎದುರಾಗಿದೆ. ಹಿಂದೂ ಸಮುದಾಯದವರ ಆಧಾರ್ ಕಾರ್ಡ್ ನಂಬರ್ ನಲ್ಲಿ ಮುಸ್ಲಿಂರ ಹೆಸರು ರಿಜಿಸ್ಟರ್ ಆಗಿದೆ. ಇದನ್ನು ಕಂಡು ಮನೆಯವರೇ ಶಾಕ್ ಆಗಿದ್ದಾರೆ.

ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ ನಲ್ಲಿ ಈ ಘಟನೆ ನಡೆದಿದೆ. ಡಾ.ಹರ್ಷ ಅವರ ಆಧಾರ್ ಕಾರ್ಡ್ ನಂಬರ್ ಹಾಕಿದ್ರೆ ಮುಸ್ಲಿಂರ ಹೆಸರು ತೋರಿಸ್ತಾ ಇದೆಮ ಅದುವೆ ಅಪ್ರೋಜ್, ಶರೀಫ್ ಬಾನು ಎಂಬುವವರ ಹೆಸರನ್ನ ತೋರಿಸ್ತಾ ಇದೆ. ಇದನ್ನು ಕಂಡು ಹರ್ಷ ಕುಟುಂಬಸ್ಥರು ಶಾಕ್ ಆಗಿದ್ದಾರೆ. ಅವರು ಮಾತ್ರವಲ್ಲ ಗಣತಿಗೆ ಬಂದಿದ್ದ ಶಿಕ್ಷಕರು ಕೂಡ ಗೊಂದಲಗೊಂಡಿದ್ದಾರೆ.

ಬಳಿಕ ಮನೆ ಸದಸ್ಯರ ಒಂದೊಂದು ಹೆಸರನ್ನು ನಮೂದಿಸಿ, ಪರೀಕ್ಷೆ ಮಾಡಲಾಗಿದೆ. ಈ ವಿಚಾರವನ್ನ ಡಾ.ಹರ್ಷ ಅವರು ಜಿಲ್ಲಾಧಿಕಾರಿಗಳ ಗಮನಕ್ಕೂ ತಂದಿದ್ದಾರೆ. ಮುಸ್ಲಿಮರ ಹೆಸರುಗಳನ್ನು ಡಿಲೀಟ್ ಮಾಡಿಸೋದಾಗಿ ಡಿಸಿ ಭರವಸೆಯನ್ನ ನೀಡಿದ್ದಾರೆ. ಆದ್ರೆ ಆಧಾರ್ ಕಾರ್ಡ್ ನಲ್ಲಿ ಈ ರೀತಿಯಾದಂತ ದೊಡ್ಡ ಮಿಸ್ಟೇಕ್ ಆಗುವುದಕ್ಕೆ ಕಾರಣವಾದರೂ ಏನು ಎಂಬ ಪ್ರಶ್ನೆ ಕಾಡುತ್ತಿದೆ. ಡಾ.ಹರ್ಷ ಫ್ಯಾಮಿಲಿ ಮಾತ್ರವಾ ಅಥವಾ ಇದೆ ರೀತಿಯ ಮಿಸ್ಟೇಕ್ ಇನ್ಯಾರಿಗಾದ್ರೂ ಆಗಿದ್ಯಾ ಎಂಬ ಪ್ರಶ್ನೆಯೂ ಸಹಜವಾಗಿ ಕಾಡುತ್ತಿದೆ. ಆಧಾರ್ ಕಾರ್ಡ್ ಒಂದು ಇದ್ರೆ ಸಾಕು, ಎಲ್ಲವೂ ಅದರೊಳಗೆ ಸಿಗುತ್ತದೆ ಎಂದೇ ಎಲ್ಲರೂ ನಂಬಿಕೆಯಿಂದ ಇರುತ್ತಾರೆ. ಈಗ ನೋಡಿದ್ರೆ ಆಧಾರ್ ಕಾರ್ಡ್ ನಲ್ಲಿ ಹೆಸರೇ ಬೇರೆ ಆಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now